Thursday, March 28, 2013

ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು

ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು
ಹೀರೆಮಠ ಸಂಸ್ಥಾನ ಭಾಲ್ಕಿ,
ಜಿಲ್ಲಾ ಬೀದರ (ಕನರ್ಾಟಕ ರಾಜ್ಯ)

 ಕನರ್ಾಟಕದ ಒಂದು ಮೂಲೆಯಲ್ಲಿರುವ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನ ತನ್ನ ವಿಧಾಯಕವಾದ ಜನಪರ-ಜೀವಪರ ಕಾರ್ಯಗಳ ಮೂಲಕ ದಕ್ಷಿಣ ಭಾರತದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿದೆ. ಸುಮಾರು ಎಂಟುನೂರು ವರ್ಷಕ್ಕೂ ಮೇಲ್ಪಟ್ಟ ಐತಿಹಾಸಿಕ ಪರಂಪರೆಯುಳ್ಳ ಈ ಮಠವು ಜನಪ್ರಿಯಗೊಂಡದ್ದು ನಡೆದಾಡುವ ದೇವರು ಕಾಯಕ ಪರಿಣಾಮಿಗಳೆಂದೇ ಹೆಸರಾಗಿದ್ದ ಡಾ. ಚನ್ನಬಸವಪಟ್ಟದ್ದೇವರಿಂದ. ಅವರ ಮುಂದಿನ ಪಟ್ಟಾಧಿಕಾರಗಳಾಗಿರುವ ಪೂಜ್ಯ ಡಾ|| ಬಸವಲಿಂಗ ಪಟ್ಟದ್ದೇವರು ಶ್ರೀ ಮಠದ ಸವರ್ಾಂಗಿಣ ಅಭಿವೃದ್ಧಿಗೆ ನಿಂತು, ಲಿಂಗಾಯತ ಧರ್ಮ (ಬಸವ ತತ್ವ ಆಧಾರಿತ)ಪ್ರಸಾರ, ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿಯ ವಿಕಾಸ ಮಾಡುತ್ತಲೇ ಸಾಮಾಜಿಕ, ಧಾಮರ್ಿಕ ಬೆಳವಣಿಗೆ ದುಡಿಯುತ್ತಿರುವರು. ಸಾಂಪ್ರದಾಯಿಕ, ಧಾಮರ್ಿಕ ಪರಂಪರೆಯ ಮಠವನ್ನು ಪ್ರಗತಿಪರ ಬಸವತತ್ವ ನಿಷ್ಠೆ ಮಠವಾಗಿಸಿದ ಕೀತರ್ಿ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ.  ಸಾಮಾಜಿಕ ಸಮತೆ, ಧರ್ಮಸಹಿಷ್ಣುತೆ ಶ್ರೀಗಳ ಜೀವನ ಸಿದ್ಧಾಂತವಾಗಿದ್ದು, ದೀನ-ದಲಿತರಿಗೆ, ಬಡವರಿಗೆ, ಅನಾಥರಿಗೆ ವಿಧವೆಯರಿಗೆ, ಕಲಾವಿದರಿಗೆ, ಆಶ್ರಯ ನೀಡುವ ಮೂಲಕ ಜನತೆಯ ಮಠವಾಗಿಸಿದ್ದಾರೆ.  ಅಂತೆಯೇ ಖ್ಯಾತ ಸಂಶೋಧಕರಾದ ಡಾ|| ಎಂ.ಎಂ. ಕಲ್ಬುಗರ್ಿಯವರು ಒಂದು ಕಡೆ ಬರೆಯುತ್ತ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ವಿರಕ್ತ ಮಠಗಳಿಗೆ ಇಳಕಲ್ ಮಠ ಮಾದರಿಎಂದಿರುವುದು ಅಕ್ಷರಶ: ಸತ್ಯವಾಗಿದೆ.
ಡಾ|| ಬಸವಲಿಂಗ ಪಟ್ಟದ್ದೇವರು:
 ಕೇವಲ ಉತ್ತಮ ವಿದ್ಯಾಭ್ಯಾಸಕ್ಕೆಂದೇ ಭಾಲ್ಕಿಯ ಹಿರೇಮಠಕ್ಕೆ ಆಗಮಿಸಿ ಸಾತ್ವಿಕ ಸಜ್ಜನಿಕೆ, ಸರಳತೆ ಮೈಗೂಡಿಸಿಕೊಂಡ ಕಾರಣಕ್ಕೆ ಅದೇ ಮಠದ ಪೀಠಾದಿಪತಿಯಾದವರು ಪೂಜ್ಯ ಶ್ರೀ.ಡಾ.ಬಸವಲಿಂಗ ಪಟ್ಟದ್ದೇವರು ಮೂಲತ: ಮೃದು ಸ್ವಭಾವದ ಮಾತ್ರಹೃದಯದವರಾಗಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಇವರ ಕಣ್ಣಲ್ಲಿ ನೀರು ಬರುತ್ತದೆ. ಮಠಾಧಿಪತಿಗಳಾದರೂ ಅಹಂ, ಸುಳಿಯದ ದಾಸೋಹ ಜೀವಿಗಳು. ಸ್ವಾಮಿಗಳಾದರೂ ಪೂಜೆಯನ್ನೆ ಹೇಳದೇ ಕಾಯಕ ತತ್ವವನ್ನು ಹೇಳುವರು. ಜನರೇ ಮಠಕ್ಕೆ ಬರಬೇಕೆಂದು ಆಪೇಕ್ಷ ಮಾಡದೇ ಜನತೆಯತ್ತ ಮಠ ಒಯ್ದವರು. ಹಿರೇಮಠ  ಎಂದರೆ ಅದು ಜನಸತ್ತೆಯ ಭಕ್ತರ ಮಠ. ಹಾಗಾಗಿ ಶ್ರೀಗಳಿಗೆ ಧರ್ಮ ಸಮಾಜ ಎರಡು ಕಣ್ಣು ಒಂದೇ ದೃಷ್ಠಿ,
 ಅನೇಕ ಮಠಾಧೀಶರಿಗೆ ಪೀಠದಿಂದ ಗೌರವ ಬರುತ್ತದೆ. ಆದರೆ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರಿಂದ ಪೀಠಕ್ಕೆ ಗೌರವಸಂದಿದ್ದು ಅವರ ರಚನಾತ್ಮಕ ಕಾರ್ಯದಿಂದಲೇ. ಅವರು ಪೀಠಾಧಿಪತಿಗಳಾಗಿ 25 ವರ್ಷ ಸಂದಿವೆ. ಅದರ ಸವಿನೆನಪಿಗಾಗಿ ಭಕ್ತರು ಪಟ್ಟಾಧಿಕಾರದ ಬೆಳ್ಳಿ ಹಬ್ಬ(2010) ಆಚರಿಸಿದ್ದು ಔಚಿತ್ಯ ಪೂರ್ಣವಾಗಿದೆ.
ಮಾನವೀಯತೆಯ ಆಗರ:

 ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ದೀನ ದಲಿತರ, ಬಡವರ ನಿರ್ಗತಿಕರ ಆಶಾಕಿರಣವಾಗಿದ್ದಾರೆ. ಹೆತ್ತವರಿಗೆ ಬೇಡವಾಗಿ ತಿಪ್ಪೆಪಾಲಾದ ಹತ್ತಾರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಯಾವುದೇ ಜಾತಿಭೇದ ಮಾಡದೇ ಸುಮಾರು 500 ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಡ ಮಕ್ಕಳಿಗಾಗಿ ಬೀದರದಲ್ಲಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದನಿಲಯ ತೆರೆದಿದ್ದಾರೆ. ಅನೇಕ ವಿಕಲಚೇತನರಿಗೆ, ವಿಧೆಯರಿಗೆ ಆಶ್ರಯ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಬದುಕಲ್ಲಿ ಮಂಗಳ ಕಾರ್ಯಗಳಿಂದ ವಂಚಿತರಾದ ವಿಧವಾ ಸ್ತ್ರೀಯರಿಗೆ ಉಡಿ ತುಂಬಿ ಗೌರವಿಸಿದ್ದಾರೆ. ಶ್ರೀಮಠದಲ್ಲಿ ದಲಿತರಿಗೆ ಪ್ರವೇಶ ನೀಡಿದ್ದಾರೆ. ಹೀಗಾಗಿ ಹಲವಾರು ಜೀವಕಾರುಣ್ಯದ ಕೆಲಸಗಳಿಂದ ಅವರು ಮಾನವೀಯತೆಯ ಆಗರವಾಗಿದ್ದಾರೆ.
ಶಿಕ್ಷಣ ತಜ್ಞರು:

 ಶಿಕ್ಷಣವೇ ಶಕ್ತಿ ಎಂದು ತಿಳಿದು, ಶಿಕ್ಷಣ ಮನುಷ್ಯರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಆಶಯದಿಂದ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಪೀಠ (1992) ಆರಂಭಿಸಿ ಆಮೂಲಕ ಸುಮಾರು 35 ಅಂಗ ಸಂಸ್ಥೆಗಳಿಂದ ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆ ತೆರೆದು ಹಳ್ಳಿಯ ಜನತೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಇಂದು ಸುಮಾರು ಹತ್ತುಸಾವಿರ ವಿದ್ಯಾಥರ್ಿಗಳು ಓದುತ್ತಿದ್ದಾರೆ. ಒಂದು ಸಾವಿರ ಶಿಕ್ಷಕರು ಕಾರ್ಯನಿರತರಾಗಿದ್ದಾರೆ. ಸಂಸ್ಕಾರ ಸಹಿತ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು.

ಸಾಮಾಜಿಕ ಸಾಮರಸ್ಯದ ಹರಿಕಾರರು:
ಧಮರ್ಾಧಿಕಾರಿಗಳಾದರೂ ಜಾತ್ಯತೀತರು, ಶ್ರೀಮಠದಲ್ಲಿ ಎಲ್ಲ ಜನಾಂಗಕ್ಕೂ ಮುಕ್ತ ಅವಕಾಶ ನೀಡಿದ್ದಾರೆ. ಅಂತಜರ್ಾತಿ ಮದುವೆ ಮತ್ತು ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವೇರ್ಪಡಿಸಿರುವರು. ಅಸ್ಪ್ರಶ್ಯ ಲಿಂಗಾಯತರೆಂದೇ ಕರೆಸಿಕೊಳ್ಳುವ ದಲಿತ ಮೂಲದ ಉರಿಲಿಂಗ ಪೆದ್ದಿ ಮಠಾಧೀಶರ ರಾಜ್ಯಮಟ್ಟದ ಸಮಾವೇಶ ಆಯೋಜಿಸಿದ ಕೀತರ್ಿ ಪೂಜ್ಯ ಶ್ರೀ ಡಾ|| ಬಸವಲಿಂಗಪಟ್ಟದ್ದೇವರಿಗೆ ಸಲ್ಲುತ್ತದೆ. ದೆಹಲಿಯಲ್ಲಿ ದಲಿತ ವರ್ಗದ ಜಾಟವಾ ಜನಾಂಗಕ್ಕೆ ಲಿಂಗದೀಕ್ಷೆ ನೀಡಿದ್ದಾರೆ. ಹೀಗೆ ಆರೋಗ್ಯವಂತ ಸಮಾಜ ಕಟ್ಟಲು ಧರ್ಮ ಸಹಿಷ್ಣುತೆಯ ಮೂಲಕ ಸಾಮಾಜಿಕ ಸಾಮರಸ್ಯ ಮೇರೆದವರು.
 
ಪರಿಸರ ಪ್ರೀತಿ:
ಪರಿಸರ ಸಂರಕ್ಷಣೆ ಎಂದರೆ ಜೀವಜಗತ್ತಿನ ಸಂರಕ್ಷಣೆ. ಮಾನವ ಜೀವನ ವಿಕಾಸದಲ್ಲಿ ಪರಿಸರದಲ್ಲಿ ಪರಿಸರವೇ ಮೇಲು. ಆದ್ದರಿಂದ ಕಲುಷಿತ ವಾತಾವರಣದಲ್ಲಿ ಪೂಜ್ಯ ಶ್ರೀ ಡಾ|
ಬಸವಲಿಂಗ ಪಟ್ಟದ್ದೇವರ ಸಸಿ ನೆಡುವ ಕಾರ್ಯಕ್ರಮ ಪ್ರತಿ ವರ್ಷ ಮಾಡುತ್ತ ಪರಿಸರ ಪ್ರೀತಿ ಮೆರೆಯುತ್ತಿದ್ದಾರೆ.
ರೈತ ಮಿತ್ರ:

 ಕೋಟಿ ವಿದ್ಯಾಗಿಂತ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಅರಿತು ರೈತ ಮೇಳ, ಕೃಷಿ ಸಂಬಂಧಿ ವಿಚಾರ ಸಂಕಿರಣವೇರ್ಪಡಿಸಿ ಎಲ್ಲ ತತ್ವಗಳಿಗೂ ನೇಗಿಲ ತತ್ವವೇ ಮೂಲವೆಂದು ಹೇಳಿ ರೈತಮಿತ್ರರಾಗಿದ್ದಾರೆ.
ಸಂಸ್ಕೃತಿ ಚಿಂತಕರು:
ಧರ್ಮಬೀರುವಾದ ಪೂಜ್ಯ ಶ್ರೀ ಡಾ|| ಬಸವಲಿಂಗಪಟ್ಟದ್ದೇವರು ಕಲಾರಾಧಕರೂ ಹೌದು. ಶ್ರೀಮಠದ ಮೂಲಕ ನಾಟಕೋತ್ಸವ, ನಗೆ ಹಬ್ಬ, ವಚನ ಕಂಠಸ್ಪಧರ್ೆ ನಡೆಸುವರು. ಸಂಗೀತ ಶಾಲೆ ಆರಂಭಿಸಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ದುಡಿಯುತ್ತಿದ್ದಾರೆ. ಪ್ರತಿವರ್ಷ ಉತ್ತಮ ಕಲಾವಿದರಿಗೆ, ಓದುಗರಿಗೆ, ಬರಹಗಾರರಿಗೆ, ಉತ್ತೇಜನ ಪೂರಕವಾಗಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಶಸ್ತಿ ಪುರಸ್ಕಾರ ನೀಡುವರು. ಹೀಗೆ ವಿಭಿನ್ನ ಆಯಾಮದ ಮೂಲಕ ಶ್ರೀಗಳು ಸಂಸ್ಕೃತಿ ಚಿಂತಕರಾಗಿದ್ದಾರೆ.
ಕನ್ನಡ ಜಂಗಮ:

ಬಹುದಿನದಿಂದಲೂ ಭಾಲ್ಕಿಮಠವನ್ನು ಕನ್ನಡ ಮಠವೆಂದೇ ಕರೆಯುವರು. ಹಾಗೇ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಮಾತೃ ಭಾಷೆಯಿಂದ ಮಾತ್ರ ಉತ್ತಮ ಗ್ರಹಿಕೆ ಸಾಧ್ಯವೆಂದು ಪ್ರತಿಪಾದಿಸುತ್ತಲೇ ಇಂಗ್ಲೀಷ ಮಾಧ್ಯಮ ಶಿಕ್ಷಣದ ವ್ಯಾಪಾರೀಕರಣದ ಮಧ್ಯೆ ಕನ್ನಡ ಮಾಧ್ಯಮ ಶಿಕ್ಷಣ ನೀಡಿ ಅದನ್ನು ಮಾನವೀಕರಣಗೊಳಿಸಿ ಕನ್ನಡ ಜಂಗಮರಾಗಿದ್ದಾರೆ.
ಬಸವತತ್ವ ಪ್ರಸಾರಕರು:
 ಆಧುನಿಕ ಜಗತ್ತಿಗೆ ಬಸವತತ್ವ ಅವಶ್ಯಕವಾದಂತೆ ಅದು ವಿಶ್ವಮಾನ್ಯವೂ ಆಗಿದೆ. ಅದು ಎಲ್ಲ ಕಡೆ ಪಸರಿಸಬೇಕು ಎಂಬ ಆಶಯದಿಂದ ಬಸವತತ್ವ ಪ್ರಸಾರಕ್ಕಾಗಿ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಬಸವತತ್ವ ಸಮಾವೇಶ, ಸಮ್ಮೇಳನ ಆಯೋಜಿಸಿದ್ದಾರೆ. ತೆಲುಗು ಮರಾಠಿಯಲ್ಲಿ ಬಸವತತ್ವ ಕುರಿತು ಹಲವಾರು ಕೃತಿಗಳನ್ನು ಶ್ರೀಮಠದಿಂದ ಪ್ರಕಟಿಸಿದ್ದಾರೆ.
ವ್ಯಕ್ತಿತ್ವ ವಿಕಾಸ:

ಆಧುನಿಕತೆ ಹೆಚ್ಚಾದಂತೆ ಮನುಷ್ಯರು ಯಾಂತ್ರಿಕವಾಗುತ್ತಿರುವುದರಿಂದ ವ್ಯಕ್ತಿಯ ಒಳಹೊರಗಿನ ಶುದ್ಧಿಕರಿಸಿಕೊಳ್ಳಬೇಕೆಂಬುದು ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಆಶಯ. ಅದಕ್ಕಾಗಿ ಮಕ್ಕಳಿಗಾಗಿ ಬೇಸಿಗೆ ರಜಾ ದಿನಗಳಲ್ಲಿ ಮತ್ತು ಪ್ರಜ್ಞಾವಂತ ನಾಗರಿಕರಿಗಾಗಿ ಶ್ರಾವಣ ವಚನ-ಪ್ರವಚನ, ವಿಶೇಷ ಉಪನ್ಯಾಸ ಶರಣ ಸಂಗಮ ಮೊದಲ್ಗೊಂಡು ಬಸವ ಧರ್ಮ ಪ್ರಸಾರ ಶಿಬಿರಗಳ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ನಾಂದಿ ಹಾಡಿರುವರು.
ಪುಸ್ತಕ ಸಂಸ್ಕೃತಿ:
 ಮಾಹಿತಿ ತಂತ್ರಜ್ಞಾನದಿಂದಾಗಿ ಪುಸ್ತಕ ಜಗತ್ತು ಹಳೆದಾಗಿ ಹಾಳಾಗುತ್ತಿದೆ. ಆದ್ದರಿಂದ ಬಸವಧರ್ಮ ಪ್ರಸಾರ ಸಂಸ್ಥೆ ಎಂಬ ಪ್ರಕಾಶನದ ಮೂಲಕ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ನಾಡಿನ ವಿದ್ವಾಂಸರಿಂದ ಮೌಲಿಕ ಕೃತಿಗಳನ್ನು ಬರೆಸಿ ಪ್ರಕಟಿಸುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸುತ್ತಿದ್ದಾರೆ.
ಸೃಜನಶೀಲ ಸಾಹಿತಿ:

 ಮಾನವತಾವಾದವನ್ನು, ವಿಚಾರವಾದವನ್ನು ಬಿತ್ತುವ ಬಹುಮುಖ್ಯ ಮಾಧ್ಯಮವೆಂದರೆ ಸಾಹಿತ್ಯ. ಹಾಗಾಗಿ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಹಲವಾರು ವೈಜ್ಞಾನಿಕ ಮನೋಭಾವದ, ವೈಚಾರಿಕ ನೆಲೆಗಟ್ಟಿನ ಹಲವಾರು ಸೃಜನಶೀಲ ಲೇಖನಗಳ ಪುಸ್ತಕ ಬರೆದಿರುವರು. ಆ ಪುಸ್ತಕಗಳ ಜನಪ್ರೀಯತೆ ಎಷ್ಟೆಂದರೆ, ಹಿಂದಿ, ಮರಾಠಿ, ತೆಲುಗು ಭಾಷೆಗಳಿಗೂ ಅನುವಾದವಾಗಿ ದ್ವಿತೀಯ, ತೃತೀಯ ಮುದ್ರಣಗಳನ್ನು ಕಂಡಿವೆ.
ವಚನ ವಿಶ್ವವಿದ್ಯಾಲಯ:

ಬಸವ ತತ್ವ ಕೇವಲ ಬೋಧನೆ ತತ್ವವಲ್ಲ. ಅದು ಬದುಕಿನ ತತ್ವ ಬಸವಧರ್ಮ ಆಚರಣೆಯ ಧರ್ಮ. ಅದರ ಅಂತಃಶಕ್ತಿಯಾದ ವಚನ ಸಾಹಿತ್ಯ ಜೀವ ಕಾರುಣ್ಯದಿಂದ ಕೂಡಿದೆ. ಅದರ ವ್ಯಾಪಕ ಅಧ್ಯಯನವಾಗಬೇಕು. ಬಹುಮುಖಿ ಅಂತರಶಿಸ್ತಿಯ ಸಂಶೋಧನಾ ಅಧ್ಯಯನವಾಗಬೇಕು. ಈ ದಿಸೆಯಲ್ಲಿ ಪೂಜ್ಯ ಶ್ರಿ ಡಾ|| ಬಸವಲಿಂಗ ಪಟ್ಟದ್ದೇವರು ವಚನ ವಿಶ್ವವಿದ್ಯಾಲಯವೊಂದು ಆರಂಭಿಸಲು ತೀಮರ್ಾನಿಸಿದ್ದಾರೆ. ಬಸವಾದಿ ಶರಣರ ಕಾಯಕ ನೆಲವಾದ, ಬಸವಕಲ್ಯಾಣದಲ್ಲಿ ತಮ್ಮ ಪಟ್ಟಾಧಿಕಾರದ ಬೆಳ್ಳಿ ಹಬ್ಬಕ್ಕೆ ಬಂದ ರೂಪಾಯಿ 25ಲಕ್ಷ ಹಮ್ಮಿಣಿ ಹಣದಿಂದ ಅದಕ್ಕೆ ಬೇಕಾಗುವ ಸೂಕ್ತ ಭೂಮಿ ಖರಿದಿಸಿದ್ದಾರೆ.
ಕೀತರ್ಿ ಕಳಸ:
ಬಸವತತ್ವ ಪ್ರಸಾರ ಸಮಾಜ ಸೇವೆ, ಶೈಕ್ಷಣಿಕ ಅಭಿವೃದ್ಧಿ, ಕನ್ನಡತ್ವದ ವಿಕಾಸ, ಹೀಗೆ ಹಲವಾರು ವಿಧಾಯಕ ಕಾರ್ಯಗಳ ಮೂಲಕ ಗಂಧದ ಕೊರಳಂತೆ ತಮ್ಮನ್ನು ಸವೇಸಿಕೊಂಡಿರುವ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಪ್ರಚಾರ ಪ್ರೀಯತೆಯಿಂದ ದೂರ ನಿಂತು, ಮೌನ ಸಾಧನೆಯಲ್ಲಿದ್ದಾರೆ. ಅದಾಗಿಯೂ ಇವರ ಸದ್ದಿಲ್ಲದ ಸತ್ಕ್ರಿಯೆಗಳಿಗೆ ಅರಸಿ ಬಂದ ಪ್ರಶಸ್ತಿ ಗೌರವಗಳು ನೂರಾರು. ಅದರಲ್ಲಿ ಮುಖ್ಯವಾಗಿ ಗುಲಬಗರ್ಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಪದವಿ, ಸುವರ್ಣ ಕನರ್ಾಟಕ ಏಕೀಕರಣ ಪುರಸ್ಕಾರ, ರಮಣ ಶ್ರೀ ಪ್ರಶಸ್ತಿ, ಕಲ್ಯಾಣ ಬಸವಶ್ರೀ ಪ್ರಶಸ್ತಿ, ಅಲ್ಲಮ ಪ್ರಭು ಸಿದ್ಧ ಸಂಸ್ಥಾನ ಮಠದಿಂದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕನರ್ಾಟಕ ರತ್ನ ಪ್ರಶಸ್ತಿ, ಸುರಭಿ ಪ್ರಶಸ್ತಿ ಹೀಗೆ ಹಲವಾರು ಗೌರವ ಪುರಸ್ಕಾರಗಳು ಬಂದಾಗ ಬಯಸಿ ಬಂದದ್ದು ಅಂಗಭೋಗ, ಬಯಸದೇ ಬಂದದ್ದು ಲಿಂಗಭೋಗ ಎಂಬಂತೆ ನಿಲರ್ಿಪ್ತ ಭಾವದಿಂದ ಸ್ವೀಕರಿಸಿ ಜನತೆಗೆ ಆದರ್ಶ ಪ್ರಾಯರಾಗಿ ನಾಡಿಗೆ ಕಳಸ ಪ್ರಾಯವಾಗಿದ್ದಾರೆ.
-  ಡಾ. ಬಸವರಾಜ ಬಲ್ಲೂರ ಬೀದರ
9738418468/9242440379

ವಚನ v/s ವಚನ ರಚನೆ


ವಚನ v/s ವಚನ ರಚನೆ
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯ ಯಾಗ ಸಮಬಾರದಯ್ಯ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮಬಾರದಯ್ಯ
ಕಪಿಲಸಿದ್ದಮಲ್ಲಿಕಾಜರ್ುನಯ್ಯ
    - ಸಿದ್ದರಾಮ
ವಚನ ಸಾಹಿತ್ಯದ ಮಹತ್ವ ಸಾರುವ ಈ ವಚನ ಅತ್ಯಂತ ಮಹತ್ವದ್ದು. ವಚನ ಎನ್ನುವುದು ಪಂಪ ಚಂಪೂಕಾವ್ಯವನ್ನು ಬರೆಯುವಾಗ ಗದ್ಯವೆನ್ನುವ ಅರ್ಥಸೂಚಕವಾಗಿ ಈ ಪದವನ್ನು ಬಳಸಿದ. ಮುಂದೆ ಚಂಪೂವಿಗೆ ವಿರುದ್ಧವಾಗಿ ವಚನವೆಂಬ ರೂಪವನ್ನು ಬಸವಾದಿ ಶರಣರು ರೂಢಿಗೆ ತಂದರು.
ಕನ್ನಡ ಸಾಹಿತ್ಯದ ಸುವರ್ಣಯುಗವೆಂದು ಕರೆಯಲ್ಪಡುವ 10ನೇ ಶತಮಾನದ ಸಾಹಿತ್ಯ ಮಾರ್ಗ ದೇಶೀಯ ಸಮನ್ವಯ, ಲೌಕಿಕ, ಆಗಮಿಕಗಳ ಧೋರಣೆ ಪಾಠ್ಯ ಗೇಯದ ಮಾದರಿ ಪ್ರಭು ಸಮ್ಮುಖ ಜನ ಸಮ್ಮುಖದ ನಿಲುವುಗಳೆಲ್ಲ ಮುರಿದು ಜನ ಸಾಮಾನ್ಯರು (ಶರಣರು) ಜನ ಸಾಮಾನ್ಯರಿಗಾಗಿ (ಶರಣರಿಗಾಗಿ) ಜನ ಸಾಮಾನ್ಯರೇ (ಶರಣರೇ) ಬರೆದಿದ್ದು ವಚನವೆಂಬ ರೂಪ ತಾಳಿತ್ತು. ಆದರೆ ವಚನ ಕೇವಲ ಒಂದು ಸಾಹಿತ್ಯ ರೂಪವಾಗಿ ಬರೆಯದೇ ಜೀವನ ವಿಧಾನವಾಗಿ ಬರೆದದ್ದು ಚಳುವಳಿಯ ಅಂತಃಸತ್ವವಾಗಿ ರೂಪತಳೆದಿದ್ದು, ಸತ್ಯ ಶುದ್ಧವಾದ ಬದುಕು ಕಟ್ಟಲು ನೆರವಾದುದ್ದು ವಚನ. ಅಂದರೆ ನಡೆ ನುಡಿ ಒಂದಾದ ಅನುಭಾವದ ನುಡಿಗಳೇ ವಚನ. ಹಾಗಾಗಿ ಶರಣರು ಬರೆದದ್ದು ಮಾತ್ರ ವಚನ ಎಂದು ಕರೆಸಿಕೊಳ್ಳುತ್ತದೆ. ವಚನ ಎಂದರೆ ಹುಸಿ ಹೊದ್ದದ ನುಡಿಗಳು ಎಂದರ್ಥ. ಇದು ಮಾತು ಮೀರಿದ ನಡೆ ಪೂರೈಸಿದ ನಿಲುವಾಗಿದೆ. ವಚನ ಎಂಬ ಮೂರಕ್ಷರಗಳು ವ - ವಾಚನ (ಮಾತು) ಚ - ಚಲನೆ (ನಡೆ) ನ - ನಯನ (ನೋಟ) ಸಾತ್ವಿಕ ನಡೆನುಡಿನೋಟಗಳ ಸಂಗಮವೇ ವಚನ.
ವಚನವೆಂದರೆ ( ಬಸವಪಥ, ಬಸವಜಯಂತಿ ವಿಶೇಷ ಸಂಚಿಕೆಯಲ್ಲಿ )ಹೀಗೆ ಅರ್ಥವಿದೆ.
ವ್ಯಾಖ್ಯಾನ (ಭಾವಾಂಗಳು),
ಧರ್ಮ (ವಚನ ಧರ್ಮಸಾರ),
 ಶಾಸ್ತ್ರ (ವಚನ ಶಾಸ್ತ್ರ ರಹಸ್ಯ),
ಅನುಭಾವ,
ರೂಪ (ಈಠಡಿಟ) (ವಚನ, ಗದ್ಯ, ಪದ್ಯ, ತ್ರಿಪದಿ, ಶಾಸನ,)
ವಚನ (ಚಂಪೂ, ಯಕ್ಷಗಾನ, ಬಯಲಾಟ, ಬಿಡಿ ಮುಕ್ತಕ)
 ಭಾಷೆ (ಮಾತುಕೊಡು),
ಸೂಳ್ನುಡಿ,
 ಗೀತೆ (ಶಿವದಾಸ ಗೀತಾಂಜಲಿ),
 ತ್ರಿಪದಿ,
ಗದ್ಯಸ್ತ್ರೋತ್ರ,
 ಚಳುವಳಿ,
ಮುಕ್ತ ಭಾವ (ಮುಕ್ತಕ),
ಕನ್ನಡ ಉಪನಿಷತ್ತು,
 ಆತ್ಮತೃಪ್ತಿ,
ಶುದ್ಧ ನಡೆಯವನ ನೇರ ನುಡಿ,
ನಡೆ-ನುಡಿ ಏಕಗೊಳಿಸಿಕೊಂಡವನ ಬದುಕು,
 ಸತ್ಯಶುದ್ಧ ಕಾಯಕ ಜೀವಿಗಳ ಅಭಿವ್ಯಕ್ತಿ.
 ಹೀಗೆ ವಚನ ಎನ್ನುವುದಕ್ಕೆ ವಿಶೇಷ ಅರ್ಥಗಳಿವೆ. ಆದ್ದರಿಂದ ಶರಣರು ಬರೆದದ್ದು ಮಾತ್ರ ವಚನವಾಗುತ್ತದೆ ಉಳಿದವು ವಚನ ರಚನೆಯಾಗುತ್ತವೆ.
ಅಂಕಿತ
ವಚನ ಸಾಹಿತ್ಯದ ವಿಶೇಷತೆಯೆಂದರೆ ಬಸವಾದಿ ಶರಣರು ಬಳಸಿದ ವಚನಾಂಕಿತಗಳು. ಕೇವಲ ಹೆಸರಿನ ರೂಪವಾಗದೆ ಬರೆದವರ ಆತ್ಮ ಸಂಗಾತಿಗಳಾಗಿವೆ. ಆತ್ಮ ನಿವೇದನೆಗೆ ಸಾಧನಗಳಾಗಿವೆ. ಅಭಿವ್ಯಕ್ತಿಯ ಮಾಧ್ಯಮವಾಗಿವೆ. ವಚನಾಂಕಿತಗಳು ಸ್ಥಾವರವಲ್ಲ. ವಸ್ತು ಚೈತನ್ಯದ ಸಮನ್ವಯ. ವ್ಯಷ್ಟಿ ಸಮಷ್ಟಿಯ ಪ್ರತೀಕ.
ವಚನ ಪರಂಪರೆ
ವಚನ ಸಾಹಿತ್ಯವು ಅಪೂರ್ವಸಾಹಿತ್ಯ ರೂಪ. ರಾಜಪ್ರಭುತ್ವದ ಯಜಮಾನ್ಯ ವ್ಯವಸ್ಥೆಯಲ್ಲಿ ದೇವರು, ಧರ್ಮ, ಸಾಹಿತ್ಯಗಳಿಂದ ಹೊರಗುಳಿದ ಜನ ಸಾಮಾನ್ಯರು ವಚನಗಳ ಮೂಲಕ ದೇವರ ವಾದ ಪ್ರಶ್ನಿಸುವ ಮನು ಪ್ರಣಿತವಾದ ಧರ್ಮವನ್ನು ನಿರಾಕರಿಸುವ ಜೀವನಮೂಲ ಆಧಾರಿತ ಸಾಹಿತ್ಯವನ್ನು ರಚಿಸುವ ಮೂಲಕ ಒಂದು ಪರಿಪೂರ್ಣ ಸಾಹಿತ್ಯ ರೂಪಕೊಟ್ಟರು. (ವಚನಗಳು ಗದ್ಯವು ಹೌದು, ಪದ್ಯವು ಹೌದು, ಶಾಸ್ತ್ರವು ಹೌದು, ಸಾಹಿತ್ಯವು ಹೌದು) ಇಂತಹ ಸಾಹಿತ್ಯವನ್ನು ಬಸವಪೂರ್ವ ಯುಗ, ಬಸವ ಯುಗ, ಬಸವೋತ್ತರ ಯುಗ ಮತ್ತು ಆಧುನಿಕ ಯುಗವೆಂದು ಕರೆವ ವಾಡಿಕೆ  ಬೆಳೆದಿದೆ. ವಾಸ್ತವವಾಗಿ ಬಸವಪೂರ್ವ ಯುಗವೆಂದರೆ ಬಸವಣ್ಣನವರ ಹಿರಿಯ ಸಮಕಾಲೀನರ ಕಾಲ. (ದಾಸಿಮಯ್ಯ ಇತ್ಯಾದಿ) ಬಸವ ಯುಗ ವಚನ ಸಾಹಿತ್ಯದ ಸಮೃದ್ಧಿಯ ಕಾಲ. ಬಸವೋತ್ತರ ಯುಗ ವಚನ ಸಾಹಿತ್ಯದ ಸಂಗ್ರಹ, ಸಂಕಲನದ ಯುಗ. ಆಧುನಿಕ ಯುಗ ವಚನ ಸಾಹಿತ್ಯದ ಅಧ್ಯಯನದ ಯುಗ ಅಥವಾ ಪ್ರಭಾವಿತ ಯುಗ. ವಚನಗಳು ಸಂಸ್ಕೃತಕ್ಕೆ ಪಯರ್ಾಯವಾಗಿ ಹುಟ್ಟಿಕೊಂಡಿದ್ದು ಸರಳ ನಿರೂಪಣೆಗೆ ಒಳಗಾಗಿದ್ದರಿಂದ ಬಹುಕಾಲದವರೆಗೆ ಜನಮಾನಸದಲ್ಲಿ ಬೇರೂರಿದೆ ನಿಜ ಆದರೆ ಆ ಮಾದರಿಯ ವಚನಗಳು ವಚನಗಳಾಗುವುದಿಲ್ಲ, ವಚನ ರಚನೆಗಳಾಗುತ್ತವೆ.
ಮುಖ್ಯ ಕಾರಣಗಳೆಂದರೆ :
* ವಚನಕಾರರು ನಡೆ-ನುಡಿ ಒಂದಾಗಿದ್ದ ಸತ್ಯ ಶುದ್ಧ ಕಾಯಕ ಜೀವಿಗಳಾಗಿದ್ದರು. ಆದ್ದರಿಂದ ಅವರ ಅಂತರಂಗ ಬಹಿರಂಗ ಶುದ್ಧವಾಗಿತ್ತು.
- ಇಂದು ಅನೇಕರಿಗೆ ಬದುಕು ಬರಹ ಸಂಬಂಧವಿಲ್ಲ.
* ಶರಣರಿಗೆ ಸಾಹಿತ್ಯ ಬರೆವ ಉದ್ದೇಶವಿರಲಿಲ್ಲ. ಧರ್ಮ ಕಟ್ಟುವ ಉದ್ದೇಶವಿರಲಿಲ್ಲ. ಉತ್ತಮ ಮನುಷ್ಯರ ಉತ್ತಮ ಸಮಾಜ ಕಟ್ಟುವಾಗ ಸಾಹಿತ್ಯ ಧರ್ಮ ಉಪೋತ್ಪಾದನೆಗಳಾಗಿ ಹುಟ್ಟಿಕೊಂಡಿವೆ. ಆದ್ದರಿಂದ ಸಾಮಾಜಿಕ ಬದ್ಧತೆ ಪ್ರಾಯೋಗಿಕ ತಿಳುವಳಿಕೆ ಅನುಭವದ ದ್ರವ್ಯ ಅವುಗಳಲ್ಲಿವೆ. ಬದುಕೇ ಒಂದು ಹಾಡು.
- ಕಾವ್ಯ ಒಂದು ಸಾಹಿತ್ಯ ರೂಪವಾಗಿದ್ದು ಅದು ಪದ ಸಮೂಹವಾಗಿರುತ್ತದೆ. (ಶಬ್ದಾರ್ಥ ಸಹಿತೌ ಕಾವ್ಯಂ....) ನಿದರ್ಿಷ್ಟ ವಸ್ತು ವಿಷಯ ಒಳಗೊಂಡಿರುತ್ತದೆ. ನೈಜ ಜೀವನದಿಂದ ಹೊರಗಿರಬಹುದು (ಕವಿ ಸಮಯ). ಹಾಗಾಗಿ ಅನುಭವ ಜನ್ಯವಿರದೇ ವಚನಗಳಾಗಲಾರವು.
* ಒಕ್ಕಲಿಗ ಮುದ್ದಣ್ಣ, ಅಂಬಿಗರ ಚೌಡಯ್ಯ ಮೊದಲಾದ ಕಾಯಕ ಜೀವಿಗಳು ವೃತ್ತಿ ಅನುಭವದಿಂದ ವಚನ ಬರೆದರು.
- ಹೊಲಗಳನ್ನು ನೋಡದವರೂ, ಆಕಳಿಗೂ ಎತ್ತಿಗೂ ವ್ಯತ್ಯಾಸ ತಿಳಿಯದವರೂ ರೈತರ ಅತ್ಮಹತ್ಯೆ ಕುರಿತು ಬರೆಯುವರು.
* ವಚನಗಳು ಅನುಭಾವ ಜನ್ಯ.
- ಆಧುನಿಕ ಕಾವ್ಯ ಶಬ್ದ ಜಾಲ.
* ಶರಣರು ವೇದೋಪನಿಷತ್ತು, ಮನುಪ್ರಣಿತ ಧರ್ಮ, ದೇವಾಲಯ, ದೇವರು, ಪುನರ್ಜನ್ಮ, ಕರ್ಮಸಿದ್ಧಾಂತ, ಜ್ಯೋತಿಷ್ಯ, ಹಣೆಬರಹ, ಜಾತಿ,ಮತ, ಪಂಥ, ವರ್ಗ, ವರ್ಗಭೇದ, ಸಾರಸಗಟಾಗಿ ನಿರಾಕರಿಸಿದ ಶರಣರು ಬರಿ ಹೇಳಲಿಲ್ಲ ಬದುಕಿ ತೋರಿದರು.
- ಪ್ರಜಾಪ್ರಭುತ್ವ ವ್ಯವಸ್ಥೆ ಮಧ್ಯೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಮಧ್ಯದಲ್ಲಿರುವ, ಇವೆಲ್ಲ ಪಾಲಿಸುತ್ತಲೆ ವೇದಿಕೆ ಶೂರರಾಗಿ ಹೇಳುತ್ತಲೇ ವಚನ ಪಾರಾಯಣದಿಂದ ಕರ್ಮ ಫಲಿಸುವ ಕುರಿತು ಹೇಳುವುದು. ಜೀವನ ತತ್ವಗಳನ್ನು ಎಲ್ಲಾ ಕರ್ಮ ತತ್ವಗಳಿಗೆ ಅನ್ವಯಿಸುವುದು ವಚನ ಸಾಹಿತ್ಯದ ಕೊಲೆಯಾಗುತ್ತದೆ.
 ಹದಿನೈದನೇ ಶತಮಾನದ ವಚನಕಾರರೆಂದು ಕರೆಸಿಕೊಳ್ಳುವ ಬಹುತೇಕ ವಚನಕಾರರು ವೇದಪ್ರಾಮಾಣ್ಯ, ಪುನರ್ಜನ್ಮ ಸ್ವೀಕರಿಸಿದ್ದಾರೆ. (ಷಣ್ಮುಖಶಿವಯೋಗಿ ಇದಕ್ಕೆ ಅಪವಾದ) ಅನೇಕರಿಗೆ ಸೈದ್ಧಾಂತಿಕ ಸ್ವಷ್ಟತೆಇಲ್ಲ. ಅನೇಕರು ಪವಾಡಗಳನ್ನು ಬಿತ್ತರಿಸಿದ್ದಾರೆ. ವಚನಕಾರರ ನಂತರ ಬಂದ ಬಹುತೇಕರು ಕಾಯಕಜೀವಿಗಳಲ್ಲ. (ಕಾಯಕವೆಂದರೆ ಸತ್ಯಶುದ್ಧತೆ ಹೊಂದಿರಬೇಕು, ಭ್ರಷ್ಟಾಚಾರಿಗಳಾಗಿರಬಾರದು, ಹೆಚ್ಚು ಆದಾಯ ಪಡೆಯಬಾರದು, ಉಳಿದದ್ದು ಸಮಾಜಕ್ಕೆ  (ದಾಸೋಹ) ವಿನಿಯೋಗಿಸಬೇಕು.
* ಶರಣರಿಗೆ ಕಾಯಕ ಸಿದ್ಧಾಂತದ ಸಾಮಾಜಿಕ ಬದ್ಧತೆ ಇತ್ತು. ಹಾಗಾಗಿ ಬದುಕುವುದಕ್ಕಾಗಿ ವಚನ ಬರೆದರು.
- ಬರೆಯುವುದಕ್ಕಾಗಿ ವಚನ ರಚನೆಗಳಿವೆ.
 ಈ ಎಲ್ಲಾ ಕಾರಣಗಳಿಂದ ಆಧುನಿಕ ವಚನಗಳು ವಚನಗಳಲ್ಲ. ವಚನ ರಚನೆಗಳಾಗುತ್ತವೆ. ಆಧುನಿಕ ವಚನಕಾರರು ವಚನಕಾರರಲ್ಲ. ವಚನ ರಚನೆಕಾರರಾಗುತ್ತಾರೆ. ಈ ನಿಟ್ಟಿನಲ್ಲಿ ಸಾತ್ವಿಕ ಚಚರ್ೆಯ ನಿರ್ಣಯದ ಅಗತ್ಯವಿದೆ ಎಂದು ಭಾವಿಸಿದ್ದೇನೆ.
- ಡಾ. ಬಸವರಾಜ ಬಲ್ಲೂರು

 

Tuesday, March 12, 2013

ಕನ್ನಡ ಸಂರಕ್ಷಣೆ : ಭಾಲ್ಕಿ ಹಿರೇಮಠ

ಕನ್ನಡ ಸಂರಕ್ಷಣೆ : ಭಾಲ್ಕಿ ಹಿರೇಮಠ

ಡಾ. ಬಸವರಾಜ ಬಲ್ಲೂರ

ಮಠಗಳೆಂದರೆ ಮತ - ಧರ್ಮ ಸಂರಕ್ಷಣೆ ಎಂಬ ಸಿದ್ಧನಂಬಿಕೆಗಳನ್ನು ಮುರಿದು ನಾಡು ನುಡಿ ಸಂರಕ್ಷಣೆಗೆ ನಿಂತು. ಕನ್ನಡ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆಂದು ಬಲವಾಗಿ ಪ್ರತಿಪಾದಿಸಿದ್ದೇ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಅದರ ಪೀಠಾಧಿಪತಿಗಳಾಗಿದ್ದ ಡಾ. ಚೆನ್ನಬಸವ ಪಟ್ಟದೇವರು.
ಬಹು ಪ್ರಾಚೀನತೆ ಹೊಂದಿರುವ  ಭಾಲ್ಕಿ ಹಿರೇಮಠ ಸಂಸ್ಥಾನ ಮೂಲತಃ ಸಂಪ್ರದಾಯಶೀಲ ಮಠ. ಅದು ವೈಚಾರಿಕತೆಗೆ ತೆರೆದುಕೊಂಡಿದ್ದು, ಜನಪ್ರಿಯತೆಗೆ ಬಂದದ್ದು ಡಾ. ಚೆನ್ನಬಸವ ಪಟ್ಟದೇವರಿಂದ. ಈ ಜನಪ್ರಿಯತೆ ತಂದುಕೊಟ್ಟಿದ್ದೆ ಶ್ರೀಗಳ ಕನ್ನಡ ಪ್ರೀತಿಯಿಂದ.
ಡಾ. ಚೆನ್ನಬಸವ ಪಟ್ಟದೇವರಿಗೆ ಕನ್ನಡ ಕೇವಲ ಭಾಷೆಯಾಗಿ ಕಾಣಲಿಲ್ಲ ಬದಲಿಗೆ ಕನ್ನಡವೆಂದರೆ ಜನತೆ ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ, ನಂಬಿಕೆ, ಸಂಸ್ಕೃತಿ,  ಒಟ್ಟು ಜೀವನ ವಿಧಾನ. ಆದ್ದರಿಂದ  ಕನ್ನಡವೆಂದರೆ ಜನತೆಯ ಬದುಕು ಎಂದು ಭಾವಿಸಿ ಕನ್ನಡದ ಉಳಿವೆಂದರೆ ಅದು ಕನ್ನಡಿಗರ ಉಳಿವೆಂದು ತಿಳಿದರು. ಆ ಕಾರಣಕ್ಕಾಗಿಯೇ ಹ್ಶೆದ್ರಾಬಾದ ಕನರ್ಾಟಕ ವಿಮೋಚನೆ, ಕನ್ನಡ ಏಕೀಕರಣ, ಕನರ್ಾಟಕದ ಪುನರ್ ನಾಮಕರಣಕ್ಕಾಗಿ ಹೋರಾಡಿದರು. ಈ ಹೋರಾಟಕ್ಕೆ ಕನ್ನಡ ಮಾಧ್ಯಮ  ಶಿಕ್ಷಣವನ್ನು ಅಸ್ತ್ರವಾಗಿ ಬಳಸಿದರು. ಅದಕ್ಕೆ ಕಾರಣವೂ ಇತ್ತು. ಡಾ. ಚೆನ್ನಬಸವ ಪಟ್ಟದೇವರು. ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದ ಮೇಲೆ 1924ರಲ್ಲಿ ನಡೆದ ಭಾಲ್ಕಿ ಹಿರೇಮಠದ ಪೀಠಾರೋಹಣದಂದು. ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿದ್ದು, ಜೊತೆಗೆ ಮಠಕ್ಕಾಗಿ ನೀನಲ್ಲ, ನಿನಗಾಗಿ ಮಠವಿದೆ ಈ ಭಾಗದಲ್ಲಿ ಶಿಕ್ಷಣ, ಶರಣತತ್ವ, ದೀನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಜವಾಬ್ದಾರಿಗಳನ್ನು ಹೋರಿದರು. ಆದರೆ ಮಠದ ವ್ಯವಸ್ಥೆ ಶಿಥಿಲವಾಗಿತ್ತು.  ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು. ಇದೆಲ್ಲ ಒಂದು ವರ್ಷದಲ್ಲಿ ಸರಿಪಡಿಸಿ ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಆಧೀನಕ್ಕೆ ತಂದರು, ಕಾರೆಮುಂಗಿ, ಮೋರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತಃ ತಾವೆ ಮಾಡಿದರು.


ಕನ್ನಡ ಮಾಧ್ಯಮ ಶಿಕ್ಷಣ
 ಮುನುಷ್ಯರ ಮೂಲಭೂತ ಅಗತ್ಯಗಳೆಂದರೆ ಅನ್ನ, ಅರಿವೆ, ಆಶ್ರಯ, ಅರಿವು ಮತ್ತು ಔಷಧ. ಇವನ್ನು ಲಿಂಗಾಯತ ಪರಿಭಾಷೆಯಲ್ಲಿ ಶಿವ ಪಂಚಾಯತಗಳೆಂದು ಕರೆವರು ಇವುಗಳಲ್ಲಿ ಅರಿವು ಅತ್ಯಂತ ಮುಖ್ಯವಾದದ್ದು. ಆಧುನಿಕ ಪರಿಭಾಷೆಯಲ್ಲಿ ಅರಿವು ಎಂದರೆ ಶಿಕ್ಷಣ ಎಂದರ್ಥ : ಶಿಕ್ಷಣವು ಮನುಷ್ಯರ ಮೌಢ್ಯತೆಗಳನ್ನು ಕಳೆಯುವುದರೊಂದಿಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿಯೂ ನಿಲ್ಲಬಲ್ಲದು. ಶಿಕ್ಷಣದಿಂದ ಸಾಮಾಜಿಕ ಅರಿವು ತರಲು ಸಾಧ್ಯ ಎಂಬುದನ್ನು ಮನಗಂಡ ಪಟ್ಟದ್ದೇವರು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರು. ಈ ಉದ್ದೇಶದ ಹಿಂದೆ ಯಾವುದೆ ಲಾಭದ ಅಥವಾ ಹಣಗಳಿಸುವ ಉದ್ದೇಶವಿರಲಿಲ್ಲ. ಬದಲಾಗಿ ಶಿಕ್ಷಣ ಎಲ್ಲರ ಸ್ವತ್ತಾಗಬೇಕು ಮತ್ತು ಎಲ್ಲ ಸಮುದಾಯದವರಿಗೂ ದಕ್ಕಬೇಕು ಎಂಬ ನಿಲುವು ಅವರದಾಗಿತ್ತು.
1936ರಲ್ಲಿ ಇಂದಿನ ಆಂಧ್ರಪ್ರದೇಶ ನಾರಾಯಣಖೇಡ ತಾಲೂಕಿನ ಮೋಗರ್ಿ ಗ್ರಾಮದಲ್ಲಿ ಶಾಂತಿವರ್ಧಕ ಗುರುಕುಲಾಶ್ರಮ ಎಂಬ ಹೆಸರಿನಿಂದ ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಭಾರತ ಹಳ್ಳಿಗಳ ರಾಷ್ಟ್ರ, ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರವೆಂಬ ಮಾತಿನಂತೆ ಒಂದು ಸಣ್ಣ ಗಡಿಭಾಗದ ಹಳ್ಳಿಯಿಂದ ಅರಿವಿನ (ಶಿಕ್ಷಣ) ಅಂದೋಲನ ಆರಂಭಿಸಿದರು. ಈ ಪ್ರಾಂತ ಅಂದು ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದರಿಂದ ಉದರ್ು ಆಡಳಿತ ಭಾಷೆಯಾಗಿತ್ತು. ಆದ್ದರಿಂದ ಹೊರಗೆ ಉದರ್ು ಫಲಕ ಉದರ್ು ಪಾಠಶಾಲೆ ಎಂದು ಬರೆಯಿಸಿ ಒಳಗೆ ಕನ್ನಡ ಕಲಿಸುತ್ತಿದ್ದರು. ಮೋಗರ್ಿ ಶಾಲೆಗೆ ಕೊಪ್ಪಳದ ಖಾನಾಪೂರ ಶಾಸ್ತ್ರಿಗಳು ಮುಖ್ಯ ಗುರುಗಳಾಗಿದ್ದರು. ನಾರಾಯಣಖೇಡದ ನಾಗಶೆಟ್ಟೆಪ್ಪ ಶೆಟಕಾರ ಅಧ್ಯಕ್ಷರಾಗಿದ್ದರು. ಅಲ್ಲಿ ನೂರಾರು ವಿದ್ಯಾಥರ್ಿಗಳು ಕಲಿಯುತ್ತಿದ್ದರು. ಅಲ್ಲಿ ಕಲಿತವರು ಉನ್ನತ ಹುದ್ದೆಗೆ ಏರಿದರು. ಆದರೆ ಈ ಕನ್ನಡ ಶಾಲೆ ಜನರ ತೀವ್ರ ವಿರೋಧಕ್ಕೂ ಒಳಗಾಯಿತು. ವ್ಯವಹಾರ ಭಾಷೆ ಉದರ್ುವಾದ್ದರಿಂದ ಜನ ಸಹಜವಾಗಿ ಉದರ್ು ಕಲಿಸಲು ದುಂಬಾಲು ಬಿದ್ದರು. ಜೊತೆಗೆ ಕನ್ನಡ ಅಂದು ಜಂಗಮರ ಭಾಷೆಯಾದ್ದರಿಂದ ತಮ್ಮ ಮಕ್ಕಳು ಕನ್ನಡ ಕಲಿತು ಜಂಗಮರಾಗಿ ಪಂಚಾಂಗ (ಜೋತಿಷ್ಯ) ಹೇಳಬೇಕೆ? ಎಂದು ಪ್ರಶ್ನಿಸುತ್ತಿದ್ದರು. ಆಗ ಜನರಿಗೆ ಕನ್ನಡದೊಂದಿಗೆ ಉದರ್ು ಮರಾಠಿ ಸಹ ಕಲಿಸುತ್ತೇವೆಂದು ಪಟ್ಟದ್ದೇವರು ತಿಳಿ ಹೇಳುತ್ತಿದ್ದರು. ಇದರಿಂದ ನಿಜಾಮ ಸಕರ್ಾರದ ಪೊಲೀಸರು ಬಂದು ಶಾಲೆ ತಪಾಸಣೆ ಮಾಡಿದಾಗ ಶಾಲೆಯಲ್ಲಿದ್ದ ಮಹಾತ್ಮಗಾಂಧಿ, ನೆಹರು ವಿವೇಕಾನಂದ, ಬಸವಣ್ಣ ಮೊದಲದವರ ಭಾವಚಿತ್ರಗಳನ್ನು ಕಿತ್ತೆಸೆದು ತಕರಾರು ಮಾಡಿದರು. ನೀವು ಸರಕಾರಕ್ಕೆ ದ್ರೋಹ ಮಾಡುತ್ತಿರುವಿರಿ ಎಂದು ಬೆದರಿಸಿದಾಗ ಬಡ ಜನತೆಗೆ ಶಿಕ್ಷಣ ನೀಡಿ ಸರಕಾರವನ್ನು ಬಲಪಡಿಸುತ್ತೇವೆಂದು ಹೇಳಿ ಪೊಲೀಸರ ಮನವೊಲಿಸಿದರು. ಇದರ ಮುಂದುವರಿಕೆಯಾಗಿ ಕಮಲನಗರ, ಭಾಲ್ಕಿ ಹೊಳಸಮುದ್ರ, ಬಳತ್ ಮೊದಲಾದೆಡೆ ಕನ್ನಡ ಶಾಲೆಗಳು ಆರಂಭವಾದವು. ಪಟ್ಟದ್ದೇವರು ಹೀಗೆ ಅರಿವಿನ ಆಗರ ತೆರೆದರು. ಕಾಯಕ ನಿಷ್ಠೆ - ದಾಸೋಹ ಭಾವ ಹೊಂದಿದ್ದ ಶ್ರೀಗಳು ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನೂ ಆರಂಭಿಸಿದರು. ಆಥರ್ಿಕವಾಗಿ ಮಠ ದುರ್ಬಲವಾದ್ದರಿಂದ ಮಕ್ಕಳ ಪ್ರಸಾದ, ಶಿಕ್ಷಕರ ವೇತನ ಏಕಕಾಲಕ್ಕೆ ಭರಿಸುವ ಶಕ್ತಿ ಇರಲಿಲ್ಲ. ಅದ್ದರಿಂದ ಮುಷ್ಟಿಫಂಡ್ ಆರಂಭಿಸಿದರು. ಪ್ರತಿಯೊಬ್ಬರು ಬೀಸುವಾಗ ಒಂದು ಮುಷ್ಠಿ ಕಾಳು ತೆಗೆದಿರಿಸುವಂತೆ ಕೋರಿ ಪ್ರಸಾದ ದಾಸೋಹ ನೆರವೇರಿಸಿದರು. ಅನೇಕ ಸಂದರ್ಭಗಳಲ್ಲಿ  ಪೂಜ್ಯರೇ ಸ್ವತಃ ಗ್ರಾಮ ಗ್ರಾಮ ಅಲೆದಾಡಿ ಮುಷ್ಠಿಫಂಡ್ ತಂದ ಉದಾಹರಣಿಗಳಿವೆ. ಹೀಗೆ ಪ್ರತಿ ಕಾರ್ಯದಲ್ಲಿಯೂ ತಮ್ಮನ್ನು ಮನಸಾ ತೊಡಗಿಸಿಕೊಳ್ಳುತ್ತಿದ್ದರು.
1943ರಲ್ಲಿ ಮೋರಗಿ ನೀರಿನ ಅಭಾವಕ್ಕೆ ಒಳಗಾಗಿ ಅಲ್ಲಿನ ಶಾಲೆಯನ್ನು ಔರಾದ ತಾಲೂಕಿನ ಖೇಡ ಸಂಗಮದ (ದೇವಣಿ ಮಾಂಜ್ರಾ ನದಿಗಳ ಸಂಗಮ) ದಡಕ್ಕೆ ಸ್ಥಳಾಂತರಿಸಿದರು. ವಿಶಾಲವಾದ ದಿಣ್ಣಿಯ ಮೇಲೆ ಶಾಲೆ ಕಟ್ಟಡ ಆರಂಭವಾದಾಗ ಸ್ವತಃ ಪಟ್ಟದೇವರೇ ಕಲ್ಲು - ಮಣ್ಣು ಹೊತ್ತು ಶಾಲಾ ನಿಮರ್ಾಣ ಪೂರ್ಣಗೊಳಿಸಿದರು. ಮುಂದೆ ರಜಾಕಾರ ಹಾವಳಿ ಎದುರಾದಾಗ ಹೆದರದೇ ವಿದ್ಯಾಥರ್ಿಗಳನ್ನು ಸೊಲ್ಲಾಪೂರಕ್ಕೆ ಕರೆದೊಯ್ದರು. ಅಲ್ಲಿ ವಾರದ ಬಾಬಾ ಸಾಹೇಬ, ಡಾ|| ಜಯದೇವಿ ತಾಯಿ ಲಿಗಾಡೆ ಮತ್ತು ಕುಂಟೋಜಿ ಮಠದ ಆಶ್ರಯ ಪಡೆದರು. ರಜಾಕಾರ ಹಾವಳಿ ನಿಂತ ಮೇಲೆ ಪುನಃ ಸಂಗಮಕ್ಕೆ ವಿದ್ಯಾಥರ್ಿಗಳನ್ನು ಕರೆ ತಂದರು. ಸಂಗಮದಲ್ಲಿ ಮಹಾಪೂರ ಬಂದರಿಂದ ಆ ಶಾಲೆಯ ಮಕ್ಕಳನ್ನು ಕಮಲನಗರಕ್ಕೆ ಸ್ಥಳಾಂತರಿಸಲಾಯಿತು. ಕಮಲನಗರ ಶಾಲೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರಿಂದ ಅಡಿಗಲ್ಲು ಹಾಕಿಸಿ ಪುನಃ ಕಷ್ಟಪಟ್ಟು ಶಾಲೆ ಕಟ್ಟಡ ಮುಗಿಸಿದರು.
ಡಾ. ಚೆನ್ನಬಸವ ಪಟ್ಟದೇವರು ನಡೆಸುತ್ತಿದ್ದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಶಾಲೆಗಳಿಗೆ ಸಕರ್ಾರದ ಮನ್ನಣಿ ದೊರೆಯಲಿಲ್ಲ. ಪ್ರಾಥಮಿಕ ಮಾಧ್ಯಮಿಕ ತರಗತಿಗಳಲ್ಲಿ ವಿದ್ಯಾಥರ್ಿಗಳ ಭವಿಷ್ಯ ಅತಂತ್ರವಾಗಬಾರದೆಂದು ತಕ್ಷಣವೇ ಲಾತೂರಿನಲ್ಲಿ ರಾಜಸ್ಥಾನದ ಮಾರವಾಡಿ ಶಾಲೆಗೆ ವಿದ್ಯಾಥರ್ಿಗಳನ್ನು ದಾಖಲಿಸಿದರು. ಅಲ್ಲಿ ಒಂದರಿಂದ ಹತ್ತನೆ ತರಗತಿಯವರೆಗೆ ಬೋಧಿಸಲಾಗುತ್ತಿತ್ತು. ಈ ಸಂಗಮ ಶಾಲೆಗೆ ಬಂದು ಲಾತೂರ ಶಾಲೆಗೆ ಸೇರಿ ಓದಿದವರಲ್ಲಿ ಈ ಭಾಗದ ಖ್ಯಾತ ಸಾಹಿತಿ ಡಾ. ಶಾಂತರಸ ಹೆಂಬೇರಾಳು ಒಬ್ಬರು. ಅವರು ಬೀದರನಲ್ಲಿ ಜರುಗಿದ ಅಖಿಲ ಭಾರತ 72ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಲಾತೂರಿನಲ್ಲಿ ಓದುವಾಗ ನಗರದ ಪೂರ್ವ ದಿಕ್ಕಿನ ಸುಡುಗಾಡು ಮಠದಲ್ಲಿನ ಅವರ ವಾಸದ ಭಯಾನಕ ವಿವರವನ್ನು ಶಾಂತರಸರು ಕಾಯಕ ಪರಿಣಾಮಿ (ಶ್ರೀ ಚನ್ನಬಸವ ಪಟ್ಟದೇವರು ಭಾಲ್ಕಿ ಗೌರವ ಗ್ರಂಥ ಬಚ್ಚಬರಿಯ ಚೆನ್ನ ಬಸವ ಪು. 263-271) ಯಲ್ಲಿ ದಾಖಲಿಸಿದ್ದಾರೆ.
ಈ ಭಾಗದ ಜನತೆಗೆ ಕಾಲೇಜು ಮಟ್ಟದ ಉನ್ನತ ಶಿಕ್ಷಣವು ದೊರಯಲೆಂಬ ಉದ್ದೇಶದಿಂದ ಭಾಲ್ಕಿಯಲ್ಲಿ ಕಾಲೇಜು ಆರಂಭಿಸಬೇಕೆಂದಾಗ ಇದಕ್ಕೆ ಹಣದ ಕೊರತೆಯುಂಟಾಯಿತು. ಆಗ ಮಠದ ಆಸ್ತಿ ಸಂಸ್ಥೆಯ ಹೆಸರಿಗೆ ವಗರ್ಾಯಿಸಿ, ಭಾಲ್ಕಿಯಲ್ಲಿ ಚೆನ್ನಬಸವ ಕಾಲೇಜು ಆರಂಭಿಸಿದರು.
ಶ್ರೀ ಚೆನ್ನಬಸವ ಪಟ್ಟದ್ದೇವರು ಬಸವಾದಿ ಶರಣರ ತತ್ವಗಳನ್ನು ಅಕ್ಷರಶಃ ಪಾಲಿಸುವ ನಿಟ್ಟಿನಲಿದ್ದುದರಿಂದ ವಚನಕಾರರು 12ನೇಯ ಶತಮಾನ ಮಹಿಳಾ ಶಿಕ್ಷಣ ನೀಡಿದರೆ ಪಟ್ಟದೇವರು ಸಾಂಪ್ರದಾಯಿಕ ಮಡಿವಂತಿಕೆಗಳನ್ನು ಮುರಿದು ಬೀದರನಲ್ಲಿ ಮೊದಲ ಮಹಿಳಾ ಕಾಲೇಜು ಆರಂಭಿಸಿದರು. ಹೀಗೆ 1936 ರಿಂದ 1975ರ ವರೆಗೆ ಚನ್ನಬಸವ ಪಟ್ಟದ್ದೇವರು ಈ ಭಾಗದ ಜನತೆಗೆ ಅರಿವು (ಶಿಕ್ಷಣ) ನೀಡಲು ಏಕಾಂಗ ವೀರರಾಗಿ ಅವಿರತ ಶ್ರಮ ವಹಿಸಿದ್ದಾರೆ. ಮೋಗರ್ಿಯಲ್ಲಿ ಬಿತ್ತಿದ ಸಣ್ಣ ಅರಿವಿನ ಬೀಜ ಬೆಳೆದು ಹೆಮ್ಮರವಾಗಿ ವೃತ್ತಿಪರ ಐ.ಟಿ.ಐ. ಇಂಜಿನಿಯರಿಂಗ್ ಮೊದಲಾದ ಹತ್ತಾರು ಶಾಲಾ ಕಾಲೇಜುಗಳು ತಲೆ ಎತ್ತಿನಿಂತಿವೆ. ಅವರ ಅರಿವಿನಾಗರದ ಉತ್ಕಟನೆ ದೂರದೃಷ್ಟ ಅವಿಸ್ಮರಣೀಯ.
ಕನ್ನಡದ ಶರಣ :
ತಾಯಿ, ತಾಯ್ನೆಲ ಸ್ವರ್ಗಕ್ಕೆ ಸಮಾನವೆಂಬ ಮಾತಿದೆ. ಹಾಗಾಗಿ ಶ್ರೀ ಚೆನ್ನಬಸವ ಪಟ್ಟದೇವರಿಗೆ ಕನ್ನಡ ಭಾಷೆ-ಸಾಹಿತ್ಯ ಬಸವಾದಿ ಶರಣರ ತತ್ವಗಳು ಉಭಯ ದೃಷ್ಟಿ ಏಕವಾಗಿ ಕಾಂಬಂತೆ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಬೇಕಾದರೆ ಅವರು ಮೊದಲು ಕನ್ನಡ ಕಲಿಯಲೇಬೇಕೆಂಬ ಮೂಲ ಆಶಯದಿಂದ ಕನ್ನಡ ಭಾಷೆ - ಸಾಹಿತ್ಯವನ್ನು ಆದರದಿಂದ ಗೌರವಿಸಿದರು. ಎಂಥ ಸಂದರ್ಭದಲ್ಲಿಯೂ ನಾಡು ನುಡಿ - ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿಗೆ ಒಪ್ಪಲಿಲ್ಲ. ಉದರ್ು ಫಲಕ ಹಾಕಿ ಕನ್ನಡ ಕಲಿಸಿದ್ದೆ ಜ್ವಲಂತ ನಿದರ್ಶನ. ಸ್ವಾತಂತ್ರ್ಯ ಚಳವಳಿಗೆ ತೊಡಗಿಸಿಕೊಂಡ ಶ್ರೀಗಳು ಹೈದ್ರಾಬಾದ ಕನರ್ಾಟಕ ವಿಮೋಚನೆಗಾಗಿಯೂ ಹೋರಾಡಿದರು. ಮುಂದೆ ಕನರ್ಾಟಕ ಏಕೀಕರಣಕ್ಕೆ ಪಣತೊಟ್ಟುನಿಂತರು. ಇದಕ್ಕಾಗಿ 1955ರಲ್ಲಿ ಅವರು ಕಮಲನಗರದಲ್ಲಿ ತಮ್ಮ ಶಾಲೆಯ ವಿದ್ಯಾಥರ್ಿ ಹಾಗೂ ಶಿಕ್ಷಕರು ಸೇರಿ ಭಕ್ತರೊಂದಿಗೆ ರೈಲು ಹಳಿಯ ಮೇಲೆ ಕುಳಿತು ರೈಲು ರೋಕೋ ಆಂದೋಲನ ಮಾಡಿದರು. ಸೊಲ್ಲಾಪೂರವು ಕನರ್ಾಟಕದಲ್ಲಿಯೇ ಉಳಿಯಬೇಕೆಂಬ ಉತ್ಕಟ ಬಯಕೆ ಡಾ|| ಜಯದೇವಿ ತಾಯಿ ಲಿಗಾಡೆಯವರದಾಗಿತ್ತು. ಆಗ ಮರಾಠಿಗರು ಸಹಜವಾಗಿ ಕಮಲನಗರದಲ್ಲಿ ದಾಂಧಲೆ ಮಾಡಿದರು. ಹೀಗೆ ಕನರ್ಾಟಕ ಏಕೀಕರಣ, ಕನ್ನಡ ಅಧ್ಯಯನಕ್ಕೆ ಪುಷ್ಟಿ ನೀಡಿದ್ದರಿಂದ ಕಿಡಿಗೇಡಿಗಳಿಂದ ನಿಜಾಮ ಸರಕಾರದಲ್ಲಿ ಮೊಕದ್ದಮೆ ಎದುರಿಸಿದ್ದನ್ನು ಡಾ.ಜಿ.ಬಿ. ವಿಸಾಜಿಯವರು (ಕಾಯಕ ಪರಿಣಾಮಿಯಲ್ಲಿ) ವಿವರವಾಗಿ ದಾಖಲಿಸಿದ್ದಾರೆ.
ಕನ್ನಡತನ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದರು. ವಚನ ಪಠಣ ಮಾಡಿಸುತ್ತಿದ್ದರು. ವಚನಗಳ ಸರಳೀಕರಿಸಿ ಹೇಳುತ್ತಿದ್ದರು. ಜೊತೆಗೆ ಶರಣ ಸಂಸ್ಕೃತಿ - ಶರಣತತ್ವದ ಪ್ರಸ್ತುತತೆ, ವೈಚಾರಿಕ ಪ್ರಖರತೆ ಕುರಿತು ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಹೀಗೆ ಕನ್ನಡ ಮತ್ತು ಶರಣತತ್ವ ಅವರ ಬದುಕಿನ ಉಸಿರಾಗಿದ್ದವು, ಜೀವನಾದರ್ಶವಾಗಿದ್ದವು. ಅವರ ಸಮಗ್ರ ಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ, ಗುಲಬಗರ್ಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮೊದಲಾದ ಪುರಸ್ಕಾರಗಳು ಸಂದಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.
ಹೀಗೆ ಕನ್ನಡ ನಾಡು ನುಡಿ ಜನತೆಯ ಅಭಿವೃದ್ದಿಗಾಗಿ ದುಡಿದ ಭಾಲ್ಕಿ ಹಿರೇಮಠವನ್ನು ಈ ಭಾಗದ ಜನ ಕನ್ನಡ ಮಠವೆಂದು, ಡಾ. ಚೆನ್ನಬಸವ ಪಟ್ಟದೇವರನ್ನು ಕನ್ನಡ ಪಟ್ಟದ್ದೇವರೆಂದೆ ಕರೆವರು. 
ಭಾಲ್ಕಿ ಹಿರೇಮಠದ ವಿಶೇಷವೆಂದರೆ ಡಾ. ಚೆನ್ನಬಸವ ಪಟ್ಟದೇವರ ಕನ್ನಡ ಪ್ರೀತಿ, ಕನ್ನಡ ಮಾತೃಭಾಷೆ ಶಿಕ್ಷಣ  ಕಾಳಜಿ ಈಗಿರುವ  ಡಾ. ಬಸವಲಿಂಗ ಪಟ್ಟದ್ದೇವರು ಅನುಚಾನವಾಗಿ ಮುಂದುವರೆಸಿಕೊಂಡು ಬರುತಿದ್ದಾರೆ. ಇಂಗ್ಲೀಷು ವ್ಯಾಮೋಹದ ಮಧ್ಯದಲ್ಲಿ ಶಿಕ್ಷಣ ವ್ಯಾಪಾರದ ಸರಕಾಗಿದೆ. ಹಣ ಗಳಿಕೆಯ ಸಾಧನವಾಗಿದೆ. ಆದರೆ ಇವರು ಶೈಕ್ಷಣಿಕ ಕ್ರಾಂತಿಯನ್ನೆ ಮಾಡುತ್ತಿದ್ದಾರೆ. ಶಿಕ್ಷಣದ ವ್ಯಾಪಾರೀಕರಣದ ಮಧ್ಯ ಅದನ್ನು ಮಾನವೀಕರಣಗೊಳಿಸುತ್ತಲೇ ಗಡಿಭಾಗದಲ್ಲಿ ಸು.31 ಅಂಗ ಸಂಸ್ಥೆಗಳ ಮೂಲಕ ಕನ್ನಡ ಶಾಲೆಗಳನ್ನು ಆರಂಭಿಸಿ ಗುಣಾತ್ಮಕ ಶಿಕ್ಷಣದ ಮೂಲಕ ಕನ್ನಡ ಕಟ್ಟುತ್ತಿರುವುದು ಶ್ಲಾಘನೀಯ.
ಡಾ. ಬಸವಲಿಂಗ ಪಟ್ಟದ್ದೇವರು ಸಹ ನಾಡಿನ  ಸರ್ವತೋಮುಖ ಅಭಿವೃದ್ದಿಗಾಗಿ ಕಲೆ,ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ನಾಡಿನ ಗಮನ ಸೆಳೆದವರು. ರಾಷ್ಟ್ರ, ರಾಜ್ಯ ಮಟ್ಟದ ಸಮ್ಮೇಳನ, ಸಮಾವೇಶ ಆಯೋಜಿಸುವುದರೊಂದಿಗೆ ವಿಚಾರ ಜ್ಯೋತಿ ಹೊತ್ತಿಸಿದ ಇವರು ಅನಾಥಾಶ್ರಮ, ಅಬಲಾಶ್ರಮ, ಕಾಮರ್ಿಕ ಶಾಲೆ, ಕಾಮರ್ಿಕ ಶಾಲೆ, ವಿಕಲ ಚೇತನ, ಸಂಗೀತ,ಗೋ ಶಾಲೆಗಳನ್ನು ತೆರೆದು ಜೀವಪರ ಕಾಳಜಿ ಮೆರೆದವರು. ಸಾಮೂಹಿಕ, ಅಂತರ್ಜಾತಿ ವಿವಾಹಗಳನ್ನು ಆಯೋಜಿಸಿ ಮತೀಯ ಸಾಮರಸ್ಯ, ಧರ್ಮ ಸಹೀಷ್ಣುತೆಗೆ ಹೆಸರಾದವರು. ಹತ್ತಾರು ಪುಸ್ತಕ ಬರೆದು ನೂರಾರು ವಿದ್ವಾಂಸರ ಕೃತಿಗಳನ್ನು ಪ್ರಕಟಿಸಿ ಅಕ್ಷರ ಸಂಸ್ಕೃತಿಯನ್ನು ಬೆಳೆಸುತ್ತಿರುವರು. ನಾಡಿನಲ್ಲಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ದೆಹಲಿ ಸೇರಿದಂತೆ ರಾಷ್ಟ್ರದ ಅನೇಕಜ ರಾಜ್ಯಗಳಲ್ಲಿ ಬಸವ ತತ್ವ ಪ್ರಸಾರದೊಂದಿಗೆ ಕನ್ನಡ ನಾಡು-ನುಡಿ, ಆಚಾರ, ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುತ್ತಿರುವ  ಸಾಂಸ್ಕೃತಿಕ ರಾಯಭಾರಿಗಳು. ಪ್ರಚಾರಪ್ರಿಯತೆ ಯುಗದ ಮಧ್ಯದಲ್ಲಿ ಸದ್ದು ಗದ್ದಲವಿಲ್ಲದೆ ದುಡಿಯುತ್ತಿದ್ದಾರೆ. ಹೀಗೆ ಡಾ.ಬಸವಲಿಂಗ ಪಟ್ಟದ್ದೇವರ ಮೌನ ಸೇವೆ, ಸಾಧನೆಗಳಿಗಾಗಿ ಪ್ರತಿಷ್ಟಿತ ರಮಣಶ್ರೀ ಪ್ರಶಸ್ತಿ, ಗುಲ್ಬಗರ್ಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಹತ್ತಾರು ಗೌರವ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಹೀಗೆ ಇಡೀ ಮಠ ಮತ್ತು ಮಠಾಧೀಶರು ದುಡಿಯುತ್ತಿರುವುದು ಈ ನಾಡಿನ ಸೌಭಾಗ್ಯವೇ ಸರಿ. ಆದ್ದರಿಂದ ಭಾಲ್ಕಿ ಹಿರೇಮಠವೆಂದರೆ ಅದು ಕನ್ನಡ ಸಂರಕ್ಷಣೆಯ ಮಠವೆಂದೆ ಅರ್ಥ.
 

ಬೀದರ ಜಿಲ್ಲೆ ಸಾಹಿತ್ಯ - ಸವಾಲುಗಳು

ಬೀದರ ಜಿಲ್ಲೆ ಸಾಹಿತ್ಯ - ಸವಾಲುಗಳು 


   
ಜಗತ್ಪ್ರಸಿದ್ಧ ಬಿದರಿ ಕಲೆ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಬೀದರ ಕಲೆ, ಸಾಹಿತ್ಯ, ದೇಶಿ ಸಂಸ್ಕೃತಿಗೆ ತವರು ನೆಲ. ಐತಿಹಾಸಿಕವಾಗಿ ಕ್ರಿ.ಪೂ. 3ನೇ ಶತಮಾನದ ಮೌರ್ಯರ ಆಳ್ವಿಕೆಗೆ ಒಳಪಟ್ಟ ಬೀದರ ಬಹಮನಿ, ಕಲ್ಯಾಣ ಚಾಲುಕ್ಯರು, ಕಳಚುರಿಗಳು ಹೀಗೆ ಹಲವು ಅರಸು ಮನೆತನಗಳಿಗೆ ರಾಜಧಾನಿಯಾಗಿ ಮೆರೆದಿದೆ. ಜೈನ, ಬೌದ್ಧ, ವೈಷ್ಣವ, ಲಿಂಗಾಯತ, ಇಸ್ಲಾಂ, ಕ್ರೈಸ್ತ, ಸಿಖ್, ಇಸಾಯಿ, ಇರಾನಿ ಮೊದಲಾದ ಧರ್ಮದ ಅನುಯಾಯಿಗಳು ಸೌಹಾರ್ದಯುತವಾಗಿ ಇಲ್ಲಿ ಬಾಳುವೇ ಸಾಗಿಸುತ್ತಿದ್ದಾರೆ. ಇದರಿಂದ ಸಾಮಾಜಿಕ ಸಾಮರಸ್ಯ ನೆಲೆಸಿದಂತಾಗಿದೆ. ಸುಮಾರು ಎರಡು ಸಾವಿರ ವರ್ಷಕ್ಕೂ ಮೇಲ್ಪಟ್ಟ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಭಾರತೀಯ ಸಂದರ್ಭದಲ್ಲಿ ಸಂಸ್ಕೃತ ತಮಿಳನ್ನು ಬಿಟ್ಟರೆ ಅತ್ಯಂತ ಪ್ರಾಚೀನತೆ ಹೊಂದಿದೆ. ಹಾಗಾಗಿ ಜಾಗತಿಕ ಸಾಹಿತ್ಯದ ಸಾಲಿನಲ್ಲಿ ನಿಲ್ಲುವ ಸಾಮಥ್ರ್ಯ ಹೊಂದಿರುವ ಕನ್ನಡ ಸಾಹಿತ್ಯ ಸಂವರ್ಧನೆಯಲ್ಲಿ ಬೀದರ ಜಿಲ್ಲೆಯ ಪಾತ್ರ ಮಹತ್ವದು. ಆದರೆ ಪ್ರಸ್ತುತ ಸಂದರ್ಭದಲ್ಲಿ ಅದು ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ.

    ಕನ್ನಡ ಮೊದಲ ಗದ್ಯಕೃತಿ ಬ್ರಾಜಿಷ್ಣು (ಶಿವಕೋಟಚಾರ್ಯ) ಬರೆದ ಕಣರ್ಾಟ ಆರಧಾನಾ ಟೀಕಾ (ವಡ್ಢಾರಾಧನೆ) ರಚನೆಯಾದದ್ದು ಈ ನೆಲದಲ್ಲಿಯೇ. ರನ್ನ (ಕಲ್ಯಾಣ ಚಾಳುಕ್ಯರ ಎರಡನೇ ತೈಲಪನ ಆಸ್ಥಾನ ಕವಿ) ಕಾವ್ಯ ಬರೆದದ್ದು, ಬಿಲ್ಹಣನ ವಿಕ್ರಮಾಂಕ ದೇವ ಚರಿತ ಬಂದದ್ದು ಈ ನಲೆದಲ್ಲಿಯೇ. ಮಿತಾಕ್ಷರ ಬರೆದ ವಿಜ್ಞಾನೇಶ್ವರ ಬೀದರ ಜಿಲ್ಲೆಯ ಮಾಸಿಮಡು ಗ್ರಾಮದವನು. ಹಾಗೆಯೇ ಆರನೇ ವಿಕ್ರಮಾದಿತ್ಯನ ಮಗ ಮೂರನೇ ಸೋಮೆಶ್ವರ ಬರೆದ ಮಾನಸೊಲ್ಲಾಸ ಅಭಿಲಾಷಿತಾರ್ಥ ಚಿಂತಾಮಣಿ ವಿಶ್ವಕೋಶ ಭಾರತೀಯ ಸಾಹಿತ್ಯ ಸಾಂಸ್ಕೃತಿಕ ಚರಿತ್ರೆಗೆ ಬಹುದೊಡ್ಡ ಕಾಣಿಕೆಗಳಾಗಿವೆ. ಅಲ್ಲದೇ ಅಂಕ ಗಣಿತದ ದೋಷ ಸರಿಪಡಿಸಲು ಬೀಜಗಣಿತ ನೀಡಿದವ ಬೀದರ ಮೂಲದ ಭಾಸ್ಕರನು ಉಜ್ಜೈನಿಯಲ್ಲಿ ನೆಲೆಸಿದನು. ಜೊತೆಗೆ ಜೀವಕಾರುಣ್ಯದ ಜನಪದ ಸಾಹಿತ್ಯ, ಅಧ್ಯಾತ್ಮಿಕ ಔನತ್ಯದ ತತ್ವಪದ, ವೈಚಾರಿಕತೆ ನೆಲೆಗಟ್ಟಿನ ವಚನ ಸಾಹಿತ್ಯ ಈ ನೆಲದ ಸಾಹಿತ್ಯಕ ಸತ್ವಗಳಾಗಿವೆ.

    ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಬೀದರ ಕೊಡುಗೆ ಅಪಾರ. ಆದರೆ ಮಧ್ಯಕಾಲದ ಪರಕೀಯ ಆಳ್ವಿಕೆ ವಲಸೆ ಧರ್ಮಗಳ ವಿಚಾರ ಸಂಹಿತೆ ಈ ನೆಲದ ಸಂಸ್ಕೃತಿಯ ಮೇಲೆ ಅನ್ಯ ಪ್ರಭಾವ ಬೀರಿದ್ದು ಭಾಷಿಕ ಸಾಹಿತ್ಯಕ ಬಿಕ್ಕಟುಗಳ ಸೃಷ್ಠಿಯಾಗಲು ಕಾರಣವಾಯಿತು. ವಿಶೇಷವಾಗಿ ಬ್ರಿಟಿಷ್ ಆಳ್ವಿಕೆ ಹಾಗೂ ನಿಜಾಮ ಸಂಸ್ಥಾನದ ಪ್ರಭಾವದಿಂದ ಈ ಭಾಗದ ಜನರ ಬದುಕಲ್ಲಿ ಮಹತ್ತರ ಬದಲಾವಣೆಗಳು ಕಾಣಿಸಿಕೊಂಡವು. ಸ್ವಾತಂತ್ರ್ಯೋತ್ತರದಲ್ಲಿಯೂ ಆ ಕೊರತೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಹಾಗಂತ ಅಧುನಿಕ ಕನ್ನಡ ಸಾಹಿತ್ಯಕ್ಕೆ ಬೀದರ ಜಿಲ್ಲೆಯ ಕೊಡುಗೆ ಶೂನ್ಯವಾಗಿಯೂ ಇಲ್ಲ. ಇಲ್ಲಿಯೂ ಹಲವಾರು ಮಹತ್ವದ ಪ್ರತಿಭಿಗಳಿವೆ. ಆದರೆ ರಾಜಧಾನಿ ಕೇಂದ್ರಿತ ಸಾಂಸ್ಕೃತಿಕ ರಾಜಕಾರಣ, ಸಂಕುಚಿತ ಮನಸ್ಸಿನಿಂದಾಗಿ ಇವತ್ತಿಗೂ ಈ ನೆಲದ ಪ್ರತಿಭೆಗಳು ಕಡೆಗಣಿಸಲ್ಪಟ್ಟಿವೆ.

    17ನೇ ಶತಮಾನದಿಂದ ಕುವೆಂಪುವರೆಗಿನ ಕಾಲ ಸಾಹಿತ್ಯಕವಾಗಿ ಈ ಭಾಗ ಕತ್ತಲೆಯುಗವೆಂದು ಹೇಳುತ್ತಾರೆ. ಆದರೆ ವಾಸ್ತವ ಹಾಗಲ್ಲ. ಕುವೆಂಪು ಅಂತಹ ಮಹತ್ವದ ಕವಿಗೆ ಪಯರ್ಾಯವೆಂಬಂತೆ ಬೀದರ ನೆಲದಲ್ಲಿ ಡಾ|| ಜಯದೇವಿ ತಾಯಿ ಲಿಗಾಡೆ ಅವರಿಂದ ಶ್ರೀ ಸಿದ್ಧರಾಮೇಶ್ವರ ಪುರಾಣವೆಂಬ ಮಹಾಕಾವ್ಯ ಸೃಷ್ಟಿಯಾಯಿತು. (ಅನೇಕರು ಇದನ್ನು ಮಹಾಕಾವ್ಯವೆಂದು ಒಪ್ಪಿಕೊಳ್ಳುವ ಸೌಜನ್ಯ ಕೂಡ ತೋರಿಸಲಿಲ್ಲ) ಆ ಕಾಲಕ್ಕೆ ಕನ್ನಡ ಕಟ್ಟುವ ಸಾಹಿತ್ಯ ರಚಿಸುವ ಕೆಲಸಗಳು ನಮ್ಮಲ್ಲಿ ಅವ್ಯಾಹತವಾಗಿ ನಡೆದಿವೆ. ಪ್ರೊ. ವೀರೇಂದ್ರ ಸಿಂಪಿ, ದೇಶಾಂಸ ಹುಡುಗಿ, ಡಾ|| ಜಿ.ಬಿ. ವಿಸಾಜಿ, ಪಂಚಾಕ್ಷರಿ ಪುಣ್ಯಶೆಟ್ಟಿ ಮೊದಲಾದವರು ಉತ್ತಮ ಸಾಹಿತ್ಯ ರಚಿಸುತ್ತಲೇ ತಮ್ಮದೇ ಆದ ಸಾಹಿತಿಗಳ ಪಡೆಗಳನ್ನು ಕಟ್ಟಿ ಬೆಳೆಸಿರುವುದು ಇಲ್ಲಿನ ಸಾಹಿತ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

    ಬೀದರದಲ್ಲಿಯು ಆಧುನಿಕ ಸಾಹಿತ್ಯದ ಬಹುತೇಕ ಎಲ್ಲ ರೂಪಗಳ ಕೃಷಿ ನಡೆದಿದೆ. ಅದರಲ್ಲಿ ದೇಶಾಂಸ ಹುಡುಗಿಯವರ ಬೀದರ ಕನ್ನಡ ಕೋಶ ಮಹತ್ವದ ಕೃತಿಯಾಗಿದ್ದು, ಗುರುನಾಥ ಅಕ್ಕಣ್ಣ, ಶಿವಕುಮಾರ ನಾಗವಾರ, ಕ್ಷಿತಿಜ ಮೊದಲಾದವರು ಮಹತ್ವದ ಕಥೆಗಾರರಾಗಿದ್ದಾರೆ. ಡಾ|| ಪ್ರೇಮಾ ಸಿಸರ್ೆ, ಎಂ.ಜಿ. ದೇಶಪಾಂಡೆ, ಎಮ್.ಜಿ. ಗಂಗನಪಳ್ಳಿ, ಹಂಶಕವಿ, ವಜ್ರಾ ಪಾಟೀಲ ಮೊದಲಾದವರು ಕಾವ್ಯದಲ್ಲಿ ಹೆಸರು ಮಾಡಿರುವಂತೆ ಡಾ|| ವೈಜಿನಾಥ ಭಂಡೆ, ಡಾ|| ಸೋಮನಾಥ ನುಚ್ಚಾ, ಡಾ|| ಸೋಮನಾಥ ಯಾಳವಾರ ಮೊದಲಾದವರು ಸಂಶೋಧನೆಯಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ವ್ಯಾಕರಣದಲ್ಲಿ ಪಂಡಿತ ಬಸವರಾಜ ಕೆಲಸ ಮಾಡಿದಂತೆ ಶಂಭುಲಿಂಗ ವಾಲ್ದೊಡ್ಡಿಯವರ ವ್ಯಾಕರಣ ಕೃತಿ ಚಾರಿತ್ರಿಕವಾಗಿ ಮಹತ್ವದು.

ಹೊಸ ತಲೆಮಾರಿನ ಲೇಖಕರಲ್ಲಿ ರುಕ್ಮೋದ್ದಿನ್ ಇಸ್ಲಾಂಪೂರ ಡಾ.ಶಿವಗಂಗಾ ರುಮ್ಮಾ, ಡಾ. ವಿಕ್ರಮ ವಿಸಾಜಿ, ಡಾ. ಇಂದುಮತಿ ಪಾಟೀಲ, ಡಾ. ಗವಿಸಿದ್ಧ ಪಾಟೀಲ, ಡಾ. ರಘುಶಂಖ ಭಾತಂಬ್ರಾ, ಎಮ್.ಎಸ್. ಮನೋಹರ, ಶಿವಕುಮಾರ ಕಟ್ಟೆ, ರಮೇಶ ಬಿರಾದಾರ ಮೊದಲಾದವರು ಭರವಸೆಯ ಬರಹಗಾರರಾಗಿದ್ದಾರೆ.

    ಕಾವ್ಯದಲ್ಲಿ ಮಹೇಶ್ವರಿ ಶಿವಲಿಂಗ ಹೇಡೆ, ಮುಕ್ತಂಬಿ, ಜಯದೇವಿ ಗಾಯಕವಾಡ, ಬಸವರಾಜ ಮಯೂರ, ಭಾರತಿ ವಸ್ತ್ರದ ಮೊದಲಾದವರನ್ನು ಹೆಸರಿಸಬಹುದು. ವಿಚಾರ ಸಾಹಿತ್ಯದಲ್ಲಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಮಕ್ಕಳ ಸಾಹಿತ್ಯದಲ್ಲಿ ಚಂದ್ರಪ್ಪಾ ಹೆಬ್ಬಾಳಕರ, ರಂಗ ಭೂಮಿಯಲ್ಲಿ ಚಂದ್ರಗುಪ್ತ ಚಾಂದಕವಠೆ, ವಿಜ್ಞಾನ ಸಾಹಿತ್ಯದಲ್ಲಿ. ಎಸ್.ವ್ಹಿ.ಕಲ್ಮಠ, ಸುಭಾಷ ನೆಳಗೆ ಪ್ರಬುದ್ಧ ಸಾಹಿತ್ಯ ರಚಿಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿಯೇ ಮಹತ್ವದ ಲೇಖಕರಾಗಿದ್ದ ಮ.ಮಾ. ಬೋರಾಳಕರ್, ಕೆರಳ್ಳಿ ಲಕ್ಷ್ಮಾರಡ್ಡಿ, ಶ್ರೀಕಾಂತ ಪಾಟೀಲ, ಯಶೋದಮ್ಮಾ ಸಿದ್ಧಬಟ್ಟೆ ಅವರನ್ನು ಕಳೆದುಕೊಂಡಿದ್ದು ಒಂದಿಷ್ಟು ನೋವಿದೆ.

    ಗಮನಾರ್ಹ ಸಂಗತಿ ಎಂದರೆ ನಮ್ಮಲ್ಲಿ ವಿಮರ್ಶ ಸಾಹಿತ್ಯದ ಬಹುದೊಡ್ಡ ಕೊರತೆ ಎದ್ದು ಕಾಣುತ್ತಿದೆ. ಮುಖ್ಯವಾಗಿ ಹೊಸ ಬರಹಗಾರರಿಗೆ ಬೆನ್ನುತಟ್ಟುವ ಔದಾರ್ಯದ ಕೊರತೆ ಒಂದೆಡೆಯಾದರೆ, ಇನ್ನೊಂದಡೆ ಯಾರಾದರೂ ನೀ ಇನ್ನು ಸರಿಯಾಗಿ ಬರೆಯಬೇಕು ಎಂದು ಹೇಳಿದಾಗ ಅದನ್ನು ವಿಶಾಲ ಹೃದಯವಂತಿಕೆಯಿಂದ ಸ್ವೀಕರಿಸುವ ಔದಾರ್ಯದ ಗುಣಗಳು ನಮ್ಮಲ್ಲಿ ಸಿಗುತ್ತಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿ ಒಂದು ನಾಡಿನ ಸರ್ವತೋಮುಖವಾದ ಬೆಳವಣಿಗೆಗೆ ಕಾರಣವಾಗುವಾಗ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಸಾಂಸ್ಕೃತಿಕವಾಗಿ ಭಾವೈಕತೆಯ ಸಂಬಂಧ ಎಲ್ಲರೂ ಒಟ್ಟಾಗಿ ಬೆರೆಯಬೇಕೆಂಬ ಮನೋಭಾವನೆಯಿಂದ ದೂರ ಸರಿಯುತ್ತಿರುವುದು ಮತ್ತು ತಮ್ಮ ವಿಚಾರದಂತೆ ಪರರ ವಿಚಾರವು ಶ್ರೇಷ್ಠವೆಂಬ ಸಹೃದಯತೆ ಕಳೆದುಕೊಂಡಿರುವುದು ದೊಡ್ಡವರ ಸಣ್ಣತನಗಳಾಗಿವೆ.

ಈ ಎಲ್ಲಾ ಕಾರಣಗಳಿಂದಾಗಿ ಹೇಳಿಕೊಳ್ಳುವಂತಹ ಭರವಸೆಗಳಿಲ್ಲದ ಬಿಕ್ಕಟ್ಟು ಸೃಷ್ಠಿಯಾಗುತ್ತಿದೆ. ಇದಕ್ಕೆ ಜೀವನಾನುಭವದ, ಓದಿನ ಕೊರತೆ ಎದ್ದು ಕಾಣುತ್ತಿದೆ. ನಮ್ಮ ನಮ್ಮ ಮಧ್ಯ ಅರಿವನ್ನು ಹಂಚಿಕೊಳ್ಳುವ ಆಲೋಚನೆ ಇಲ್ಲ. ಹಾಗಂತ ಇಲ್ಲಿ ಕತ್ತಲೆಂದು ಇಲ್ಲ. ಹೊಸದರ ನಿರೀಕ್ಷೆಯಲ್ಲಿರಬೇಕಾಗಿದೆ. ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಯುವಕರು ಬರವಣಿಗೆ ಫ್ಯಾಶನ್ನಿನ ಸರಕಾಗಿ, ವೇದಿಕೆಯ ಸಾಧನವಾಗಿ ಮಾತ್ರ ಬೆಳೆಯದೇ ಬರಹದ ಮೂಲಕ ಬದುಕನ್ನು ಕಟ್ಟಬೇಕಾಗಿದೆ.

    ಸಾಹಿತ್ಯ ನಮ್ಮಲ್ಲಿ ತಲ್ಲಣವುಂಟು ಮಾಡದಿದ್ದರೆ ಅದು ಸಾಹಿತ್ಯವಲ್ಲ. ಚಿಂತನೆಗೆ ಹಚ್ಚುವ ಸಾಹಿತ್ಯ ಸೃಷ್ಠಿಯಾಗಬೇಕು. ಸಾಹಿತ್ಯವೆಂದರೆ ಕೇವಲ ಕವಿತೆ ಮಾತ್ರ ಅಲ್ಲ. ಸೃಜನಶೀಲ ಕಾವ್ಯ ಓದುವ ಕಾಲದಿಂದ ದೂರ ಬರುತ್ತಿದ್ದೇವೆ. ಅದು ಕಲೆ ಕಲೆಗಾಗಿ ಎಂಬ ನಿಲುವಿನದು. ಕಲೆ ಸಮಾಜಕ್ಕಾಗಿ, ಕಲೆ ಬದುಕಿಗಾಗಿ ಎಂಬ ನಿಲುವಿನ ಮೂಲಕ ಯೋಚಿಸಬೇಕಾಗಿದೆ. ಅನುವಾದವೂ ಒಂದು ಸಾಹಿತ್ಯ, ಸಂಗೀತ ಮಾಹಿತಿ ತಂತ್ರಜ್ಞಾನ, ಸಾಫ್ಟವೇರ್, ಎಲ್ಲವೂ ಕನ್ನಡದಲ್ಲಿ ತರಬೇಕು. ಕನ್ನಡ ಹೇಳಿಕೊಳ್ಳುವಷ್ಟು ಆತಂಕದ ಸ್ಥಿತಿಯಲ್ಲಿಲ್ಲ. ಹೊಸ ತಂತ್ರಜ್ಞಾನದ ಸ್ಪರ್ಶದಿಂದ ಹೊಸ ಕನ್ನಡಲೋಕ ತೆರೆದುಕೊಂಡಿದೆ. ಕನ್ನಡದ ಮೂಲಕ ವಿಶ್ವದ ಜ್ಞಾನ ಸಂಪಾದಿಸುವ ಕಾಲದಲ್ಲಿದ್ದೇವೆ. ದಿನಕ್ಕೆ ಹತ್ತರಂತೆ, ವರ್ಷಕ್ಕೆ ಸು.3500 ಪುಸ್ತಕ ಪ್ರಕಟವಾಗುತ್ತಿವೆ. ಹಿಂದಿಗಿಂತಲೂ ಇಂದು ಹೆಚ್ಚು ದಾರಿ ತೆರೆದುಕೊಂಡಿವೆ. ಇದೆಲ್ಲವನ್ನು ನಮ್ಮ ಜಿಲ್ಲೆಯ ಲೇಖಕರು ಸಹಸ್ಪಂದಿಸಬೇಕು. ಅಂದಾಗ ಕನ್ನಡ ಬದುಕು ಮತ್ತು ಸಾಹಿತ್ಯ ಜೊತೆಯಾಗಿಯೇ ಬೆಳೆಯುತ್ತದೆ. (ವಿ.ಸೂ.ಇಲ್ಲಿನ ಲೇಖಕರ ಹೆಸರು ಕೇವಲ ಪ್ರಾತಿನಿಧಿಕ ಮಾತ್ರ ಪರಿಪೂರ್ಣ ಅಲ್ಲ.)

ಡಾ. ಬಸವರಾಜ ಬಲ್ಲೂರ, ಬೀದರ
ಮೊಃ 09738418468, 9242440379

ಕನ್ನಡ ಉತ್ಸವ

ಕನ್ನಡ ಉತ್ಸವ

ಕನ್ನಡ' ಎಂಬ ಪದವೇ ಅಪ್ಯಾಯಮಾನವಾದದ್ದು, ನಾಡು, ನುಡಿ, ಜಲ, ಜನ, ಜನಾಂಗ, ಧರ್ಮ-ಸಂಸ್ಕೃತಿಯನ್ನು ಪ್ರತಿನಿಧಿಸುವ 'ಕನ್ನಡ' ಕನ್ನಡಿಗರ ಬದುಕು ಹೌದು. ಆದ್ದರಿಂದ ಇದು ಕನ್ನಡಿಗರ ಉತ್ಸವ ಕನ್ನಡಿಗರ ಸಂಭ್ರಮದ ದಿನಗಳವು. ವರ್ಷದ ಆರಂಭದ ದಿನದಿಂದ ಹಿಡಿದು ಈವರೆಗೆ ಉತ್ಸಾಹವೇ ಉತ್ಸಾಹ. ಕನ್ನಡಿಗರ ಸ್ವಾಭಿಮಾನ ನೆಲ 'ಬೆಳಗಾವಿ'ಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನ. ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ, ಕಲ್ಯಾಣ ಕನರ್ಾಟಕದವರಿಗೆ ಶ್ರೀ ವಿಜಯ ಪುರಸ್ಕಾರ ಸೇರಿದಂತೆ ಹಲವಾರು ಸಾರಹಗಳು ಕನ್ನಡಿಗರನ್ನು ಪುಳಕಗೊಳಿಸಿವೆ. ಕ್ನನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಘೋಷಣೆಯಾಗಿ ವರುಷಗಳು ಕಳೆದಿದ್ದರೂ ಈ ಸಂಬಂಧದ ಚಿಂತನೆಗಳು ಹರಳಾಗುತ್ತಿಲ್ಲ. ಜೊತೆಗೆ ಕನ್ನಡಿಗರ ಬದುಕಿನ ಚಿಂತನೆಕೂಡ ಈ ಸಂದರ್ಭದ ಜರೂರಿಗಳಲ್ಲಿ ಒಂದಾಗಿದೆ.
    ಕನ್ನಡಿಗರ ಅಭಿವೃದ್ಧಿಯಾಗದೇ ಕನ್ನಡದ ಅಭಿವೃದ್ಧಿ ಅಸಾಧ್ಯವೆಂಬುದು ಮತ್ತೆಮತ್ತೆ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಕ್ನನಡ ಭಾಷೆ-ಸಾಹಿತ್ಯ್ಕಕೂ ಕನ್ನಡಿಗರ ಬದುಕಿಗೂ ಅನನ್ಯ ಸಂಬಂಧವಿದೆ. ಈ ಬೆಸುಗೆಯ ಕೆಲಸವನ್ನು ಬಸವಾದಿ ಶರಣರು ಮಾಡಿದರು. ಆದ್ದರಿಂದ ಕ್ನನಡದ ಆದ್ಯರೆಂದರೆ ವಚನಕಾರರೇ. ಅವರು ಕ್ನನಡಕ್ಕೆ ದೇಶಿಯ ದೀಕ್ಷೆ ನೀಡಿದರು. ಹಿಂದೆ ಮಾರ್ಗದೇಶಿ ಸಮನ್ವಯದ, ಪಂಡಿತ ಸಮ್ಮುಖ-ಜನಸಮ್ಮೂಖ ದೃಷ್ಟಿಯ ನಿಲುವಿನಿಂದಾಗಿ ಕನ್ನಡಕ್ಕೆ ಸಿಗಬೇಕಾಗಿದ್ದು ಗೌರವ ಸಿಗಲಿಲ್ಲ. ಅದಕ್ಕೆ ಇನ್ನೊಂದು ಕಾರಣವೆಂದರೆ ಅಂದು ದೇವರ, ಧರ್ಮದ ಭಾಷೆ, ವ್ಯವಹಾರದ ಭಾಷೆ, ಪುಸ್ತಕದ ಭಾಷೆ, ಪಾಂಡಿತ್ಯದ ಭಾಷೆ, ಬದುಕಿನ ಭಾಷೆ-ಹೀಗೆ ಎಲ್ಲವೂ ಬೇರೆ ಬೇರೆಯಾಗಿದ್ದವೂ ಆದರೆ ವಚನಕಾರರಿಗೆ ಎಲ್ಲದಕ್ಕೂ ಕನ್ನಡ ಒಂದೇ ಭಾಷೆ, ಹಿಂದೆ ಕಾವ್ಯದ ವಸ್ತುಕೂಡ ಪರಕೀಯ ಸಿದ್ದ ಮಾದರಿಯಾಗಿತ್ತು. ವಚನಕಾರರಿಗೆ ಬದುಕೆ ಕಾವ್ಯ (ವಚನ)ದ ಕನ್ನಡ ವಸ್ತುವಾಗಿತ್ತು.
ದೇವ ಭಾಷೆಯೆಂದೇ ಬಿಂಬಿತವಾಗಿದ್ದ, ಸಂಸ್ಕೃತಕ್ಕೆ ಪಯರ್ಾಯವಾಗಿ ಶರಣರು ಕನ್ನಡವನ್ನು ಕಟ್ಟಿದರು. ಆ ಮೂಲಕ ಕನ್ನಡಿಗರ ಬದುಕನ್ನು ಕಟ್ಟಿದರು. ಕಾಯಕಕ್ಕೆ ಗೌರವ ತಂದುಕೊಟ್ಟು ಪೂಜೆ ಕಾಯಕವಲ್ಲ, ಕಾಯಕವೇ ಪೂಜೆ ಎಂದು ಸಾರುವ ಮೂಲಕ ಸಾಹಿತ್ಯ ರಚನೆಗೆ ತಮ್ಮ ತಮ್ಮ ವೃತ್ತಿಯ ಪರಿಕರಗಳನ್ನು ಆಧ್ಯಾತ್ಮಿಕ ಚಿಂತನೆಗೆ ಪರಿಭಾಷೆಯಾಗಿ, ಪ್ರತಿಮೆ, ರೂಪಕ, ಸಂಕೇತಗಳು ಬಳಕೆ ಬಳಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ನಮ್ಮ ಹಾಗೆ ಅವರು ನವೆಂಬರ್ ತಿಂಗಳು ಕನ್ನಡಿಗರಾಗಿರದೇ ಯುಗದ ಕ್ನನಡಿರಾಗಿ, ಉತ್ಸಾಹಿ ಕನ್ನಡಿರಾಗಿದ್ದರು. ಪ್ರತಿಯೊಬ್ಬರ ಕೈಗೆ ಕಾಯಕ(ಕೆಲಸ). ಕಾಯಕದ ಅನುಭವವೇ ಸಾಹಿತ್ಯದ ಹೀಗಾಗಿ ಅಂದು ಕನ್ನಡ ಅನ್ನದ ಭಾಷೆಯಾಗಿ ಹಾಗೂ ಭಾಷೆ ಬದುಕು ಸಮೃದ್ಧವಾಗಿದ್ದವು, ಆ ಸಮೃದ್ಧಿತನ ತುಂಬಲು ನಮಗೆ ಇವತ್ತಿಗೂ ಆಗುತ್ತಿಲ್ಲ.
    ನಮ್ಮ ಜನರ ನಿರಾಸಕ್ತಿಯೋ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿ  ಕೊರತೆಯೊ ನಾಡು-ನುಡಿ, ನೆಲ, ಜಲ, ಹೀಗೆ, ಕನ್ನಡಿಗರ ಬದುಕಿನ ಪ್ರಶ್ನೆ ಒಂದಾಗಲಿಲ್ಲ. ನಿರವತೆಯ ಮೌನ ಹುಟ್ಟಿಕೊಳ್ಳುತ್ತದೆ. ಜನಪ್ರತಿಗಳು ನುಡಿಯ ಬಗ್ಗೆ ಸೊಲ್ಣೆತ್ತಿದರೆ ಪರ ಭಾಷೆಯ ಮತ ಕಳೆದುಕೊಳ್ಳಬಹುದೆಂಬ ಒಳ ಆತಂಕ ಹೊಂದಿದ್ದಾರೆ. ಒಬ್ಬ ಪರಭಾಷೆಯ ಐ.ಎ.ಎಸ್, ಅಧಿಕಾರಿ ಕನರ್ಾಟಕಕ್ಕೆ ವರ್ಗವಾಗಿ ಬಂದರೆ 2-3 ತಿಂಗಳಲ್ಲಿ ಕನ್ನಡ ಕಲಿತು ವ್ಯವಹರಿಸುತ್ತಾನೆ. ಜನರ ಭಾವನೆಗೆ ಸ್ಪಂದಿಸುತ್ತಾನೆ. ಆದರೆ ನಮ್ಮ ಜನಪ್ರತಿನಿಧಿಗಳು, ನಾಯಕರು ಕನ್ನಡ ನೆಲದವರಾದಗೂ ಕನ್ನಡ ಬಾರದವರಾಗಿದ್ದಾರೆ. ಕನ್ನಡ ಕಲಿಕೆ ಅವರಿಗೆ ಸಣ್ಣತನವಾಗಿ ಕಾಣಿಸುತ್ತದೆ. ಆದಾಗ್ಯೂ ಜನ ಸಹಿಸಿಕೊಂಡು ಓಲೈಸುತ್ತಾರೆ. ಗಡಿ ಸಮಸ್ಯೆ ನಿರಂತರವಾಗಿದೆ. ಮಹಾರಾಷ್ಟ್ರವಲಯದ ಅನೇಕ ಸ್ನೇಹಿತರನ್ನು-ಕೇಳಿದರೆ ನಮಗೆ ಬೀದರ, ಬೆಳಗಾವಿ ಬೇಕಾಗಿಲ್ಲ ಎಂದೇ ಹೇಳುತ್ತಾರೆ. ಮಹಾರಾಷ್ಟ್ರದ ಉದ್ಗೀರ, ಅಕ್ಕಲಕೋಟ, ಜತ್ತ್, ಸೋಲಾಪುರ, ಮೊದಲಾದಕಡೆ ಕನ್ನಡ ಬಹುಭಾಷಿಕರು ಇದ್ದಾರೆ. ಯಾವತ್ತೂ ಗಡಿ ಕುರಿತು ಚಚರ್ಿಸಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕಬೇಕು. ಮಹಾರಾಷ್ಟ್ರ ಮೂಲದ ಡಾ.ಜಯದೇವಿತಾಯಿ ಲಿಗಾಡೆ ಅವರಿಗೆ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಬೆಳಗಾವಿ(ಕನರ್ಾಟಕ) ಮೂಲದ ಉತ್ತಮ ಕಾಂಬಳೆ ಅವರಿಗೆ ಅಖಿಲ ಭಾರತ ಮರಾಠಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿದ್ದು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಹೀಗೆ ಭಾಷಿಕ ಸಮನ್ವಯತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತವೆಂಬುದನ್ನು ಮನಗಾಣಬೇಕಾಗಿದೆ. 
   
ಡಾ. ಬಸವರಾಜ ಬಲ್ಲೂರ
9242440379, 9738418468
.

ಮಕ್ಕಳ ಕಲಿಕೆ : ಪಾಲಕರ ಜವಾಬ್ದಾರಿ

ಮಕ್ಕಳ ಕಲಿಕೆ : ಪಾಲಕರ ಜವಾಬ್ದಾರಿ

-ಡಾ.  ಬಸವರಾಜ ಬಲ್ಲೂರ

ಎಡದ ಕೈಯಲು ಹಾಲು ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ...
ಎಂದುದಾಗಿ ಕೂಡಲ ಸಂಗಮ ದೇವಯ್ಯ ತಾನೆ
ಭಕ್ತಿಯ ಪಥವ ತೋರುವ ತಂದೆ
                    - ಬಸವಣ್ಣ (389)


ಬಸವಣ್ಣನವರ ಮಹತ್ವದ ವಚನವಿದು, ಪಾಲಕರೆಂದರೆ ಮಕ್ಕಳ ಬಗೆಗಿನ ಕೇವಲ ಕರ್ತವ್ಯ ನಿಭಾಯಿಸುವ, ಖಚರ್ು ಮಾಡುವ ಆಕೃತಿಯೇ ಅಲ್ಲ, ಬೇಕಾದುದನ್ನು ಕೊಡಿಸುವ ಕಾಮಧೇನುವೂ ಅಲ್ಲ.  . ಬದಲಾಗಿ ಒಂದು ಕೈಯಲ್ಲಿ ಹಾಲು ಬಟ್ಟಲು ಇನ್ನೊಂದು ಕೈಯಲ್ಲಿ ಕೋಲು ಹಿಡಿವ   ಪ್ರೀತಿಯ ಆಗರ ಮತ್ತು ಶಿಕ್ಷೆಯ ಮಾದರಿ ಎರಡೂ ಆಗಿರಬೆಕು. ಎಂಬುದು ಈ ವಚನದ ಆಶಯ. ಮನಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಶಿಕ್ಷಣ ಅದು ಏಕಮುಖ ಪ್ರಕ್ರಿಯ ಅಲ್ಲ. ಅಲ್ಲಿ ಶಿಕ್ಷಕ ವಿದ್ಯಾಥರ್ಿ ಹಾಗೂ ಪೋಷಕ ಸೇರಿ ಪರಿಪೂರ್ಣಗೊಳ್ಳುತ್ತದೆ. ದುರಂತದ ಸಂಗತಿಯೆಂದರೆ ಇಂದು ಪೋಷಕರು ತಮ್ಮ ಜವಾಬ್ದಾರಿಗಳನ್ನು  ಸರಯಾಗಿ ನಿಭಾಯಿಸುವಲ್ಲಿ ಸೋಲುತ್ತಿದ್ದಾರೆ.

ಒಂದು ಕಾಲವಿತ್ತು ಒಬ್ಬ ಅರಸನಿಗೆ ಅನೇಕ ಮಕ್ಕಳಿದ್ದಾಗ, ಹಿರಿಯ ಮಗನಿಗೆ ಪಟ್ಟಕಟ್ಟಿ, ಉಳಿದವರ ಕೈಯಲ್ಲಿ ಒಂದು ಕತ್ತಿ ಹಾಗೂ ಒಂದು ಕುದುರೆ ನೀಡಿ, ಇವೇ ನಿಮ್ಮ ಸಂಪತ್ತು. ನಿಮ್ಮ ತೋಳ್ಬಲ ಮತ್ತು ಜ್ಞಾನದ ಸಾಮಥ್ರ್ಯದಿಂದ ಸಂಪತ್ತು  ಸಾಮ್ರಾಜ್ಯದ ಒಡೆಯರಾಗಿ ಎಂದು ಹರಸುತ್ತಿದ್ದರು. ಆದರೆ ಇಂದು ರಾಜ ಪ್ರಭುತ್ವವೂ ಇಲ್ಲ, ಕತ್ತಿ-ಕುದುರೆಗಳೂ ಇಲ್ಲ, ಆದಾಗ್ಯೂ ಮಕ್ಕಳಿಗಾಗಿ ಸಂಪತ್ತು ಬೇಕಲ್ಲ. ಮಕ್ಕಳಿಗೆ ಕೊಡಿಸುವ ಶಿಕ್ಷಣವೇ ಒಂದು ಸಂಪತ್ತು. ಇದು ಆಧುನಿಕ ಯುಗ, ಸ್ಪಧರ್ಾತ್ಮಕ ಯುಗ, ಮಾಹಿತಿ ತಂತ್ರಜ್ಞಾನದ ಯುಗ, ವಿಶೇಷವಾಗಿ ಕಲಿಕೆ ಮತ್ತು ಜ್ಞಾನದ ಹಸಿವಿನ ಯುಗ.ಆದ್ದರಿಂದ ಮಕ್ಕಳ ಕಲಿಕೆಯ  ಪರಿಪೂರ್ಣತೆಯಲ್ಲಿ ಪಾಲಕರ ಜವಾಬ್ಬಾರಿ ಹೆಚ್ಚಾಗಿದೆ.

ಮನೆಯೇ ಮೊದಲು ಪಾಠ ಶಾಲೆ :
ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆ. ಆದರೆ ಇಂದು ಮನೆ ಪರಿಕಲ್ಪನೆ ಬದಲಾಗಿದೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿವೆ. ಗಂಡ ಹೆಂಡತಿ ಸಾಧ್ಯವಾದರೆ ಒಂದು ಮಗು ಇದು ಆಧುನಿಕ ಕುಟುಂಬಗಳ ಸ್ವರೂಪ ಇಂಥಲ್ಲಿ ಗಂಡ ಹೆಂಡತಿ ದುಡಿಯುವವರಿದ್ದರೆ. ಮಕ್ಕಳ ಸಂಬಂಧ ಅಷ್ಟೇ, ಎಷ್ಟೋ ತಂದೆಯವರು ರವಿವಾರದ ತಂದೆ(ಸಂಡೆ ಫಾದರ) ಆಗಿದ್ದಾರೆ.


ಕರ್ತವ್ಯ ಅಲ್ಲ ಧರ್ಮ ಃ
ಮಕ್ಕಳಿಗೆ ಪಾಲಕರು ಶಿಕ್ಷಣ ಕಲಿಸುವುದು ಒಂದು ಕರ್ತವ್ಯವಲ್ಲ, ಅದೊಂದು ಸಹಜ ಧರ್ಮ ಅದಕ್ಕೆಂದೆ ಸರ್ವಜ್ಞ ಕವಿ ಹೇಳುತ್ತಾನೆ, ವಿದ್ಯೆ ಕಲಿಸದ ತಂದೆ, ಬುದ್ಧಿ ಕೊಡದ ಗುರುವು, ಬಿದ್ದಿರಲು ಬಂದು ನೋಡದ ತಾಯಿ ಶುದ್ದ ವೈರಿಗಳು ಸರ್ವಜ್ಞ ಎನ್ನುತ್ತಾನೆ. ವಾಸ್ತವವಾಗಿ  ಶಿಕ್ಷಕ ಮೂರನೆ ಪಾಲಕನಾಗಿರುತ್ತಾನೆ. ಎಷ್ಟೋ ಸಲ ಪಾಲಕರು ತಮ್ಮ  ಒಂದೆರಡು ಮಕ್ಕಳ ಕಿರಿಕಿರಿಯನ್ನು ಸಹಿಸುವುದಿಲ್ಲ. ಆದರೆ ಒಬ್ಬ ಶಿಕ್ಷಕ ನೂರಾರು ವಿದ್ಯಾಥರ್ಿಗಳನ್ನು ಹೇಗೆ ಗಮನಿಸುತ್ತಾನೆ, ಸಹಿಸಿಕೊಳ್ಳುತ್ತಾನೆ ಅನ್ನುವ ಸತ್ಯ ನಮ್ಮ ಪಾಲಕರ ಅರಿವಿಗೆ ಇಲ್ಲ.

ಮಕ್ಕಳ ಕಡೆ ಒಂದು ಗಮನ ಃ
 ಮಕ್ಕಳು ಏನು ಮಾಡುತ್ತಿದ್ದಾರೆ. ಯಾರೊಂದಿಗೆ ಇದ್ದಾರೆ. ಏನು ಓದುತ್ತಿದ್ದಾರೆ ಎಂಬುವುದರ ಬಗ್ಗೆ ಪಾಲಕರು ಒಂದು ಗಮನವಿಡಬೇಕು. ಅದರರ್ಥ ಪತ್ತೆದಾರಿಕೆ ಅಲ್ಲ. ಅವರ ಎಲ್ಲಾ ವಿಷಯಗಳನ್ನು ಆಪ್ತವಾಗಿ ಗಮನಿಸಬೇಕು. ಪಾಲಕರು ಎದುರಾದಾಗ ಪುಸ್ತಕ ಮುಚ್ಚಿಟ್ಟರೆ ಬೇರೆ ಏನನ್ನೋ ಓದುತ್ತಿದ್ದಾರೆ ಎಂದರ್ಥ ಅಥವಾ ಎಷ್ಟೋ ಸಲ ಪುಸ್ತಕ ತೆರೆದೆ ಇರುತ್ತದೆ. ಆದರೆ ಪುಟಗಳು ತಿರುವಿ ಹಾಕುವುದಿಲ್ಲ. ಒಂದೇ ಪುಟದಲ್ಲಿ ಅನೇಕ ತಾಸು ಇರಬಹುದು. ಇದಕ್ಕೆ ಮಾನಸಿಕ ಖಿನ್ನತೆ ಅಥವಾ ಇನ್ನಾವೋದು ಕಾರಣಕ್ಕೆ ಹಾಗಾಗಬಹುದು. ಮನೆಯಲ್ಲಿ ಪಾಲಕರು ನಡೆಸುವ ಅನುಪಯುಕ್ತ, ವಿವಾದಿತ ಸಂಭಾಷಣೆ ಅಥವಾ ಅಸಂಬದ್ಧ ವರ್ತನೆಗಳ ಕಡೆಗೆ ಗಮನ ಇರಬಹುದು. ಆದರೆ ಪಾಲಕರು ಇದಾವುದನ್ನು ಪರಿಗಣಿಸುವುದಿಲ್ಲ.

ಕಷ್ಟಪಟ್ಟು ಓದಬಾರದು ಃ

ಮಕ್ಕಳಿಗೆ ಪೋಷಕರು ಯಾವುದೇ ಭಾರ ಹಾಕಬಾರದು ಯಾವಾಗಲು ವಿದ್ಯಾಥರ್ಿಗಳು ಕಷ್ಟಪಟ್ಟು ಓದಬಾರದು, ಇಷ್ಟ ಪಟ್ಟು ಓದಬೇಕು. ಮಕ್ಕಳ ಇಷ್ಟಗಳನ್ನು ಅನೇಕ ಸಲ ಪಾಲಕರು ಕಡೆಗಣಿಸಿ ತಮಗೆ ಇಷ್ಟವಾದ ಕೋಸರ್ುಗಳಿಗೆ ಸೇರಿಸುವುದರಿಂದ ವಿದ್ಯಾಥರ್ಿಗಳು ಕಷ್ಟಪಟ್ಟು ಓದುವಂತಾಗುತ್ತದೆ. ತಮ್ಮ ಮಕ್ಕಳ ಅರ್ಹತೆ ಅವರ ಶಕ್ತಿ ಸಾಮಥ್ರ್ಯ ತಿಳಿದುಕೊಳ್ಳುವ ವ್ಯವಧಾನ ಇಂದಿನ ಪಾಲಕರಿಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಪಾಲಕರಿಗೆ ಸ್ವ-ಪ್ರತಿಷ್ಠೆ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯ ಹಾಳುಮಾಡುತ್ತಾರೆ. ಸ್ನೇಹಿತರ  ಮಕ್ಕಳು ಹೋಗುವ ಶಾಲೆಗೆ ತಮ್ಮ ಮಕ್ಕಳು ಹೋಗಬೇಕು. ನೆರೆ ಮನೆಯವರ ಮಕ್ಕಳು ಓದುವ ಕೋಸರ್ುಗಳನ್ನು ತಮ್ಮ ಮಕ್ಕಳೂ ಓದಬೇಕೆಂಬ ಹಠದಿಂದ ವಿದ್ಯಾಥರ್ಿಗಳ ಭವಿಷ್ಯ ಬಲಿತೆಗೆದುಕೊಂಡ ಉದಾಹರಣೆಗಳು ಹಲವಾರು. ಪ್ರತಿಯೊಬ್ಬರು ತಮ್ಮ ಮಕ್ಕಳು ಇಂಜಿನಿಯರು ಅಥವಾ ವೈದ್ಯರಾಗಬೇಕೆಂದು ಅಪೇಕ್ಷ ಪಡುತ್ತಾರೆ. ಆದರೆ ತಮ್ಮ ಮಕ್ಕಳು 'ಉತ್ತಮ ಮನುಷ್ಯ'ರಾಗಬೇಕು ಎಂಬ ಆಲೋಚನೆ ಮಾಡುತ್ತಿಲ್ಲ. ಮನುಷ್ಯರ ಜೀವ ಧಾತು ಆಹಾರ. ಅದನ್ನು ಬೆಳೆಯುವ ಉತ್ತಮ ಕೃಷಿಕನಾಗಬೇಕು ಎಂದು ಯಾರು ಇಷ್ಟಪಡುವುದಿಲ್ಲ.

ತಮ್ಮ ಮಕ್ಕಳು  ಹೆಚ್ಚು ಅಂಕ ಗಳಿಸಬೇಕು ಎಂಬ ಆಲೋಚನೆಗಿಂತ ನೆರೆಮನೆಯವರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆಯಬೇಕು ಎಂಬ ದುರಾಲೋಚನೆಗಳೇ ಹೆಚ್ಚು. ಪಾಲಕರು ಯಾವತ್ತು ಅಭಿಪ್ರಾಯ ಹೇರುವ ಸರಕಾಗಬಾರದು. ಬದಲಿಗೆ ವಿದ್ಯಾಥರ್ಿಗಳ ಮನಸ್ಥಿತಿಯನ್ನು ಗ್ರಹಿಸುವ ಸಾಧನವಾಗಬೇಕು. ಯಾವತ್ತು ಮಕ್ಕಳೊಂದಿಗೆ ಬೆರೆತು ಆಟ ಆಡುವ, ಪಾಠ ಮಾಡುವ ಗೋಜಿಗೆ ಹೋಗದೆ ಕೇವಲ ಶಿಕ್ಷಕರನ್ನು ಮಾತ್ರ ಗುರಿಮಾಡಿ. ಮಕ್ಕಳ ವೈಫಲ್ಯತೆಗಳನ್ನು ಎತ್ತಿತೋರಿಸುತ್ತಾರೆ. ಪಾಲಕರು ನೀನು ಏನು, ಹೇಗೆ ಕಲಿತೆಯೆಂದು ಕೇಳದೆ ಯಾರು ಕಲಿಸಿದ್ದಾರೆ ಎಂದು ಕೇಳುವ ಪರಿಪಾಠ ಬೆಳೆದಿದೆ.
ಉತ್ತಮ ಪಾಲಕ :
ಒಬ್ಬ ಉತ್ತಮ ಪಾಲಕ ಹೇಗಿರಬೇಕೆಂಬುವುದನ್ನು ಅಮೇರಿಕ ಅಧ್ಯಕ್ಷ ಅಬ್ರಾಹಂ ಲಿಂಕನ ತನ್ನ ಮಗನ ಶಿಕ್ಷಕನಿಗೆ ಬರೆದ ಪತ್ರದ ಸಾಲುಗಳು ಹೀಗಿವೆ.

ಪ್ರಿಯ ಬಂಧು,
    ನಾ ಬಲ್ಲೆ ಎಲ್ಲರೂ ನ್ಯಾಯಪರರಲ್ಲ, ಎಲ್ಲರೂ ಸತ್ಯವಂತರಲ್ಲ ಎಂಬುದನು, ಆದರೆ ಪ್ರತಿಯೊಬ್ಬ ಮೋಸಗಾರನಿಗೆ ಪ್ರತಿಯಾಗಿ ಒಬ್ಬ ಧೀರೋದಾತ್ತ ; ಪ್ರತಿಯೊಬ್ಬ ಸ್ವಾಥರ್ಿ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತ ನಾಯಕ ; ಪ್ರತಿಯೊಬ್ಬ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರನಿರುವನೆಂಬುದನು ಕಲಿಸು. ಇದಕ್ಕೆ ಸಾಕಷ್ಟು ಸಮಯ ಬೇಕೆಂಬುದು ನನಗೆ ಗೊತ್ತಿದೆ.
    ಗಳಿಸಿದ ಒಂದು ಡಾಲರು ಸಿಕ್ಕ ನೂರು ಡಾಲರ್ಗಿಂತ ಹೆಚ್ಚು ಬೆಲೆಯುಳ್ಳದೆಂಬುದನ್ನು ಕಲಿಸು.
    ಅಸೂಯೆಯಿಂದ ದೂರವಿರುವುದನ್ನು ಕಲಿಸು. ಸೋಲನ್ನು ಸ್ವೀಕರಿಸುವುದನ್ನು ಮತ್ತು ಗೆಲುವಿನಲ್ಲಿ ಹಷರ್ಿಸುವುದನ್ನು ಕಲಿಸು.
    ಪುಸ್ತಕಗಳ ಅದ್ಭುತಗಳನ್ನು ಅವನಿಗೆ ಕಲಿಸು, ಜೊತೆಗೆ ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು, ಮತ್ತು ಹಸಿರು ಮಲೆಯ ಹೂವುಗಳನ್ನು ಕುರಿತು ಧ್ಯಾನಿಸಲು ಅನುವು ಮಾಡಿಕೊಡು.
    ಶಾಲೆಯಲ್ಲಿ ಮೋಸದಿಂದ ಉತ್ತೀರ್ಣನಾಗುವುದಕ್ಕಿಂತಲೂ ಫೇಲಾಗುವುದು ಹೆಚ್ಚು ಗೌರವವೆಂಬುದನ್ನು ಕಲಿಸು.
    ಎಲ್ಲರೂ ತಪ್ಪೆಂದಾಗಲೂ ತಾನು ನಂಬಿದ ವಿಚಾರಗಳಲ್ಲಿ ನಂಬಿಕೆ ಉಳಿಸಿಕೊಳ್ಳಲು ಕಲಿಸು.
    ವಿನಯವಂತರಲ್ಲಿ ವಿನಯದಿಂದ ಮತ್ತು ಒರಟು ಜನರಲ್ಲಿ ಒರಟುತನದಿ ನಡೆಯುವುದನ್ನು ಕಲಿಸು. ಗೇಲಿ ಮಾಡುವವರನ್ನು ದೂರವಿಡುವುದನ್ನು ಕಲಿಸು, ಅತಿಯಾಗಿ ಸಿಹಿಯಾಗಿ ಮಾತನಾಡುವವರೊಡನೆ ಎಚ್ಚರಿಕೆಯಿಂದಿರುವುದನ್ನು ಕಲಿಸು.
    ಜನರೆಲ್ಲ ಒಂದೇ ಕಡೆ ಹೋಗುತ್ತಿದ್ದಾರೆಂಬ ಕಾರಣಕ್ಕಾಗಿ ಆ ಗುಂಪನ್ನು ಅನುಸರಿಸದಿರುವ ಮನಸ್ಥೈರ್ಯವನ್ನು ತುಂಬು.
    ಎಲ್ಲವನ್ನೂ ಕೇಳಿಸಿಕೊಳ್ಳುವುದನ್ನು ಕಲಿಸು. ಆದರೆ ತಾನು ಕೇಳಿಸಿಕೊಂಡಿದ್ದನ್ನೆಲ್ಲ ಒಪ್ಪದೆ, ಪ್ರಮಾಣೀಕರಿಸಿ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕೆಂಬುದನ್ನು ಕಲಿಸು.
    ತನ್ನ ಬುದ್ಧಿ ಹಾಗೂ ಶಕ್ತಿಯನ್ನು ಅತಿ ಹೆಚ್ಚು ಬೆಲೆ ತೆರುವವನಿಗೆ ಬಳಸುವುವನ್ನು ಕಲಿಸು. ಆದರೆ ತನ್ನ ಹೃದಯ ಮತ್ತು ಆತ್ಮಕ್ಕೆ ಎಂದಿಗೂ ಬೆಲೆಯ ಚೀಟಿಯನ್ನು ಅಂಟಿಸದಿರುವುದನ್ನು ಕಲಿಸು.
    ಕಿರುಚಿತ್ತಿರುವ ಗುಂಪೇ ಎದುರಾದರೂ ಅದಕ್ಕೆ ಕಿವಿಗೊಡದೆ ಯಾವುದು ತನಗೆ ಸರಿಯೆಂದು ಕಂಡುಬರುತ್ತದೆಯೋ ಅದಕ್ಕಾಗಿ ನಿಂತು ಹೋರಾಡುವುದನ್ನು ಕಲಿಸು.
    ಮೃದುವಾಗಿ ನಡೆಸಿಕೋ, ಆದರೆ ಅತಿಯಾಗಿ ಮುದ್ದಿಸಬೇಡ. ಏಕೆಂದರೆ ಕಬ್ಬಿಣ ಉಕ್ಕಾಗಬೇಕಾದರೆ ಬೆಂಕಿಯಿಂದ ಕಾಯಿಸಲೇಬೇಕು.
    ಅವನಲ್ಲಿ ಕಾತುರತೆಯಿಂದಿರುವ ದೈರ್ಯ ತುಂಬಿಸು, ಎಂದಿಗೂ ಎದೆಗುಂದದೆ ಇರುವಂತಹ ತಾಳ್ಮೆಯನ್ನು ಕಲಿಸು.
    ಅವನಲ್ಲಿ ಆಳವಾದ ಆತ್ಮವಿಶ್ವಾಸವನ್ನು ಮೂಡಿಸು, ಏಕೆಂದರೆ ಅವನಿಗೆ ಇದರಿಂದ ಮನುಜಕುಲದಲ್ಲಿ ಆಳವಾದ ವಿಶ್ವಾಸ ಮೂಡಲು ಸಾಧ್ಯ.
    ಕಣ್ಣೀರಿನಲ್ಲಿ ಅವಮಾನವಿಲ್ಲವೆಂಬುದನ್ನು ಕಲಿಸು.
    ಇದು ಒಂದು ದೊಡ್ಡ ಜವಾಬ್ದಾರಿ........ ಅದು ಮುಗ್ಧಮಗು, ಆದರೆ ನೀನು ಯೋಚಿಸು, ಇದು ನಿನ್ನಿಂದ ಸಾಧ್ಯವೆ

ಹೀಗೆ ಹೇಳುವ ಧೈರ್ಯ, ಈ ಮಾದರಿಯ ಗುಣಗಳು ನಮ್ಮಲ್ಲಿ ಎಷ್ಟು ಪಾಲಕರಿಗೆ ಇವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.  ಸಮರ್ಥ ಪಾಲಕರು ಸಮರ್ಥ ನಾಯಕರನ್ನು ನೀಡಿದ್ದಾರೆ. ಜೀಜಾಮಾತೆ ಶಿವಾಜಿಯನ್ನು ಬೆಳೆಸಿದ್ದು, ಐನ್ಸ್ಟಿನ್, ಅಬ್ದುಲ್ ಕಲಾಂ ಅವರಿಗೆ ಅವರ ಪಾಲಕರು  ನೀಡಿದ ಪ್ರೇರಣೆಗಳಿಂದ ಅವರು ನಾಯಕತ್ವದ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಹಲವಾರು ಉದಾಹರಣೆಯ ಮಾದರಿಗಳು ನಮ್ಮಲ್ಲಿವೆ. ಉತ್ತಮ ಪಾಲಕರಾಗಲು ತತ್ವಶಾಸ್ತ್ರ ಓದಬೇಕಿಲ್ಲ, ಸಂಪತ್ತಿನ ವಿನಿಯೋಗ ಮಾಡಬೇಕಿಲ್ಲ. ಮಕ್ಕಳಿಗೆ ಬಾಲ್ಯದಲ್ಲಿ ಮಾರ್ಗದರ್ಶಕರಾಗಿ, ಯವ್ವನದಲ್ಲಿ ಆಪ್ತ ಸ್ನೇಹಿತರಾಗಿ, ಶಿಸ್ತು ಮಮತೆ, ಹಾಗೂ ಬದ್ಧತೆಗಳ ಸಂಬಂಧದಿಂದ ಬೆಸೆದಿರಬೇಕು. ಮಕ್ಕಳ ಪ್ರತಿಯೊಂದು ಸಾಧನೆ ಎತ್ತಿತೋರಿಸಬೇಕು, ಸಂಬಂಧಿಕರ ಮುಂದೆ ಅವುಗಳ ಕುರಿತು ಅಭಿಮಾನದಿಂದ ಹೇಳಬೇಕು. ಅದು ಶಾಲೆಯಲ್ಲಿ ಗಳಿಸಿದ ಅಂಕ ಇರಬಹುದು. ಅಥವಾ ಅಡಿಗೆ ಮನೆಯಲ್ಲಿ ತಾಯಿಗೆ ಸಹಾಯ ಮಾಡಿದ್ದಿರಬಹುದು. ಮಕ್ಕಳ ಮೇಲೆ ಪರಿಣಾಮ ಬೀರುವ ಕೆಟ್ಟ ಚಟ, ಅಮಾನವೀಯ ವರ್ತನೆ ಇರಬಾರದು ಏಕೆಂದರೆ ಮಕ್ಕಳು ತಮಗರಿವಿಲ್ಲದೆ ಪಾಲಕರನ್ನು ಅನುಕರಿಸುತ್ತಾರೆ. ಅಂಚೆ ಕಚೇರಿಯಿಂದ ಹಿಡಿದು ಬ್ಯಾಂಕ ಕೆಲಸಗಳ ವರೆಗೆ ಮಕ್ಕಳನ್ನು ವ್ಯವಹಾರಿಕವಾಗಿ ತೊಡಗಿಸಬೇಕು. ಹೊಸ ಮನೆ, ಹೊಲ ಏನೆ ಖರಿದಿಗಳು ಇರುವಾಗ ಮಕ್ಕಳ ಅಭಿಪ್ರಾಯ ಕೇಳಬೇಕು. ಮಕ್ಕಳು ಹತಾಶರಾದಾಗ ಕಾರಣ ಕೇಳಿ ಪಾಲಕರು ಸಹಾಯ ಮಾಡಬೇಕು. ಓದುವ ಬರೆಯುವ ಹವ್ಯಾಸ ಬೆಳೆಸಬೇಕು. ಅದು ಎನೇ ಇರಲಿ, ನಾನು ಶಾಲೆಗೆ ಹೋಗಲ್ಲ ಎಂದಾದರೂ ಸರಿ.   ಬಹು ಮುಖ್ಯವಾಗಿ ಪ್ರತಿ ದಿನ ಸಂಜೆ ಎಲ್ಲರು ಸೇರಿ ಊಟ ಮಾಡುವಾಗ ಇಂದು ನಿವೇನು ಹೊಸತನ್ನು ಕಲಿತಿರುವಿರಿ ಎಂದು ಕೇಳಿ ಹೊಸ ಸಂಗತಿಗಳು ಕಲಿಯದಿದ್ದರೆ ಆ ದಿನ ಊಟ ಇಲ್ಲವೆಂದು ಹೇಳಿ. ಇಂತಹ ಪಾಲಕರು ಮಾತ್ರ ಜಗತ್ತಿನ ಮಾನವ ಕುಲದ ಅಭಿವೃದ್ದಿಯ  ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಗಳನ್ನು ರೂಪಿಸುತ್ತಾರೆ ಎಂದರ್ಥ ಆದರೆ ಮಕ್ಕಳೊಂದಿಗೆ ಊಟ ಮಾಡಲು ಪಾಲಕರು ಮನೆಗೆ ಬೇಗ ಹೋಗಬೇಕು.
------------------------------------------------------------
ವಿಳಾಸ :ಕನ್ನಡ ಉಪನ್ಯಾಸಕ ಕನರ್ಾಟಕ ಕಾಲೇಜು ಕನ್ನಡ ಪಿ.ಜಿ.ಅಧ್ಯಯನ ಕೇಂದ್ರ ಬೀದರ 9242440379/9738418468 ಇ_ವಿಳಾಸ# ಛಚಿಚಿತಚಿಛಚಿಟಟಣಡಿ@ರಟಚಿಟ.ಛಿಠಟ

ಅಕ್ಷರ ಬಲ್ಲವರೆಲ್ಲ ಜ್ಞಾನಿಗಳಲ್ಲ

ಅಕ್ಷರ ಬಲ್ಲವರೆಲ್ಲ ಜ್ಞಾನಿಗಳಲ್ಲ

ಡಾ. ಬಸವರಾಜ ಬಲ್ಲೂರ
ಮೊ: 9242428179 /9738418468


ಭಾರತೀಯ ಸಂದರ್ಭದಲ್ಲಿ ಶಿಕ್ಷಣಕ್ಕೆ ಚಾರಿತ್ರಿಕ ಮಹತ್ವದ ಸ್ಥಾನವಿದೆ. ಏಕೆಂದರೆ ಜೀವ ಜಗತ್ತಿನ ಅಭಿವೃದ್ಧಿಯ ಹಿಂದೆ ಶಿಕ್ಷಣ ಕಾರ್ಯನಿರ್ವಹಿಸಿದೆ. ಶಿಕ್ಷಣಕ್ಕೆ ವಿಶಾಲ ಅರ್ಥವಿದೆ. ಅರಿವು ಎಂಬ ಪರಿಕಲ್ಪನೆಯಲ್ಲಿ ಬಳಸಲಾಗುತ್ತದೆ. ಮನುಷ್ಯರ ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ, ಆಶ್ರಯ, ಔಷಧ (ಆರೋಗ್ಯ) ಹಾಗೂ ಅರಿವು (ಶಿಕ್ಷಣ) ಗಳೆಂಬ ಶಿವಪಂಚಾಯತಗಳಲ್ಲಿ ಶಿಕ್ಷಣವು ಒಂದು. ಹಾಗಾಗಿ ಶಿಕ್ಷಣ ಎಲ್ಲ ಸಮಸ್ಯೆ-ಸವಾಲುಗಳಿಗೆ ಪರಿಹಾರವಾಗಿ ನಿಲ್ಲುವ ಸಾಮಥ್ರ್ಯ ಪಡೆದಿದೆ. ಆದರೆ ದುರಂತದ ಸಂಗತಿಯೆಂದರೆ ಬಸವಣ್ಣನವರ ಕಾಲವನ್ನು ಬಿಟ್ಟರೆ ಐದು ಸಾವಿರ ವರ್ಷಗಳಿಂದ ಶಿಕ್ಷಣ ಉಳ್ಳವರ ಸ್ವತ್ತಾಗಿ ಬೆಳೆದು ಇಲ್ಲದವರಿಗೆ ಗಗನ ಕುಸುಮವಾಗಿ ಉಳಿದಿದೆ. ಇಂದು ಶಿಕ್ಷಣದ ಸಾರ್ವತ್ರಿಕರಣವೆಂಬ ಘೋಷಣೆ ಮಾತ್ರ ಖುಷಿ ತರುತ್ತಿದೆ ಆದರೆ ಆಧುನಿಕ ಭಾರತದ ಕೋಮುವಾದ ಭಯೋತ್ಪಾದನೆ ಭ್ರಷ್ಟಾಚಾರಗಳಂತೆ ಶಿಕ್ಷಣವೂ ಒಂದು ಸಮಸ್ಯೆಯಾಗಿ ರೂಪು ತಳೆದಿದೆ.
ಇಂದಿನ ಶಿಕ್ಷಣ ಪರಂಪರಾಗತವಾಗಿ ಬಂದ ಉತ್ಪಾದನಾ ವ್ಯವಸ್ಥೆ ಹಾಳು ಮಾಡಿದೆ, ಸು. 25 ಸಾವಿರ ಹಳ್ಳಿಗಳ 6 ಲಕ್ಷ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಆಧುನಿಕ ಸಾಂಪ್ರದಾಯಿಕ ಶಿಕ್ಷಣ ಯುವ ಪೀಳಿಗೆಯಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ. ಶಿಕ್ಷಣದ ಮೂಲ ಆಶಯ ವ್ಯಕ್ತಿಯೊಳಗಿನ ಭಯ ಮತ್ತು ಕೀಳರಿಮೆ ನಿವಾರಿಸುವುದಾಗಬೇಕು. ಈ ಕೆಲಸವನ್ನು 12ನೆಯ ಶತಮಾನದಲ್ಲಿ ಬಸವಣ್ಣನವರು ಪೂರೈಸಿಕೊಟ್ಟಿದ್ದಾರೆ.
ಮಾನವ (ಮಾನವಿಯ) ಹಕ್ಕುಗಳ ಪ್ರತಿಪಾದನೆಗಾಗಿ ರಚನೆಯಾದ ಬಸವಣ್ಣನವರ ಸಮಾಜೋ ಸಾಂಸ್ಕೃತಿಕ ವೇದಿಕೆಯಾದ ಅನುಭವ ಮಂಟಪದಲ್ಲಿ ಮನುಷ್ಯ ಬದುಕಿನ ವಿವಿಧ ಆಯಾಮಗಳಾದ ಕೃಷಿ, ವ್ಯಾಪಾರ, ಉದ್ಯೋಗ, ವಿವಿಧ ಜ್ಞಾನ ಶಿಸ್ತುಗಳಾದ ಕಲೆ-ವಿಜ್ಞಾನ ಸಮಾಜ ವಿಜ್ಞಾನದ ಶಾಖೆಗಳು ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆ ಹೀಗೆ ಅನೇಕ ವಿಷಯಗಳ ಬಗ್ಗೆ ನಡೆದ ಚಿಂತನೆಯೊಂದಿಗೆ ಶಿಕ್ಷಣದ ಚಿಂತನೆಯೂ ನಡೆದಿದೆ. ಬಹುಮುಖ್ಯವಾಗಿ ಶಿಕ್ಷಣದ ಸಾರ್ವತ್ರಿಕರಣ ನಡೆದದ್ದು ವಸಾಹತು ಶಾಹಿಗಳಿಂದ (ಬ್ರಿಟಿಷರಿಂದ) ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಶಿಕ್ಷಣದ ಸಾರ್ವತ್ರಿಕರಣ ನಡೆದದ್ದು, ಬಸವಾದಿ ಶರಣರಲ್ಲಿ. ಆದರೆ ಈ ಸತ್ಯವನ್ನು ಯಾರೂ ಜನಪ್ರಿಯಗೊಳಿಸಲಿಲ್ಲ. ಭಾರತದಲ್ಲಿ ಕಾಳಿದಾಸ ತನ್ನ ಮೇರು ಕೃತಿಗಳನ್ನು ರಚಿಸುತ್ತಿದ್ದಾಗ ಬ್ರಿಟಿಷರು ಇನ್ನೂ ಅಲೆಮಾರಿಗಳಾಗಿದ್ದರು. ಕನ್ನಡದಲ್ಲಿ ಪಂಪ, ರನ್ನ, ಪೊನ್ನರಂತಹ ಕವಿಗಳು ತಮ್ಮ ಶ್ರೇಷ್ಠ ಕೃತಿಗಳನ್ನು ರಚಿಸುತ್ತಿದ್ದಾಗ ಬ್ರಿಟಿಷರು ತಮ್ಮತನಕ್ಕಾಗಿ ಹೋರಾಡುತ್ತಿದ್ದರು. ನಮ್ಮಲ್ಲಿ ಬಸವಣ್ಣ ವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ ಮನುಕುಲದ ಉದ್ಧಾರಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಇದೇ ಯುರೋಪ ಕತ್ತಲಿನಲ್ಲಿ ಮುಳುಗಿತ್ತು. ಭಾರತೀಯರು ಬ್ರಿಟಿಷರಿಗಿಂತ ಮೊದಲೇ ನಾಗರೀಕತೆಯ ಉತ್ತುಂಗ ಶಿಖರ ತಲುಪಿದರು ಎನ್ನುವುದನ್ನು ಈ ಸಂಗತಿಗಳು ಸ್ಪಷ್ಟಪಡಿಸುತ್ತವೆ ಎಂಬ ಡೋಣೂರು ಬಸವರಾಜ ದಾಖಲಿಸಿದ್ದಾರೆ.
ಮಧ್ಯಕಾಲಕ್ಕಿಂತ ಮೊದಲು ಮತ್ತು ನಂತರ ಶಿಕ್ಷಣಕ್ಕೆ ಜಾತಿಯ ವೇಷವಿತ್ತು. ಇಂದು ವರ್ಗದ ವೇಷವಿದೆ. ಎಲ್ಲರಿಗೂ ಉಚಿತ ಶಿಕ್ಷಣವೆಂಬ ಕಲ್ಯಾಣ ರಾಜ್ಯದ ಘೋಷಣೆ ಜನತೆಯ ನಡುವೆ ಜಾರಿಯಾಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಲ್ಯಾಣ ರಾಜ್ಯವೆಂದರೆ ಜಾತಿ, ಮತ, ಪಂಥ, ಲಿಂಗ, ವರ್ಣ, ವರ್ಗ ಹೀಗೆ ಯಾವುದೇ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವುದು, ಗೌರವಿಸುವುದು. ಕಲ್ಯಾಣ ರಾಜ್ಯದ ಶಿಕ್ಷಣವೆಂದರೆ ಮೇಲಿನ ಯವುದೇ ಭೇದಭಾವನೆ ಮಾಡದೆ ಆಸಕ್ತಿ, ಕೌಶಲ್ಯ ಆಧಾರಿತವಾದ ಆಯ್ಕೆಯ ಉಚಿತ ಶಿಕ್ಷಣ ನೀಡುವುದು. ಇಂದು ಶಿಕ್ಷಣವು ಖಾಸಗೀಕರಣಗೊಳ್ಳುತ್ತಿದೆ. ಸುಮಾರು 250 ಡಿಮ್ಡ ವಿಶ್ವವಿದ್ಯಾಲಯಗಳು ವಿದೇಶಿ ರಾಷ್ಟ್ರಗಳಿಂದ ಆಗಮಿಸುತ್ತಿವೆ. ಬಿಹಾರ, ಓರಿಸ್ಸಾದಲ್ಲಿ ಈ ಪ್ರಕ್ರಿಯ ಆರಂಭವಾಗಿದೆ. ಇದಕ್ಕೆ ನಮ್ಮ ರಾಜಕಾರಣಿಗಳು ಮಣೆ ಹಾಕುತ್ತಿದ್ದಾರೆ. ಇದರಿಂದ ಉಳ್ಳವರಿಗೆ ಮಾತ್ರ ಶಿಕ್ಷಣ ದೊರೆಯುತ್ತದೆ. ಉತ್ತಮ ಹಾಗೂ ಉಚಿತ ಶಿಕ್ಷಣ ಸಿಗದಿದ್ದಾಗ ನಮ್ಮ ಯುವಕರು ಸಹಜವಾಗಿ ಬಡವರಾಗುತ್ತಾರೆ, ಭಯೋತ್ಪಾದಕರಾಗುತ್ತಾರೆ, ಭ್ರಷ್ಟಚಾರಿಗಳಾಗುತ್ತಾರೆ. ಇಂದಿನ ಶಿಕ್ಷಣದಲ್ಲಿ ಒಂದು ಸಾಂಪ್ರದಾಯಿಕ ಶಿಕ್ಷಣವಿದೆ. ಅದು ಬಹುಜನರಾದ ಎಲ್ಲ ಬಡವರಿಗೆ ದೊರಕುತ್ತದೆ. ಆದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಎಂ.ಎ., ಪಿಎಚ್.ಡಿ. ಓದಿಯೂ ರಸ್ತೆ ಕಾಮಗಾರಿಗೆ ಇಳಿದ ಉದಾಹರಣೆಗಳಿವೆ. (ಪ್ರಜಾವಾಣಿ 28-12-2006 : ಪಿಎಚ್.ಡಿ. ಪಡೆದು ರಸ್ತೆ ಕೆಲಸ) ಇದಕ್ಕೆ ಕಾರಣ ಬದುಕಿಗೂ ಶಿಕ್ಷಣಕ್ಕೂ ಸಂಬಂಧವಿಲ್ಲ. ಕೇವಲ ಬಿ.ಎ. ಓದಿದ ಕಾರಣಕ್ಕಾಗಿಯೇ ನಮ್ಮ ಯುವಕರು ನೇಗಿಲು ಹಿಡಿಯಲಾರರು. ಒಂದು ಹೊರೆ ಹುಲ್ಲನ್ನು ತರಲಾರರು.
ಇನ್ನೊಂದು ವೃತ್ತಿ ಶಿಕ್ಷಣ ಅದು ಅಲ್ಪಸಂಖ್ಯಾತರಾದ ಉಳ್ಳವರ ಶಿಕ್ಷಣ ಅದು ಶ್ರೀಮಂತರಿಗೆ, ರಾಜಕೀಯ ಲಾಭ ಪಡೆದವರಿಗೆ, ಉನ್ನತ ಹುದ್ದೆಯಲ್ಲಿರುವವರಿಗೆ, ಸುಲಿಗೆ ಮಾಡುವವರಿಗೆ ಮಾತ್ರ ದಕ್ಕುತ್ತದೆ.
ಈ ಎರಡು ಕಡೆಗಳಲ್ಲಿ ಪರಂಪರಾಗತ ಜ್ಞಾನಗಳಾದ ಕೃಷಿ, ಕುಶಲಕಲೆ, ನಾಟಿ ವೈದ್ಯ ಪದ್ಧತಿ, ಪಶು ವೈದ್ಯ, ಯೋಗ, ಆಯುವರ್ೇದ, ಮಾನವಿಕಗಳಾದ ಭಾಷೆ, ಸಾಹಿತ್ಯಗಳ, ಸರಳ ಜೀವನ ವಿಧಾನ ಮೊದಲಾದವುಗಳೆಲ್ಲ ಕಡೆಗಣಿಸಲ್ಪಟ್ಟಿವೆ. ಬಸವಣ್ಣನವರು ಸರ್ವರಿಗೂ ಶಿಕ್ಷಣ ನೀಡಿ, ಅದನ್ನು ಖಾಸಗೀಕರಣ ಮಾಡಿದರು. ಹಾಗೆ ನೋಡಿದರೆ ವಯಸ್ಕರ ಶಿಕ್ಷಣ, ಕಾಮರ್ಿಕ ಶಿಕ್ಷಣ ಮತ್ತು ಮಹಿಳಾ ಶಿಕ್ಷಣ ಆರಂಭಿಸಿದ್ದು ಬಸವಣ್ಣನವರೆ. ಅವರು ಎಂದೂ ಉಳ್ಳವರಿಗೆ ಶಿಕ್ಷಣ ನೀಡಲಿಲ್ಲ. ಆಸಕ್ತಿ ಇದ್ದವರಿಗೆ ಶಿಕ್ಷಣ ನೀಡಿದರು. ಇಂದು ಕಲಾ ವಿಭಾಗದ ಆಸಕ್ತಿಯವರಿಗೆ ಇಂಜಿನಿಯರಿಂಗ್ ಮಾಡಿಸುತ್ತೇವೆ. ಇಲ್ಲಿ ವಿದ್ಯಾಥರ್ಿಯ ಆಸಕ್ತಿಗಿಂತ ಪಾಲಕರ ಪ್ರತಿಷ್ಠೆ ದೊಡ್ಡದಾಗಿರುತ್ತದೆ.
ಬಸವಣ್ಣನವರು ಕೌಶಲ್ಯ ಆಧಾರಿತ ಶಿಕ್ಷಣ ನೀಡಿದರು. ಇದರರ್ಥ ಕುಂಬಾರನ ಮಗ ಕುಂಬಾರನೆ ಆಗಬೇಕೆಂದಲ್ಲ. ಹಾಗೆ ನಡೆದದ್ದು ಇಲ್ಲ. ಮೋಳಗೆ ಮಾರಯ್ಯ ಅಸರನಾಗಿದ್ದರೂ ಕಟ್ಟಿಗೆ ಕಾಯಕ ಮಾಡಿದ, ಮದ್ದಳೆ ಬಾರಿಸುವ ಅಲ್ಲಮ ಶೂನ್ಯ ಪೀಠ ವೇರಿದ, ಹೀಗಾಗಿ ಪ್ರಾವಿಣ್ಯ ಮತ್ತು ಪರಿಣತಿ ಆಧಾರದ ಶಿಕ್ಷಣ ನೀಡಿದರು.
ಇನ್ನೊಂದು ವಿಪಯರ್ಾಸದ ಸಂಗತಿ ಎಂದರೆ ಸೆಗಣಿಯನ್ನೇ ನೋಡಿರದವರು ಕೃಷಿಯಲ್ಲಿ ಎಮ್.ಎಸ್ಸಿ, ಡಾಕ್ಟರೇಟ್ ಪಡೆಯುತ್ತಿದ್ದಾರೆ. ಪತ್ರಿಕೆಯಲ್ಲೊಮ್ಮೆ ಚಚರ್ೆಗೆ ಬಂದ ವಿಷಯ ನೆನಪಾಗುತ್ತದೆ. ಶಾಲೆಯಲ್ಲಿ ಮಾಸ್ತರ ಕಾಮಧೇನು ಎಂದರೇನು ಎಂಬ ಪ್ರಶ್ನೆಗೆ ಮಗುವಿನ ಉತ್ತರ ಬೇಕಾದಾಗಲ್ಲೆಲ್ಲ ಹಾಲು, ಮೊಸರು, ಬೆಣ್ಣೆ, ಕೊಡುವ ನಮ್ಮ ಮನೆಯ ಫ್ರಿಜು ಎಂದು ಉತ್ತರಿಸಿದ್ದು, ಶಿವದೇವಾಲಯದ ಎದುರು ಇದ್ದ ನಂದಿ (ಎತ್ತು) ಕುರಿತು ಮಗು ವಾಟೀಜ್ ಧಿಸ್ (ಇದು ಏನು) ಎಂದು ತಾಯಿಗೆ ಕೇಳಿದಾಗ, ತಾಯಿ ಧಿಸ್ ಇಜ್ ಕೌ (ಇದು ಆಕಳು) ಎಂದು ಉತ್ತರಿಸಿದ್ದು, ಆಧುನಿಕ ಶಿಕ್ಷಣದ ಅಧೋಗತಿಗೆ ಹಿಡಿದ ಕನ್ನಡಿಯಾಗಿದೆ.
ಆಧುನಿಕ ಶಿಕ್ಷಣದ ಇನ್ನೂ ಎರಡು ಅಪಾಯಗಳೆಂದರೆ, ಹೆಚ್ಚು ಓದಿ ಕಡಿಮೆ ದುಡಿಯುವುದು ಮತ್ತು ಬೇರೊಬ್ಬರನ್ನು ಮೋಸ ಮಾಡುವುದು. ಇದರಿಂದ ಮನುಷ್ಯ ಮನುಷ್ಯರ ಮಧ್ಯ ಕಂದರವುಂಟಾಗುತ್ತಿದೆ. ಅದಕ್ಕೆ ಬಸವಣ್ಣವರು
 
 ಅಕ್ಷರ, ಗಣಿತ, ಗಾಂಧರ್ವ ಜ್ಯೋತಿಷ್ಯ
    ತರ್ಕ, ವ್ಯಾಕರಣ, ನಿಘಂಟು, ಸಾಲಿಹೋತೃ, ಛಂದಸ್ಸು
    ಗ್ರಹವಾದ .............................
    ಇವೆಲ್ಲವಂ ಕಲಿತಡೇನು ?
    ಚೌಷಷ್ಟಿವಿದ್ಯ ಕಲಾ ಪ್ರವೀಣನೆನಿಸಿ ಕೊಂಬನಲ್ಲದೆ
    ಲಿಂಗಭಕ್ತನೆನಿಸಿಕೊಂಬುವುದಿಲ್ಲ.
    ಲಿಂಗವುಳ್ಳ ನಿಜ ಶರಣಗೆ ಇವರೆಲ್ಲರೂ (ಸರಿಬಾರರು)
    ಸಹಜ ಸದ್ಭಕ್ತಿಯಿಲ್ಲದವನೊಲ್ಲ.
    ನಮ್ಮ ಕೂಡಲ ಸಂಗಮ ದೇವರು ಎಂದಿದ್ದಾರೆ.


ಹೀಗೆ ಅಕ್ಷರ ಬಲ್ಲವರೆಲ್ಲ ಜ್ಞಾನಿಗಳಾಗಿರುವುದಿಲ್ಲ. ಅಂತೆಯೇ ರೂಸೋ ಹೇಳುತ್ತಾನೆ. ತನ್ನ ಶಿಷ್ಯರು ಅನಕ್ಷರಸ್ಥರಿರಬಹುದು. ಆದರೆ ಆಜ್ಞಾನಿಗಳಾಗಿರುವುದಿಲ್ಲವೆಂದು. ತನ್ನತಾ ತಿಳಿಯುವ ಜ್ಞಾನ ನಿಜವಾದ ಶಿಕ್ಷಣ. ವೇದಶಾಸ್ತ್ರ ಓದಿದ ಮಾತ್ರಕ್ಕೆ ಜ್ಞಾನಿಗಳಲ್ಲ. ಕವಿ ಗಮಕಿಯಾದಿ ವಾಗ್ಮಿಗಳು ಹಿರಿಯರಲ್ಲವೆಂದು ಹೇಳುವ ಬಸವಣ್ಣನವರು ನಟನಿ ಬಾಣ ವಿಲಾಸಿ ಸುವಿದ್ಯವ ಕಲಿತ ದೊಂಬನೇನು ಕಿರಿಯೆನೆ ? ಎಂದು ಪ್ರಶ್ನಿಸುವ ಮೂಲಕ ಜ್ಞಾನವೆಂದರೆ ಗುಣವೆಂದೂ ಸಾರುತ್ತಾರೆ. ಹೀಗೆ ಚಾರಿತ್ರಿಕ, ಮೌಲ್ಯ ಆಧಾರಿತವಾದ ಶಿಕ್ಷಣ ನೀಡಿದ ಶರಣರ ಪಾರಂಪರಿಕ ಜ್ಞಾನದ ಶಿಕ್ಷಣ ಇಂದು ನಮಗೆ ಬೇಕು. ಏಕೆಂದರೆ ಓದು (ಶಿಕ್ಷಣ) ನಮ್ಮೊಳಗೆ ಉಪಯೋಗವಾಗಬೇಕು. ಇಂದು ಹಳ್ಳಿಯಲ್ಲಿ ಓದಿದವನು ಪಟ್ಟಣಕ್ಕೆ ಮುಖ ಮಾಡಿದರೆ, ಪಟ್ಟಣದಲ್ಲಿ ಓದಿದವನು ಅಮೇರಿಕಾಕ್ಕೆ ಮುಖ ಮಾಡುತ್ತಾನೆ. ಅಂಥವರಿಂದ ತಮ್ಮನ್ನು ರೂಪಿಸಿದ ಪರಿಸರಕ್ಕೆ ಏನನ್ನು ನಿರೀಕ್ಷಿಸಲು ಸಾಧ್ಯವಿದೆ.
ಶಿಕ್ಷಣ ಸಮಷ್ಟಿ ಪ್ರಜ್ಞೆ ಹೊಂದಿರಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಪ್ರಾಥಮಿಕ ಶಿಕ್ಷಣದಲ್ಲಿಯೇ ಅರಣ್ಯ, ಕೃಷಿ, ಕುಶಲಕಲೆ ಗುಡಿ ಕೈಗಾರಿಕೆ, ವಿಷಯಾಧಾರಿತ ಶಿಕ್ಷಣವಿರಬೇಕು. ಅದು ಸ್ವಾವಲಂನೆಯ ಬದುಕಿನ ಪ್ರಜ್ಞೆಯನ್ನು ಮೂಡಿಸುವಂತಾಗಬೇಕು. ಬದುಕುವುದೆಂದರೆ ಬರೀ ಉಸಿರಾಡುವುದಲ್ಲ. ಕ್ರಿಯಾಪೂರ್ಣವಾಗಿರುವುದು ನಮ್ಮ ಅಂಗಾಂಗಳನ್ನು, ಇಂದ್ರಿಯಗಳನ್ನು ನಮ್ಮ ಇರುವಿಕೆಗೆ ನೆರವಾಗುವ ಎಲ್ಲ ಶಕ್ತಿಗಳನ್ನು ಪೂರ್ಣವಾಗಿ ಬಳಸಿ ಕೊಳ್ಳುವುದು ಎಂಬ ರೂಸೋನ ಅಭಿಪ್ರಾಯವು ಸ್ವಾವಲಂಬಿತ ಶಿಕ್ಷಣ ಪ್ರಜ್ಞೆಗಾಗಿ ಹೇಳಿದಂತಿದೆ. ಹಾಗೆಯೇ ಬಸವಣ್ಣನವರು ಕಾಯಕದಿಂದ ಅರ್ಥ ಮತ್ತು ಪಾರಮಾರ್ಥ ಪಡೆದ ಶಿಕ್ಷಣ ಬೋಧಿಸಿದರು. ಚಾರಿತ್ರ್ಯ ನೈತಿಕತೆಯ ಆಧಾರಿತ ಶಿಕ್ಷಣದಿಂದ ಉತ್ತಮ ಮನುಷ್ಯರ ಉತ್ತಮ ಸಮಾಜಕಟ್ಟಲು ಸಾಧ್ಯವಿದೆ ಎಂಬುವುದನ್ನು ಹೇಳಿಕೊಟ್ಟರು. ನಮಗಿಂದು ಅಂಥ ಶಿಕ್ಷಣದ ಅವಶ್ಯಕವಿದೆ. ಹೀಗೆ ಬಸವಣ್ಣನವರ ಶೈಕ್ಷಣಿಕ ಆಲೋಚನೆಗಳು ಜೀವಪರ ಜನಪರವಾಗಿದ್ದು, ಅವುಗಳನ್ನು ಅಳವಡಿಸಿಕೊಂಡರೆ, ಶಾಂತಿ ಪ್ರೀತಿಯ ಅಭಿವೃದ್ಧಿಶೀಲ, ಕಲ್ಯಾಣ ರಾಷ್ಟ್ರ ಕಟ್ಟಬಹುದು ಮತ್ತು ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಶರಣರು ಮತ್ತು ಪರಿಸರ

ಶರಣರು ಮತ್ತು ಪರಿಸರ
 ಡಾ. ಬಸವರಾಜ ಬಲ್ಲೂರ
ಮೊ: 9242428179 /9738418468

      ಪರಿಸರ ಸಂರಕ್ಷಣೆ ಇಂದಿನ ತುತರ್ು ಅಗತ್ಯಗಳಲ್ಲಿ ಒಂದಾಗಿದೆ. ಗಾಂಧೀಜಿಯ ಒಂದು ಮಾತಿದೆ ಈ ನಿಸರ್ಗಕ್ಕೆ ಮನುಷ್ಯರ ಎಲ್ಲ ಆಸೆಗಳನ್ನು ಪೂರೈಸುವ ಶಕ್ತಿಯಿದೆ. ಆದರೆ ಒಂದೇ ಒಂದು ದುರಾಸೆಯನಲ್ಲ ಎಂಬುದು ಇದರರ್ಥ. ನಾವು ಪರಿಸರದೊಂದಿಗೆ ಬದುಕಬೇಕು. ಅದೂ ಸದಾಶಯದೊಂದಿಗೆ. ಅಂದಾಗ ನಮ್ಮ ಎಲ್ಲ ಆಸೆಗಳು ಪೂರೈಕೆಯಾಗುತ್ತವೆ. ಪರಿಸರವೆಂದರೆ ಕೇವಲ ಸುತ್ತಲಿನ ಭೂಮಿ ಮಾತ್ರವಲ್ಲ. ಪಂಚಭೂತಗಳೊಂದಿಗೆ ಚರಾಚರ ವಸ್ತುಗಳೆಲ್ಲ ಸೇರಿದ ಅಖಂಡ ವಿಶ್ವ. ಆದರೆ ದುರಂತದ ಸಂಗತಿಯೆಂದರೆ ನಮ್ಮ ಪಂಚಭೂತಗಳು ಇಂದು ಅತ್ಯಂತ ಕಲುಷಿತವಾಗಿವೆ. ಪರಿಸರ ವಿಜ್ಞಾನಿಗಳು ನಿರಂತರ ಎಚ್ಚರಿಸುತ್ತಿದ್ದಾರೆ. ಭೂಮಿ ಬಿಸಿಯಾಗುತ್ತಿದೆ. ಅಂತರ್ ಜಲ ಪ್ರಮಾಣ ಕಡಿಮೆಯಾಗಿದೆ. ಋತುಮಾನಗಳು ಬದಲಾಗುತ್ತಿವೆ. ಹಿಮ ಕರಗುತ್ತಿದೆ. ಹೀಗೆ ಅನೇಕ ರೀತಿಯ ವ್ಯತ್ಯಯ (ಬದಲಾವಣೆ)ಗಳು ನಮ್ಮ ಪರಿಸರದಲ್ಲಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಮನುಷ್ಯರ ಅಹಂ ಮತ್ತು ದುರ್ಬಲವಾದ ಮನಸ್ಸು ಹಾಗೂ ಸಂಪತ್ತಿನ ಕ್ರೋಢಿಕರಣ. ಬಸವಾದಿ ಶರಣರ ಆಶಯವೆಂದರೆ ಅಹಂ ನಿರಸವಾಗುವುದು ಮನಸ್ಸಿನ ಪ್ರಾಬಲ್ಯ ಹೆಚ್ಚಿಸುವುದು ಮತ್ತು ಅಸಂಗ್ರಹ ತತ್ವವನ್ನು ಜಾರಿಗೆ ತರುವುದಾಗಿತ್ತು.
ಭಾರತೀಯ ಸಂದರ್ಭದಲ್ಲಿ ಹೆಣ್ಣಿನ ಮೇಲೆ ಆದ ಆಕ್ರಮಣದಂತೆ ಪ್ರಕೃತಿ ಮೇಲೆಯೂ ಆಕ್ರಮಣ ನಡೆದಿದೆ. ಆಥರ್ಿಕವಾಗಿ ಪುರುಷ ಸದೃಢವಾದಂತೆ, ಅವನ ಆಸೆ ಆಕಾಂಕ್ಷೆಗಳು ಹೆಚ್ಚಾದವು. ಅದರಂತೆ ಹೊಸ ವಸ್ತುವಿನ ಉತ್ಪಾದನೆಯಾದವು. ಇದರಿಂದ ನಿಸರ್ಗದ ಮೇಲೆ ದಾಳಿ ಮಾಡಲು ಅನುವಾಯಿತು.
ನಮಗೆ ಒಂದು ಬಿಳಿ ಹಾಳೆ ಯಾವ ಲೆಕ್ಕಕ್ಕೂ ಇಲ್ಲ. ಸಣ್ಣ ತಪ್ಪಾದರೂ ಸರಿ ಹರಿದು ಬಿಸಾಕುತ್ತೇವೆ. ಆದರೆ ಒಂದು ಹಾಳೆ ತಯಾರಾಗಲು ಅರ್ಧ ಮರ ಬೇಕಾಗಬಹುದು. ಮರವೆಂದರೆ ಕೇವಲ ನಾಲ್ಕು ಟೊಂಗೆಗಳ ಒಂದು ಆಕೃತಿಯಲ್ಲ. ನೂರಾರು ಜನರಿಗೆ ನೆರಳಾಗಿ ಆಮ್ಲಜನಕ ಘಟಕವಾಗಿ ಸಾವಿರಾರು ಪಕ್ಷಿಗಳಿಗೆ ಆಶ್ರಯವಾಗಿ, ಉರುವಲಾಗಿ, ಉಪಯುಕ್ತ ವಸ್ತುವಾಗಿ ಹೀಗೆ ಬಹುಪಯೋಗಿಯಾಗಿ ಬಳಕೆಯಾಗಿರುವ ಒಂದು ಪರಿಸರ. ಹಾಗೇ ಒಂದು ಸಣ್ಣ ಗುಂಡು ಸೂಜಿ ಕೂಡ ಉತ್ಪಾದನೆಯಾಗಲು ಬೇಕಾಗುವ ಕಚ್ಚಾ ಗಣಿ ಅದೇಷ್ಟೋ ಪಾಲು.
ಆಧುನಿಕ ಜಗತ್ತನ್ನು ವಸ್ತುಗಳ ಲೋಕ ವೆಂದು ಕರೆಯುತ್ತೇವೆ. ವಸ್ತು ವ್ಯಾಮೋಹ ಹೆಚ್ಚಾಗಿದೆ. ಹತ್ತು ರೂಪಾಯಿ ಆದಾಯ ಹೆಚ್ಚಾದರೆ ಹೊಸ ವಸ್ತು ತರುವ ಆಲೋಚನೆ ಮಾಡುತ್ತೇವೆ. ಇದರ ಅಡ್ಡ ಪರಿಣಾಮಗಳ ಬಗ್ಗೆ ಎಂದು ಆಲೋಚಿಸಿಲ್ಲ. 1985 ರ ಮೇ ತಿಂಗಳಲ್ಲಿ ಅಂಟಾಟರ್ಿಕ್ ಮೇಲಿನ ವಾತಾವರಣದ ಓಜೋನ್ ಪದರದಲ್ಲಿ ರಂಧ್ರವೊಂದು ಕಾಣಿಸಿಕೊಂಡಾಗ ವಿಶ್ವದ ವಿಜ್ಞಾನಿಗಳ ಸಮುದಾಯ ತಲ್ಲಣಗೊಂಡಿತ್ತು. ಓಜೋನ್ ಎಂದರೆ ಭೂಮಿಯಿಂದ ಸುಮಾರು 30 ಕಿ.ಮೀ. ಎತ್ತರದಲ್ಲಿ ಭೂಮಿಗೆ ಹಿಡಿದಿರುವ ಒಂದು ಕೊಡೆ ಇದು ಭೂಮಿಯ ಮೇಲಿನ ಎಲ್ಲ ಜೀವ ಸಂಕುಲಗಳನ್ನು ಸೂರ್ಯನ ನೇರವಾದ ಅತೀ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಜೀವ ರಕ್ಷಕ ಓಜೋನ್ ಪದರಿಗೆ ರಂಧ್ರ ಬೀಳುತ್ತಿರುವುದು ಜೀವ ಸಂಕುಲದ ವಿನಾಶದ ಸಂಕೇತವಾಗಿದೆ. ದಿನನಿತ್ಯ ನಾವು ಬಳಸುವ ವೈಭವದ ವಸ್ತು (ಇಂಧನ ಸಾಮಗ್ರಿ, ರೆಫ್ರಿಜನಲ್ ಕ್ಲೋರೀನ್, ಪ್ಲೋರಿನ್, ಇಂಗಾಲದ ಕ್ರಿಮಿನಾಶಕ ಇತ್ಯಾದಿ) ಗಳಿಂದ ಓಜೋನ್ ಹಾಳಾಗಿ ಭೂಮಿಯ ಶಾಖ ಹೆಚ್ಚಾಗುತ್ತಿದೆ. ನಗರೀಕರಣದಿಂದ ಕಾಡು ನಾಡಾಗುತ್ತಿದೆ. ಇದರಿಂದ ಋತುಮಾನವು ಬದಲಾಗಿದೆ. ಇದರಿಂದ ಹಿಮ ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಕಡಲ ತೀರದ ಊರುಗಳು ಮುಳುಗಿ ಮುಂದೆ ಎಲ್ಲರೂ ಮುಳುಗುತ್ತೇವೆ. ಅದಕ್ಕಾಗಿಯೇ ವಚನಕಾರರು ಖಾಸಗಿ ಆಸ್ತಿಯನ್ನು ವಿರೋಧಿಸಿ ಸಂಗ್ರಹ ತತ್ವದ ದಾಸೋಹವನ್ನು ರೂಢಿಸಿದರು.
ಅನ್ನದೊಳಗೊಂದಗುಳ, ಸೀರೆಯೊಳೆಗೊಂದೆಳೆಯ ಇಂದಿಂಗೆ ನಾಳಿಂಗೆನೆಂದೆನಾದೊಡೆ ನಿಮ್ಮಾಣೆ ಎನ್ನುವ ಬಸವಣ್ಣನವರ ಮಾತಿನಲ್ಲಿ ಅಸಂಗ್ರಹ ತತ್ವದ ಆಶಯಗಳಿವೆ. ಸರಳ ಬದುಕಿನ ಸೂತ್ರವಿದೆ. ಸರಳ ಬದುಕಿನಿಂದ ಮಾತ್ರ ಜಗತ್ತು ಸುಂದರವಾಗಿಡಲು ಸಾಧ್ಯವಿದೆ. ಅದಕ್ಕಾಗಿ ನಮ್ಮ ಪಂಚಭೂತಗಳು ಶುದ್ಧವಾಗಿರಬೇಕು. ಜೊತೆಗೆ ನಮ್ಮ ಮನಸ್ಸು ಕೂಡ. ಪಂಚಭೂತಗಳಾದ ನೆಲ, ಜಲ, ಅಗ್ನಿ, ಗಾಳಿ ಮತ್ತು ಆಕಾಶಗಳು ಶುದ್ಧವಾಗಿಡುವ ಕುರಿತು ಚೆನ್ನಬಸವಣ್ಣನ ನಿಲುವೆಂದರೆ,
 

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯ
ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರ
ಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯ
ಆಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯ
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ
ಕೊಳ್ಳೆನು ಕೂಡಲ ಚನ್ನಸಂಗಾ ನಿಮ್ಮಾಣೆ


ಭೂಮಿಯನನ್ನೊಳಗೊಂಡ ಎಲ್ಲ ವಸ್ತುಗಳನ್ನು ಭಕ್ತ ಮಾಡೋದು ಎಂದರೆ ಅವನನ್ನು ಪರಿಶುದ್ಧವಾಗಿ ಮಾಡುವುದು. ಭಕ್ತ ಎಂದರೆ ಆರಾಧನೆ, ಪೂಜೆ ಎಂದರ್ಥ. ನಾವು ಯಾವ ವಸ್ತುಗಳನ್ನು ಆರಾಧಿಸುತ್ತೇವೆಯೋ, ಪೂಜಿಸುತ್ತೇವೆಯೋ ಅವುಗಳನ್ನು ಮಲೀನಗೊಳಿಸುವುದಿಲ್ಲ. ದೇವರನ್ನು ಆರಾಧಿಸುತ್ತೇವೆಂದರೆ ದೇವಾಲಯವನ್ನು ಮಲೀನಗೊಳಿಸುವುದಿಲ್ಲ. ದುರಂತವೆಂದರೆ ಭೂಮಿ, ಆಕಾಶ (ಚಂದ್ರ) ಅಗ್ನಿ, (ಸೂರ್ಯ) ಜಲ, (ಗಂಗೆ) ಮೊದಲಾದವುಗಳನ್ನು ಆರಾಧಿಸಿಯೂ ಅಪವಿತ್ರಗೊಳಿಸಿದ್ದೇವೆ. ಹಾಗೆ ನೋಡಿದರೆ ಜನಪದ ಗರತಿಯ ಮೊದಲ ನಮನ ಭೂಮಿಗಿದೆ.
ಎದ್ದೊಂದು ಗಳಿಗೆಯ ಯಾರ್ಯಾರ ನೆನೆಯಲಿ
ಎಳ್ಳು ಜೀರಗೆ ಬೆಳೆವ | ಭೂದೇವಿಯ
ಎದ್ದೊಂದು ಗಳಿಗೆ ನೆನದೇನ ||
    ನಮ್ಮ ಪೂರ್ವಜರಿಗೆ ಭೂಮಿಯ ಶಕ್ತಿ ಮತ್ತು ಗುಣ ಗೊತ್ತಿದ್ದವು. ಅದಕ್ಕಾಗಿ ಅದನ್ನು ಆರಾಧಿಸಿದರು. ಪ್ರೀತಿಸಿದರು. ಭೂಮಿಯನ್ನು ಹಾಳು ಮಾಡಲಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ, ಪ್ಲಾಸ್ಟಿಕ್ ಮೊದಲಾದ ಬಳಕೆಗಳಿಂದ ಭೂಮಿಯ ಸತ್ವ ನಾಶವಾಗುತ್ತಿದೆ. ಅಲ್ಲದೆ ಸಂಪತ್ತಿನ ದಾಹದಿಂದ ಹೆಚ್ಚು ಇಳುವರಿ ಬರುವ ಹೈಬ್ರಿಡ್ ತಳಿಗಳನ್ನು ಬಳಿಸಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಹಿಂದೆ ಭೂಮಿ ಕಾಯ್ದಿಡುವ ಪದ್ಧತಿ ಇತ್ತು. ನಮ್ಮಲ್ಲಿ ವರ್ಷಕ್ಕೆರಡು ತಿಂಗಳಾದರೂ ಒಮ್ಮೊಮ್ಮೆ ಒಂದೇ ಬೆಳೆ ಪಡೆದು ಸಂತೃಪ್ತರಾಗಿದ್ದೆವು. ಅದಕ್ಕೆ ಚನ್ನಬಸವಣ್ಣನವರು ಭೂಮಿಯ ಭಕ್ತನ ಮಾಡಬೇಕೆಂದಿದ್ದಾರೆ. ಒಂದು ಉದಾಹರಣೆ ಗಮನಿಸುವುದಾದರೆ ಗಂಗಾಸ್ನಾನ ತುಂಗಾಪಾನ ವೆಂಬ ನಾಣ್ಣುಡಿಯೊಂದಿದೆ. ಇಂದು ಗಂಗೆಯಲ್ಲಿ ಮಿಂದರೆ (ಸ್ನಾನ ಮಾಡಿದರೆ) ಎಲ್ಲ ಚರ್ಮರೋಗಗಳು ತಗಲುತ್ತವೆಂದು ವೈದ್ಯ ಲೋಕ ದೃಢಪಡಿಸಿದೆ. ಅಷ್ಟರ ಮಟ್ಟಿಗೆ ಗಂಗೆಯನ್ನು ಅಪವಿತ್ರಗೊಳಿಸಿದ್ದೇವೆ. ಭೂಮಿಯ ಜಲಮಾಲಿನ್ಯಕ್ಕೆ ಒಂದು ಉದಾ: ಎಂದರೆ ಕೇವಲ ಅಮೇರಿಕದ ನೀರಿನಲ್ಲಿ 50 ಸಾವಿರ ವಾಣಿಜ್ಯ, 65 ಸಾವಿರ ಮೀನು ಹಿಡಿಯುವ ಹಡಗುಗಳು, 1600 ಸಕರ್ಾರಿ ಹಡಗುಗಳ ಸುಮಾರು 8 ದಶಲಕ್ಷ ಮನೋರಂಜನಾ ದೋಣಿಗಳು ತೇಲುತ್ತವೆ. ಇವುಗಳ ಹೊಲಸು ವಿಸರ್ಜನೆಯೊಂದಿಗೆ 5 ದಶಲಕ್ಷ ಜನರ ಮಲಮೂತ್ರ ವಿಸರ್ಜನೆಯೂ ಸೇರಿರುತ್ತವೆ. ಸಾಮಾನ್ಯವಾಗಿ ನಗರ ಪ್ರದೇಶಗಳ ಚರಂಡಿ ನೀರು ಶುದ್ಧ ನೀರಿಗೆ ಬೆರಕೆಯಾಗಿ ಜಲಮಾಲಿನ್ಯ ಉಂಟಾಗುತ್ತದೆ. ನಮ್ಮಲ್ಲಿ ಅನೇಕ ರೋಗಗಳ ತವರು ಅಶುದ್ಧ ನೀರು. ಪಟ್ಟಣಗಳಲ್ಲಿ ಚರಂಡಿ ಮತ್ತು ಕುಡಿಯುವ ನೀರು ಜೊತೆಯಾಗಿಯೇ ಚಲಿಸುವುದರಿಂದ ವರ್ಷಕ್ಕೆ 16,600 ಎಳೆಯ ಮಕ್ಕಳ ಸಾವಾಗುತ್ತದೆ. ಮನುಷ್ಯರ ದೇಹದಲ್ಲಿನ ರಕ್ತನಾಳಗಳು ಸಹ ಶುದ್ಧ ರಕ್ತನಾಳ-ಅಶುದ್ಧ ರಕ್ತನಾಗಳೆಂದಿವೆ. ಆದರೆ ಮಳೆ ನೀರು, ನಾಲಿ ನೀರು, ಬೆರೆತುಗೊಂಡು ಶುದ್ಧ ನೀರು ಸೇರುವುದು ಜಲ ಮಾಲಿನ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ನೀರಲ್ಲಿದ್ದ ಮೀನುಗಳು ಮಾಯವಾಗಿವೆ. ಭೂಮಿಯ ಮೇಲೆ ಜೀವಿ ಬದುಕಲು ಗಾಳಿಯ ನಂತರ ನೀರೇ ಮುಖ್ಯವಾಗಿದೆ. ಅದಕ್ಕಾಗಿ ಶರಣರು ಜಲವ ಭಕ್ತನ ಮಾಡಬೆಕೆಂದು ಸಾರಿದ್ದಾರೆ.
ನಮ್ಮ ಕಾಳುಗಳೂ ಅಷ್ಟೆ. ಇಂದು ಎಲ್ಲ ಆಹಾರ ಕಲುಷಿತವಾಗಿದೆ. ರಾಸಾಯನ ಲೇಪಿತ ಧಾನ್ಯಗಳು ವಿಷಪೂರಿತವಾಗಿರುತ್ತದೆ. ಕಾಳುಗಳನ್ನು ಹಸನಾಗಿಸುತ್ತಿಲ್ಲ ದೇಶಿಯ ಎಲ್ಲ ತಳಿಗಳು ಇಲ್ಲವಾಗಿವೆ. ಬೀಜಕ್ಕಾಗಿ ಸಂಪೂರ್ಣ ಪರಾವಲಂಬಿಯಾಗಿದ್ದೇವೆ. ಇದರಿಂದ ನಿಜರ್ಿವೀಕರಣ ಸಮಸ್ಯೆ ಎದುರಾಗುತ್ತಿದೆ. ಇದ್ದ ಆಹಾರದಲ್ಲಿ ಪ್ರೋಟಿನ್ ಕೊರತೆಯಾಗಿದೆ. ಹೈಬ್ರಿಡ್ ಧಾನ್ಯದಲ್ಲಿ ರೋಗ ನಿರೋಧಕ ಶಕ್ತಿಯೇ ಇಲ್ಲ. ಈ ಕುರಿತು ನಾವು ಯಾರೂ ಚಿಂತನೆ ಮಾಡಿಲ್ಲ. ಒಂದು ಜೊತೆ ಬಟ್ಟೆ ಖರೀದಿಸಲು ಕನಿಷ್ಠ ಎರಡು ತಾಸು ವ್ಯಯ ಮಾಡುತ್ತೇವೆ. ಆದರೆ ಫಾಸ್ಟಪುಡ್ ಸೇವಿಸಲು ಒಂದು ಕ್ಷಣ ಕೂಡ ಆಲೋಚಿಸುತ್ತಿಲ್ಲಾ. ಅದಕ್ಕೆ ಬಸವಣ್ಣನವರು ನಮಗೆ ಉಣಲು ಕಲಿಸಿದ್ದಾರೆ. ಉಡಲು ಕಲಿಸಿದ್ದಾರೆ. ಅಕ್ಕಮಹಾದೇವಿ ಆಹಾರದ ಕಿರಿದು ಮಾಡಿರೆಂದು ಹೇಳುತ್ತಾಳೆ. ನಾವು ಮಾತ್ರ ಯಾವುದನ್ನು ಲೆಕ್ಕಿಸದೆ ಆರಾಮವಾಗಿದ್ದೇವೆ. ಮತ್ತು ಅವಸಾನದತ್ತ ಮುಖ ಮಾಡಿದ್ದೇವೆ. ಯಾಕೆ ಬಸವಾದಿ ಶರಣರು ಇವುಗಳ ಜಾಗೃತಿ ಉಂಟು ಮಾಡಿರುವುರೆಂದರೆ ನಮ್ಮ ಆಹಾರ, ನಮ್ಮ ಪರಿಸರ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸಾತ್ವಿಕ ಪರಿಸರ ಆಹಾರ-ಸಾತ್ವಿಕ ಮನಸ್ಸಿನ ಮನುಷ್ಯರನ್ನು ನಿಮರ್ಾಣ ಮಾಡುತ್ತದೆ.
ಈ ಎಲ್ಲ ಕಾರಣಗಳಿಂದ ನಾವು ನೆಲ, ಜಲ, ಗಾಳಿ, ಸೂರ್ಯ, ಚಂದ್ರ, ಧಾನ್ಯ ಮೊದಲಾದವುಗಳನ್ನೊಳಗೊಂಡ ಜೀವ ಪರಿಸರ, ಭೌತಿಕ ಪರಿಸರ ಮತ್ತು ಸಾಂಸ್ಕೃತಿಕ ಪರಿಸರ ಸಂರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ.

Thursday, March 7, 2013

ಜಯದೇವಿ ತಾಯಿ ಲಿಗಾಡೆ ಬದುಕು-ಬರಹ


ಡಾ. ಜಯದೇವಿತಾಯಿ ಲಿಗಾಡೆ


ಗಡಿನಾಡವೆಂದರು ಕನ್ನಡಕ್ಕೆ ಕಡಿಮಿಲ್ಲ
ಕನ್ನಡ ತಾಯಿಗೆ ಪದಗಳ | ಒಡವೆಯ
ಇಡಿಸುವೆ ನಾ || 

ಕನ್ನಡದಲ್ಲಿ ಇಂಥ ಸಾವಿರದ ಪದಗಳನ್ನು ಬರೆಯುತ್ತ ಭಾವ, ಭಾಷೆ, ಸಂಸ್ಕೃತಿಗೆ ಗಡಿಗಳಿಲ್ಲವೆಂಬುದನ್ನು ಸಾಬೀತುಗೊಳಿಸಿ  ಕನ್ನಡ, ಮರಾಠಿ ಭಾಷೆಯಲ್ಲಿ ಮೌಲಿಕ ಕೃತಿಗಳನ್ನು ಬರೆದ ಡಾ. ಜಯದೇವಿ ತಾಯಿ ಲಿಗಾಡೆ ಕನ್ನಡದ ವಚನ, ಶೂನ್ಯ ಸಂಪಾದನೆಯನ್ನು  ಮರಾಠಿಗೆ ಅನುವಾದ ಮಾಡಿದ ಕನರ್ಾಟಕದ ಸಾಂಸ್ಕೃತಿಕ ರಾಯಭಾರಿಗಳು.

ಇಡೀ ಭಾರತೀಯ ದೇಶಿ ಸಂಸ್ಕೃತಿಯ ಚಿಂತನೆಯಲ್ಲಿ ಅನನ್ಯವಾದ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿರುವ ಡಾ.ಜಯದೇವಿತಾಯಿ ಲಿಗಾಡೆ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿತ್ವ, ನೆಲಮೂಲ ಸಂಸ್ಕೃತಿಯ ಪ್ರತಿಪಾದಕರು. ಅನುಭವವೇ ಮನುಷ್ಯರ ನಿಜವಾದ ಶಾಲೆ ಎಂಬ ಬಕರ್್ನ ಮಾತುಗಳಿಗೆ ವ್ಯಾಖ್ಯಾನ ಬರೆದಂತೆ ಬದುಕಿದವರು.ಅದಕ್ಕಾಗಿ ಮೌಲ್ಯವನ್ನು ಸಾಹಿತ್ಯಿಕವಾಗಿ ಬರೆದು, ವೈಯಕ್ತಿಕವಾಗಿ ಬದುಕಿ ಸಾಮಾಜಿಕವಾಗಿ ಆಚರಣೆಯಲ್ಲಿ ತಂದವರಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಕೂಡ ಒಬ್ಬರು.

ಮೂಲತಃ ಜಯದೇವಿ ತಾಯಿಯವರು ಮಹಾರಾಷ್ಟ್ರದ ಇಂದಿನ ಸೋಲಾಪೂರದವರು. ಭಾಷಾವಾರು ಪ್ರಾಂತ ರಚನೆಗೆ ಮೊದಲು ಕನ್ನಡದ ಮಹತ್ವದ ನಾಡಾಗಿದ್ದ ಇದು 12ನೆಯ ಶತಮಾನದ ಸಿದ್ಧರಾಮನ ಸೊನ್ನಲಿಗೆ. ಹಾಗಾಗಿ ಈ ನೆಲದ ಭೌಗೊಳಿಕ ಪರಸರಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಮಹತ್ವವಿದೆ.

ಮುಂದೆ 19ನೇ ಶತಮಾನಕ್ಕೆ ಸೋಲಾಪೂರದ ಸಾಂಸ್ಕೃತಿಕ ವಾರಸುದಾರಿಕೆ ಬಂದದ್ದು ಅಲ್ಲಿನ ಮಡಕಿ ವಾರದ ಹಾಗೂ ಲಿಗಾಡೆ ಮನೆತನಗಳಿಗೆ. ಇವರ ಅಜ್ಜ (ತಾಯಿಯತಂದೆ) ವಾರದ ಮಲ್ಲಪ್ಪನವರು ಸೋಲಾಪೂರಕ್ಕೆ ಮೊದಲ ಬಟ್ಟೆ ಗಿರಣಿ ತಂದು ಔದ್ಯೋಗಿಕ ಕ್ರಾಂತಿ ಮಾಡಿದರು. ಐದು ಸಾವಿರ ಜನರಿಗೆ  ಕೆಲಸ ನೀಡುವ ಮೂಲಕ ಐದು ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದ ಕೀತರ್ಿಶೇಷರು. ಇವರಿಗೆ 500 ಎಕರೆ ಜಮೀನಿತ್ತು. ಹೀಗಾಗಿ ಕೃಷಿ ಮತ್ತು ಔದ್ಯೋಗಿಕರಣದಿಂದ ಇಡೀ ನಾಡಿಗೆ ಹೆಸರಾದ ಮನೆತನ.

ಜಯದೇವಿಯವರ ತಂದೆ ಚನ್ನಬಸವ ಮಡಕಿ, ಸಮಾಜೋಧಾಮರ್ಿಕ, ಶೈಕ್ಷಣಿಕ ಕಾಳಜಿಗಳ ಮೂಲಕ ಸುತ್ತಲಿನ ಜನರ ಬದುಕು ಕಟ್ಟಲು ನೆರವಾದವರು.

ಈ ವಾರದ ಮತ್ತು ಮಡಕಿ ಮನೆತನಗಳೆರಡಾದರೂ ಇರಲು ಸೂರು (ಮನೆ) ಒಂದೆ. ಅವಿಭಕ್ತ ಕುಟುಂಬದ ಮೂಲಕ ಆದರ್ಶ ಮೆರೆದವರು. ತಾಯಿ ಸಂಗವ್ವ ಶಿವಭಕ್ತೆ, ಹಾಡುಗಾರಿಕೆ, ಸೇವಾ ಮನೋಭಾವ, ಮಾತೃ ಹೃದಯದ ಕರುಣಾಮಯಿ.
ಅಜ್ಜನ ಶ್ರೀಮಂತಿಕೆಯಲ್ಲಿಯೂ ತೋರಿದ ಔದಾರ್ಯತೆ, ತಂದೆಂ ಜನಪರ ಕಾಳಜಿ, ತಾಯಿಯ ಕರುಣೆ ಮೈಗೂಡಿಸಿಕೊಂಡು ಬೆಳೆದ ಜಯದೇವಿತಾಯಿ ಲಿಗಾಡೆ ಜನಿಸಿದ್ದು 1912 ಜೂನ್ 23 ರಂದು.

ಅಜ್ಜನವರ ಕಾಯಕನಿಷ್ಟತೆ, ತಂದೆಯವರ ದಾಸೋಹಭಾವದ ಸೇವೆ, ತಾಯಿಯ ದೈವ ಭಕ್ತಿಯ ತ್ರಿವೇಣಿ ಸಂಗಮದಲ್ಲಿ ಅರಳಿದ ಜಯದೇವಿ ತಾಯಿ 3-4 ನೆಯ ವಯಸ್ಸಿನಲ್ಲಿ ಭಕ್ತಿಗೀತೆ ಕಲಿತು ಹಾಡಿದರಿಂದ ಅವರಲ್ಲಿ ಮಹಾಕಾವ್ಯ ಹುಟ್ಟಿತು.
ಮಾತೃ ಭಾಷೆ ಕನ್ನಡವಾಗಿದ್ದರೂ, ಆಡಳಿತ ಭಾಷೆ ಮರಾಠಿಯಾಗಿದ್ದು, ಸೋಲಾಪೂರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಲ್ಲದಿದ್ದರಿಂದ ಜಯದೇವಿ ತಾಯಿಯವರು ಅನಿವಾರ್ಯವಾಗಿ ತಮ್ಮ ಆರನೆಯ ವಯಸ್ಸಿಗೆ ಮರಾಠಿ ಶಾಲೆ ಸೇರಬೇಕಾಯಿತು. ಅಸಕ್ತಿಯಿಂದ ಜಯದೇವಿ ತಾಯಿಯವರು ಕನ್ನಡ ಕಲಿತದ್ದು ಮೂರು ಮಕ್ಕಳ ತಾಯಿ ಆದ ಮೇಲೆ.
ಜೀವನಾನುಭವವು ಅವರಿಗೆ ಬಾಲ್ಯದಿಂದಲೇ ಬಂದ ಬಳುವಳಿ ಅವರು ಬಹುದೊಡ್ಡ ಜಮೀನ್ದಾರರಾಗಿದ್ದರಿಂದ ವರ್ಷದ ಆರು ತಿಂಗಳು ಊರಲ್ಲಿನ ಮನೆ ಇಂದ್ರ ಭವನದಲ್ಲಿ (ಇಂದು ಈ ಮನೆ ಸೋಲಾಪೂರದ ನಗರ ಪಾಲಿಕೆ ಆಗಿದೆ) ಕಾಲ ಕಳೆದರೆ ಉಳಿದ ಆರು ತಿಂಗಳು ತೋಟದ ಮನೆ (ಈಠಡಿಟ ಠಣಜ) ಯಲ್ಲಿ ಕಾಲ ಕಳೆಯುತ್ತಿದ್ದರು.

ಆದ್ದರಿಂದ ಎಲ್ಲ (ಕಾಮರ್ಿಕರೊಂದಿಗೆ)  ಕಾಯಕ ಜೀವಿಗಳೊಂದಿಗೆ ಬೆರೆಯುವುದು ಜಯದೇವಿ ತಾಯಿಯವರಿಗೆ ಒಂದು ಹೊಸ ಪ್ರಪಂಚದ ದರ್ಶನಾಗುತ್ತಿತ್ತು. ಅವರ ಆಚಾರ, ವಿಚಾರ,  ನಡೆನುಡಿ, ಸಂಪ್ರದಾಯ ವೈವಿಧ್ಯಮಯವಾದ ಜೀವನ ಮುಖಗಳ ಪರಿಚಯವಾಗುತ್ತಿತ್ತು. ಜೊತೆಗೆ 'ಕೃಷಿ' ಅನುಭವ ಕೂಡ ದಕ್ಕುತ್ತಿತ್ತು. ಹೀಗೆ ಬಾಲ್ಯದ  ದಿನಗಳನ್ನು, ಬದುಕಿನ ಸುಖದುಃಖಗಳನ್ನು ನೈಜ ಅನುಭವದೊಂದಿಗೆ ಕಳೆದದ್ದು ಅವರಲ್ಲಿ ದೊಡ್ಡ 'ಕವಿ' ಹೃದಯ, ಅದಮ್ಯ ಜೀವನ ಪ್ರೀತಿ ಬೆಳೆಯಲು ಕಾರಣವಾಯಿತು.

ಕುಟುಂಬ ಜೀವನ:

ಜೀವ ಜಗತ್ತಿನ ಮೂಲ ಧಾತು ಪ್ರೀತಿಯಾದರೆ, ಪ್ರೀತಿಯ ತವರು ಕುಟುಂಬ. ಪ್ರಪಂಚದಲ್ಲಿದ್ದೂ ಪಾರಮಾರ್ಥ ಗೆದೆಯಬಹುದೆಂಬ ಬಸವಾದಿ ಶರಣರ ಚಿಂತನೆ ಮೈಗೂಡಿಸಿಕೊಂಡ ವಾರದ ಹಾಗೂ ಮಡಕೆ ಮನೆತನದವರು ಜಯದೇವಿತಾಯಿಯು 14ನೆಯ ವರ್ಷಕ್ಕೆ ಕಾಲಿಡಲು ಲಿಗಾಡೆ ಮನೆತನದ 16 ವರ್ಷದ ಚನ್ನಮಲ್ಲಪ್ಪನವರೊಂದಿಗೆ 1926ರಲ್ಲಿ ವ್ಮದುವೆ ಮಾಡಿದರು. ಇದರಿಂದ ಆದ ಹಾನಿ ಎಂದರೆ ಜಯದೇವಿತಾಯಿಯ ಓದಿಗೆ ಪೂರ್ಣವಿರಾಮ ಬಂತು. ಜೊತೆಗೆ ಅವರಿಗೆ ಎದುರಾದ ಅಘಾತವೆಂದರೆ ತವರಿನಲ್ಲಿದ್ದಷ್ಟು ಸ್ವಾತಂತ್ರ್ಯವಾಗಲಿ, ಸಾಮಾಜಿಕ ಕಳಕಳಿಯಾಗಲಿ, ಪ್ರಗತಿಪರ ವಿಚಾರವಾಗಲಿ, ಸಮಾನತೆ ತತ್ವವಾಗಲಿ ಗಂಡನ ಮನೆಯಲ್ಲಿ ಇರಲಿಲ್ಲ. ಬದಲಿಗೆ ಸನಾತನ ಮನಸ್ಸುಳ್ಳ ಐದು ಜನ ಅತ್ತೆಯಂದಿರು. ಇದರಿಂದ ಅನೇಕ ರೀತಿಯ ಕಷ್ಟದ ದಿನಗಳು ಎದುರಾದವು ಆದರೂ ಎನ್ನ ಪಾಡೆನೆಗಿರಲಿ ಅದರ ಹಾಡನಷ್ಟೆ ನೀಡುವೆನು ರಸಿಕ ನಿನಗೆ, ಕಲ್ಲು ಸಕ್ಕರೆಯಂಥ ನಿನ್ನೆದೆಯ ಕರಗಿದರೆ ಅದ ಸವಿಯ ಹಣಸು ಎನಗೆ ಎಂದ ವರಕವಿ ಬೇಂದ್ರೆಯವರು ನುಡಿದಂತೆ

ಮೊಟ್ಟ  ಮೊದಲ ಹೆಜ್ಜೆ ಇಟ್ಟೀದ ಸಂಸಾರದಿ 
ಚಟ್ಟಂತ ಸುಟ್ಟೀತ ನನಕಾಲ - ಸಿದ್ಧರಾಮ 
ಕೊಟ್ಟದ್ದು ಅಟ್ಟುಂಡ ಅಕ್ಕರದಿ 

ಹೀಗೆ ನೋವನುಂಗುವ ತನ್ನ ಬೇಗುದಿಯ ಒಡಲನುಡಿಯ ಈ ಮೂರು ಸಾಲುಗಳಲ್ಲಿ ನೂರಾರು ಸಂವೇದನೆಗಳಿವೆ.
 ನನ್ನ ನೆತ್ತರದಿಂದ ಜೀವನದಿಂದ ಕನರ್ಾಟಕ ಏಕೀಕರಣ ಸಾಧ್ಯವಾಗುತ್ತಿದ್ದರೆ,  ಇಗೋ ಇಂದೇ ಕೊಡಲು ಸಿದ್ದಳಿದ್ದೇನೆ ಎಂದು ಸಿಂಹ ಗರ್ಜನೆ ಮಾಡಿ ಮಾತನಾಡಿದವರು ಸಾಹಿತ್ಯ  ಸಮಾಜ ಸೇವೆ ಮತ್ತು ಕನ್ನಡ ನಾಡು ನುಡಿಯ ಪ್ರೀತಿಯಿಂದ ಖ್ಯಾತಿ  ಪಡೆದ ಧೀರ ಮಹಿಳೆ ಡಾ. ಜಯದೇವಿ ತಾಯಿ ಲಿಗಾಡೆ ತಾತ್ವಿಕವಾಗಿ ಬಸವಣ್ಣ, ಆಧ್ಯಾತ್ಮಿಕವಾಗಿ ಸಿದ್ಧರಾಮ, ರಾಷ್ಟ್ರೀಯತೆಗಾಗಿ ಮಹಾತ್ಮಾ ಗಾಂಧಿಜೀಯವರಿಂದ ಪ್ರಭಾವಿತವಾರಾಗಿ ವ್ಯಕ್ತಿತ್ವ ರೂಪಿಸಿಕೊಂಡು ದೀನ ದಲಿತರ, ಬಡವರ ಪರವಾಗಿ  ಧ್ವನಿ ಎತ್ತಿದವರು, ಜೊತೆಗೆ ಅವರು ಕಂಕಣ ಬದ್ಧರಾಗಿ ನಿಂತಿದ್ದು, ಕನ್ನಡ ಸೇವೆಗಾಗಿ.

ಗಡಿಯಲ್ಲಿ ಕಟ್ಟಿ ಕನ್ನಡದ ಕೋಟೆ, ಉಡಿಯಲ್ಲಿ 
ಇಡಿಯ ನಾಡಕ್ಕರೆಯ ಮಕ್ಕಳಾಡುಂಬೊಲವೆ 
ಒಡವೆಗಳನುಳಿದ ರುದ್ರಾಕ್ಷಿ ಕಂಕಣ ಬಲವೆ 
ಇದ್ದಲ್ಲೇ ಮರಳಿ ಗೆದ್ದಿರಿ ತುತ್ತತುದಿಯಲ್ಲಿ.... 

ಎಂದ ಖ್ಯಾತಕವಿ ಚನ್ನವೀರ ಕಣವಿಯವರ ಈ ಸಾಲುಗಳು ಜಯದೇವಿ ತಾಯಿಯವರ ಕನರ್ಾಟಕ ಸಂರಕ್ಷಣೆ, ಕನ್ನಡತ್ವದ ಪ್ರೀತಿ, ಜನಪರ ಕಾಳಜಿ, ಅವರ ಸರಳತೆ-ಸೌಜನ್ಯತೆ ಅನುಭಾವದ ಎತ್ತರ ತೋರಿಸಿಕೊಡುತ್ತವೆ. ಡಾ. ಜಯದೇವಿ ತಾಯಿ ಕನ್ನಡ ಕಲಿಯದಿದ್ದರೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಹಾನಿಯಾಗುತ್ತಿತ್ತು ಎಂಬ ಎಚ್.ಎಸ್.ಮುಕ್ತಾಯಕ್ಕರ (ಜಯದೇವಿ:ಅಭಿನಂದನ ಗ್ರಂಥ) ಮಾತು ಅರ್ಥಪೂರ್ಣ. ಏಕೆಂದರೆ ಜಯದೇವಿ ತಾಯಿ ಲಿಗಾಡೆಯವರ ತಾಯಿಯ ಪದಗಳು ಜಯಗೀತೆ ಸಾವಿರ ಪದಗಳು ತಾರಕ ತಂಬೂರಿ ಬಂದೇವ ಕಲ್ಯಾಣಕೆ, ಅರಿವಿನಾಗರ ಮೊದಲಾದ ಕೃತಿಗಳು ಪ್ರಕಟವಾಗಿದ್ದು ಕನ್ನಡದಲ್ಲೆ. ಸಂಕೀರ್ಣ ತ್ರಿಪದಿಗಳು, ದಾನಮ್ಮದೇವಿಯ ತ್ರಿಪದಿಗಳು ಮೊದಲಾದವು ಉಳಿದಿದೆ. ಇನ್ನೂ ವಿಶೇಷವೆಂದರೆ, ಕನ್ನಡ ಕಾವ್ಯದ ಗಂಗೋತ್ರಿಯೆಂದು ಕರೆಸಿಕೊಳ್ಳುವ ಅಚ್ಚ ದೇಶಿ ಛಂದಸ್ಸು ತ್ರಿಪದಿಯಲ್ಲಿ ಶ್ರೀ ಸಿದ್ಧರಾಮೇಶ್ವರ ಪುರಾಣವೆಂಬ ಮಹಾಕಾವ್ಯ ಬರೆದದ್ದು ಸಹ ಕನ್ನಡದಲ್ಲಿ.

ಬಹುಮುಖ್ಯವಾಗಿ ನಮ್ಮಲ್ಲಿ ಅನೇಕ ಕನ್ನಡ ಮಹಾಕಾವ್ಯಗಳು ಪ್ರಾಚೀನ ಕಾಲದಿಂದ ಅಧುನಿಕದವರೆಗೆ ಬಂದಿದ್ದು ಮಹಾಕಾವ್ಯಗಳ ನಾಯಕತ್ವ ಪೌರಾಣಿಕ ಅಥವಾ ಆರಸೂತ್ತಿಗೆಯ ವ್ಯಕ್ತಿಗಳಿಗೆ ಮೀಸಲಾಗಿದೆ. ಆದರೆ ಸಿದ್ಧರಾಮ ಒಬ್ಬ ದ್ರಾವಿಡ ಸಂಸ್ಕೃತಿಯ, ಶ್ರಮಮೂಲ ಕಾಯಕ ತತ್ವದ ಪ್ರತಿಪಾದಕ, ದೇಶಿ ಭಾಷೆಯ ಸೊಗಡಿನಲ್ಲಿ ವಚನ ಬರೆದ ಹನ್ನೆರಡನೆ ಶತಮಾನದ ಸಿದ್ಧರಾಮ. ಜಯದೇವಿ ತಾಯಿಯವರ ಮಹಾಕಾವ್ಯದ ನಾಯಕನಾಗಿರುವುದು, ಈ ನೆಲದ ಬಹುಸಂಸ್ಕೃತಿ ಪ್ರತಿಫಲಿಸಿ ಈ ಕೃತಿಗೆ ಸಾಂಸ್ಕೃತಿಕ ಮಹತ್ವ ಬಂದಿದೆ.

ಜಯದೇವಿತಾಯಿಯವರಿಗೆ ಕನ್ನಡದೊಂದಿಗೆ ಮರಾಠಿ ಭಾಷೆಯ ಮೇಲೂ ಉತ್ತಮ ಪ್ರಭುತ್ವವಿತ್ತು, ಹಾಗಾಗಿ ಸಮೃದ್ಧ ಕನರ್ಾಟಕಾಂಚಿ ರೂಪ ರೇಷ (1954) ಕೃತಿ ಬರೆದು ಮರಾಠಿಗರಿಗೆ ಕನರ್ಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಪರಿಚಯಿಸಿದರು. ಸಿದ್ಧವಾಣಿ (1952), ಬಸವ ದರ್ಶನ (1954) ಮಹಾಯೋಗಿನಿ ಅಕ್ಕಮಹಾದೇವಿ ಸಿದ್ಧರಾಮಾಂಚಿ ತ್ರಿವಿಧಿ (1958)  ಬಸವ ವಚನಾಮೃತ (1966) ಸಿದ್ಧಲಿಂಗ (1962) ಶೂನ್ಯ ಸಂಪಾದನೆ, ಸಿದ್ದರಾಮನ ತ್ರಿವಿಧಿಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡಿ, ಮರಾಠಿ ಮತ್ತು ಕನ್ನಡದ ಮಧ್ಯ ಸಾಂಸ್ಕೃತಿಕ ಸಾಮರಸ್ಯ-ಭಾಷಿಕ ಸಮನ್ವಯ ತಂದರು.
ಹೀಗೆ ಕನ್ನಡದ ಜೊತೆಗಿನ ಭಾವನಾತ್ಮಕ ಸಂಬಂಧವೇ ಅವರನ್ನು ಕನರ್ಾಟಕ ಏಕೀಕರಣಕ್ಕೆ ಮುಂದು ಮಾಡಿತು. ಅವರು ಏಕೀಕೃತ ಕನರ್ಾಟಕದ ಶಿಲ್ಪಿಗಳಾದರು.

ಕಾವೇರಿಯಿಂದ ಗೋದಾವರಿವರೆಗಿದ್ದ ಕನ್ನಡ ನಾಡು ಪರಕೀಯ ಆಳ್ವಿಕೆಗೆ ಒಳಪಟ್ಟು ಜರ್ಜರಿತವಾಗಿ ವಸಾಹತು ಶಾಹಿಗಳ ಕಾಲಕ್ಕೆ  ಹಂಚಿ ಹರಿದು ಹೋಯಿತು. ಹೀಗೆ ಪರಕೀಯರಿಂದ ಸ್ವಾಂತಂತ್ರ್ಯ ಪಡೆಯುವುದು, ಕನರ್ಾಟಕ ಏಕೀಕರಣ ಮಾಡುವುದು ಜಯದೇವಿ ತಾಯಿಯವರಿಗೆ ಮುಖ್ಯವಾಗಿತ್ತು. ಗಾಂಧಿಯವರ ಪ್ರಭಾವಕ್ಕೊಳಗಾಗಿ ರಾಷ್ಟ್ರೀಯತೆ ಬೆಳೆಸಿಕೊಂಡ ಅವರು ಅತ್ಯಂತ ಸಂಘಟನಾಶೀಲರಾಗಿದ್ದರು. ಹೈದ್ರಾಬಾದ ಕನರ್ಾಟಕ ವಿಮೋಚನೆಗೆ ದುಡಿದ ತಾಯಿಯವರು ಮುಂದೆ ಕನರ್ಾಟಕ ಏಕೀಕರಣಕ್ಕಾಗಿ ಪಣತೊಟ್ಟರು. ಆಗ ಕನ್ನಡ ನಾಡಿನ ಮಕ್ಕಳು, ನಮ್ಮ ತಾಯಿ  ಅನೇಕ ಪ್ರಾಂತಗಳಲ್ಲಿ ಹಂಚಿ ಹೋದಾಗ ನಾವು ನೆಮ್ಮದಿಯಿಂದ ಇರುವುದು ಹೇಗೆ? ಒಡೆದು ಹೋದ ಕನರ್ಾಟಕ ಒಂದಾಗಬೇಕು. ಎಂದು ಬಲವಾಗಿ ಪ್ರತಿಪಾದಿಸಿದರು. ಅನೇಕರ ಅವಿರತ ಹೋರಾಟದ ಫಲವಾಗಿ ಕನರ್ಾಟಕ ಏಕೀಕರಣವಾಯಿತು. ಆದರೆ ಆಡಳಿತ ಭಾಷೆ ಕನ್ನಡವಾಗದಿದ್ದಾಗ ಭಾರತದ ಹೆಬ್ಬಾಗಿಲಾದ ಮುಂಬಯಿಯಂತಹ ನಗರದಲ್ಲಿ ಮೊದಲ ಆಂಗ್ಲ ಗವರ್ನರಿಗೆ ಕೊಡಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡದಲ್ಲಿದ್ದುದನ್ನು ನೆನಪಿಸಿದ ತಾಯಿಯವರು ನಮ್ಮ ಸಕರ್ಾರವು ಅದಷ್ಟು ಬೇಗ ಕನ್ನಡವನ್ನು ಆಡಳಿತ ಭಾಷೆಯೆಂದು ಸಾರಬೇಕು. ಅದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಕನ್ನಡ ಮಾಧ್ಯಮವನ್ನು ಸ್ವೀಕರಿಸಬೇಕು ಎಂದು 1972ರಲ್ಲಿ ಮಂಡ್ಯದಲ್ಲಿ ನಡೆದ 48ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಮಾತುಗಳ ಮೂಲಕ ಕರೆ ನೀಡುತ್ತ ಗಡಿಭಾಗದ ಹಲವಾರು ಸಮಸ್ಯೆಗಳನ್ನು ಎತ್ತಿ ಹಿಡಿದು ಪರಿಹಾರ ಸೂತ್ರಗಳನ್ನು ಸೂಚಿಸಿದರು.

ಜಯದೇವಿ ತಾಯಿಯವರ ಘನವ್ಯಕ್ತಿತ್ವ ಕನ್ನಡ ನಾಡು-ನುಡಿ ಕುರಿತ ಕಾಳಜಿ ಮತ್ತು ಅವರ ಪ್ರತಿಫಲಾಪೇಕ್ಷೆ ಇಲ್ಲದ ನಿರಂತರ ಹೋರಾಟಗಳನ್ನು ಗಮನಿಸಿ, ಕನರ್ಾಟಕ ವಿಶ್ವವಿದ್ಯಾಲಯವು 1976ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ನಾಡಿನ ಅಭಿಮಾನಿಗಳು 1972ರಲ್ಲಿಯೆ ಜಯದೇವಿ ಅಭಿನಂದನ ಗ್ರಂಥ ಅಪರ್ಿಸಿದರು. ಆದರೂ ಅವರಲ್ಲಿ ಯಾವುದೇ ಅಹಂ ಸುಳಿಯಲಿಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕನ್ನಡ ಜಾತ್ರೆಯ ಅಧ್ಯಕ್ಷರಾಗಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜಯದೇವಿ ತಾಯಿಯವರದ್ದು ಕನ್ನಡತ್ವ ಕುರಿತು ಒಣಸಹಾನುಭೂತಿ ಇರಲಿಲ್ಲ. ಬದಲಾಗಿ ಅಂತಃಕರಣದಿಂದ ಪ್ರೀತಿಸಿದರು. ನನ್ನ ಜೀವಮಾನದ ಕೊನೆಯುಸಿರಿರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ. ಕನ್ನಡಕ್ಕಾಗಿಯೆ ಬದುಕುವೆ. ಕನ್ನಡವೇ ನನ್ನ ಧರ್ಮ ಎಂದು (ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ) ಸಾರುವ ಮೂಲಕ ಅಖಂಡ ಕನರ್ಾಟಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಜಯದೇವಿ ತಾಯಿ ಲಿಗಾಡೆ.
ಸಾಮಾಜಿಕ ಸಂಘéರ್ಷ : ಜಯದೇವಿ ತಾಯಿ ಲಿಗಾಡೆಯವರಿಗೆ ಸಮಾಜ ಸೇವೆ ಮತ್ತು ಲಿಂಗ ಪೂಜೆ ಬದುಕಿನ ಎರಡು ಕಣ್ಣುಗಳಾಗಿದ್ದವು. ಧರ್ಮ ಸಮಾಜವನ್ನು ಅವರೆಂದೂ ಖಂಡ ಸ್ವರೂಪವಾಗಿ ನೋಡಲೇ ಇಲ್ಲ. ಮದುವೆಯ ಆರಂಭದ ದಿನಗಳು ಒತ್ತಡ ಸಂದ್ಗಿತೆಗಳನ್ನು ಬದಿಗಿರಿಸಿ ಮೂರ್ನಾಲ್ಕು ವರ್ಷಗಳ ನಂತರ ಸಮಾಜ ಸೇವೆಗೆ ತೊಡಗಿಸಿಕೊಂಡರು. ಕಷ್ಟಗಳು ಸಾಲಾಗಿ ಬರುತ್ತವೆ ಎಂಬುದು ಎಲ್ಲರಿಗೂ ಅನ್ವಯಿಸುವ ಮಾತೇ ಸರಿ. ಅನಾರೋಗ್ಯದಿಂದ ಬಳಲುತಿದ್ದ ಗಂಡ, ವಯೋವೃದ್ದ ಅತ್ತೆಯರು ಎಳೆಯ ಐದು ಮಕ್ಕಳ ಪಾಲನೆಯೊಂದಿಗೆ ಸಮಾಜ ಸೇವೆಗೆ ತೊಡಗಿಸಿಕೊಂಡಿರುವಾಗ ತನ್ನ 20 ವರ್ಷದ ದಾಂಪತ್ಯ ಮುಗಿದು (1946) ಪತಿವಿಯೋಗವಾಗುತ್ತದೆ .ನೋವಲ್ಲಿ ಅದ್ದಿದ ಕುಂಚದಂತೆ ಬಿಡದೆ ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಂಡ ಲಿಗಾಡೆಯವರ ಸಹನಶೀಲತೆ ಆತ್ಮಸ್ಥೈರ್ಯ ಮೆಚ್ಚತಕ್ಕದ್ದು.

ಸ್ತ್ರೀ ಜಾಗೃತಿಯಿಂದ ಮಾತ್ರ ವಿಚಾರವಾದ ಬಿತ್ತಬಹುದೆಂದು ನಂಬಿರುವ ತಾಯಿಯವರು ಅಕ್ಕನ ಬಳಗ ಕಟ್ಟಿದರು. 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷತೆ ವಹಿಸುವ ಮೂಲಕ ಮಹಿಳಾ ಲೋಕಕ್ಕೆ ಗೌರವ ತಂದು ಕೊಟ್ಟರು. ಕನರ್ಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಸ್ತ್ರೀ ಜಾಗೃತಿ ಹಾಗೂ ವೈಚಾರಿಕತೆ ನೆಲೆಗೊಳಿಸಲು ಹೋರಾಟ ಮಾಡಿದರು.
ಈ ಸಂದರ್ಭಕ್ಕೆ ಅಥಣಿ ಶಿವಯೋಗಿಗಳು, ಹಾನಗಲ್ ಕುಮಾರಸ್ವಾಮಿಗಳು, ಚಿತ್ರದುರ್ಗದ ಶ್ರೀ ಜಯದೇವಪ್ಪಗಳು, ಘ.ಗು. ಹಳಕಟ್ಟಿಯವರು, ಹಡರ್ೆಕರ ಮಂಜಪ್ಪನವರು, ಉತ್ತಂಗಿ ಚನ್ನಪ್ಪನವರು, ಡಾ. ಚೆನ್ನಬಸವಪಟ್ಟದೇವರು ಮೊದಲಾದವರ ಒಡನಾಟದಿಂದ ತಮ್ಮ ಸಮಾಜ ಸೇವೆಗೆ ಒಂದು ಪರಿಪೂರ್ಣತೆ ತಂದು ಕೊಂಡರು. ಅಂತರ್ರಾಷ್ಟ್ರೀಯ ಖ್ಯಾತಿವೆತ್ತ ನೇತ್ರತಜ್ಞ ಡಾ. ಎಂ.ಎಸ್.ಮೋದಿ ಅವರ ಬೃಹತ್ ಶಿಬಿರವೊಂದಕ್ಕೆ ರೋಗಿಗಳಿಗೆ ಪ್ರಸಾದ ವ್ಯವಸ್ಥೆಯೊಂದಿಗೆ ಉದಾರ ನೆರವು-ಸೇವೆ ಸಲ್ಲಿಸಿದ ಕೀತರ್ಿ ಇವರದಾಗಿದೆ. ಹೀಗೆ ಸಮಾಜ ಸೇವೆಗೆ ಕಾಯ, ವಾಚ, ಮನಸಾ ತೊಡಗಿಸಿಕೊಂಡವರು.
 ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರನಾನಲ್ಲ, ಲೋಕ ವಿರೋಧಿ ಶರಣನಾರಿಗಂಜುವವನಲ್ಲ... ಎಂಬ ಬಸವಣ್ಣನವರ ವಚನದಂತೆ ನಾಡು, ನುಡಿ, ನೆಲ, ಜಲ, ಸಂಬಂಧಿ ಯಾವುದೇ ಸಾಂಸ್ಕೃತಿಕ ವಿಷಯಗಳು ಬಂದಾಗ ಅತ್ಯಂತ ನಿಷ್ಠುರರಾಗಿ ಛಲದಿಂದ ಪ್ರತಿಭಟಿಸುತ್ತಿದ್ದರು, ನಿಜಾಂ ಆಳ್ವಿಕೆಯ ದಮನಕಾರ ನೀತಿಯಿಂದ ತತ್ತರಿಸಿದ ಜನರಿಗಾಗಿ ಜಹೀರಾಬಾದಿನಲ್ಲಿ ಹೈದ್ರಾಬಾದ ಪ್ರಾಂತೀಯ ಸಭೆ ಆಯೋಜಿಸಲಾಗಿತ್ತು. ಜಯದೇವಿತಾಯಿಯವರ ಭಾಷಣವೆಂದರೆ ಜನಸಾಗರವೇ ಸೇರಿರುತ್ತಿತ್ತು. ರಾಜ್ಯ ಗಡಿಯೊಳಗೆ ಬಂದರೆ ಬಂಧಿಸಬೇಕು ಎಂಬುದು ನಿಜಾಮನ ಫರಮಾನು (ಕಟ್ಟಾಜ್ಞೆ) ಇರುತ್ತದೆ. ಇದಾವುದಕ್ಕೂ ಬಗ್ಗದೆ ತಾಯಿಯವರು ನಿಜಾಮನ ವ್ಯವಸ್ಥೆ ವಿರುದ್ಧವೆ ಭಾಷಣ ಮಾಡಿದರು.

ಕಲ್ಯಾಣದ ಭೂಮಿಯ ಸೀಮೆಯೊಳಗೆ 
ಕಾಲಿಡಕೂಡದು ಕಾಯ್ದೆ ತೆಗೆದಾನು - ನಿಜಾಮ 
ಅಲಿಸದೇ ಸೀಮೆ ದಾಟಿದೆ, 

ಎಂದು ಹೇಳಿ ನೆರೆದವರಲ್ಲಿ ಅತ್ಮಬಲ ತುಂಬಿದರು. ಅವರ ಈ ಮಾತುಗಳೇ ಅವರಿಗಿದ್ದ ಧೈರ್ಯವನ್ನು ಹೇಳುತ್ತದೆ.
ಲಿಗಾಡೆಯವರ ಕೆಚ್ಚು, ಸಾಹಸ, ಸಂಘಟನಾ ಶಕ್ತಿ ನೋಡಿ ಎರಡನೇ ಜಾಗತಿಕ ಮಹಾಯುದ್ಧದ ಕಾಲದಲ್ಲಿ ಬ್ರಿಟೀಷರು ಸೈನ್ಯದಲ್ಲಿ ವೀರಶೈವ ಫಟಕವೊಂದನ್ನು ರಚಿಸಲು ಯೋಚಿಸಿ ಇವರ ನೆರವು ಕೇಳಿದರು. ಜಯದೇವಿತಾಯಿ ಒಪ್ಪಲಿಲ್ಲ. ಇದಾವುದಕ್ಕೂ ಸೊಪ್ಪು ಹಾಕದಾಗ ಜಯದೇವಿ ತಾಯಿಯವರಿಗೆ ಬ್ರಿಟೀಷರು ಕೈಸರ್ ಇ-ಹಿಂದ್ ಅನ್ನುವ ಪದವಿಯನ್ನು ಘೋಷಿಸುತ್ತಾರೆ. ದಾರಿ ಬದಲು ಮಾಡಿಕೊಂಡ ಬ್ರಿಟಿಷ್ ನೀತಿಯನ್ನರಿತು ತಾಯಿಯವರು ಆ ಪದವಿಯನ್ನು ನಿರಾಕರಿಸುತ್ತಾರೆ. ಬ್ರಿಟಿಷ್ ಸರಕಾರ ಕೊಡಮಾಡುವ ಈ ಪದವಿಯ ನಿರಾಕರಣೆ ಅಂದರೆ ಅದು ಪ್ರಭುತ್ವದ ನಿರಾಕರಣೆಯೇ ಸರಿ. ಪದವಿ ಪುರಸ್ಕಾರಕ್ಕಾಗಿ ಲಾಬಿ ನಡೆಸುತ್ತ ತನ್ನತನ ಕಳೆಯುತ್ತಿರುವ ಇಂದಿನ ಕಾಲದಲ್ಲಿ ಲಿಗಾಡೆಯವರ ನಿಷ್ಕಾಮ ಸೇವೆ ಅನುಕರಣೀಯ ಅವರ ಪ್ರತಿಭಟನೆ ಪ್ರತಿಫಲಾಪೇಕ್ಷೆ ಇಲ್ಲದ ಸಾತ್ವಿಕತೆಯ, ಸತ್ಯದ ಪರವಾಗಿತ್ತೆಂಬುದು ತಿಳಿದು ಬರುತ್ತದೆ.
ಕಾಯಕ ನಿಷ್ಟೆ : ಜಾಗತಿಕ ಪರಂಪರೆಯಲ್ಲಿ 'ಜ್ಞಾನವೇ ತತ್ವಜ್ಞಾನ'ವೆಂದು ಹೇಳುತ್ತ ಬಂದಿರುವಾಗ ಬಸವಾದಿ ಶರಣರು ಕಾಯಕ (ಶ್ರಮ)ವೇ ತತ್ವಜ್ಞಾನವೆಂದು ಹೇಳಿದರು. ಅದಕ್ಕಾಗಿ ಕಾಯಕಯೋಗಿ ಸಿದ್ದರಾಮನ ಪ್ರಭಾವಕ್ಕೊಳಗಾಗಿದ್ದ ಜಯದೇವಿ ತಾಯಿಯವರು ಕಾಯಕ ಜೀವಿಗಳ ಪರ ನಿಂತರು. 1951ರಲ್ಲಿ ಕಾಮರ್ಿಕ ಸಾಕ್ಷರ ಮಂಡಳಿಗೆ ಸದಸ್ಯರಾಗಿ ನೇಮಕವಾದಾಗ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿದರು. ಆ ಕಾಲಕ್ಕೆ ಸೋಲಾಪೂರ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಔದ್ಯೋಗಿಕರಣಕ್ಕೆ ಹೆಸರಾಗಿತ್ತು. ಹಾಗಾಗಿ 30 ಸಾವಿರ ಕಾಮರ್ಿಕರು ದುಡಿಯುತ್ತಿದ್ದರು. ಕಾಮರ್ಿಕರ ಮಕ್ಕಳು ಕಾಮರ್ಿಕರಾಗಬಾರದೆಂಬುದು ಜಯದೇವಿ ತಾಯಿಯವರ ನಿಲುವಾಗಿತ್ತು. ಶಿಕ್ಷಣದ ಮೂಲಕ ಮಾತ್ರ ತಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವೆಂಬುದನ್ನು ಅರಿತ ಅವರು ಕಾಮರ್ಿಕರ ಮಕ್ಕಳಿಗಾಗಿ ಕನ್ನಡ ಶಾಲೆ ತೆರೆದು ಸಾಕ್ಷರತೆಗೆ ನಾಂದಿ ಹಾಡಿದರು. ಎರಡನೇ ವರ್ಷದಲ್ಲಿ 25 ವರ್ಗಗಳ ಬೇಡಿಕೆ ಬಂತು. ಹೀಗೆ ಕಾಮರ್ಿಕರ ಪರ ನಿಲ್ಲುವ ಮೂಲಕ ಅನೇಕ ಅಭ್ಯುದಯ ಕಾರ್ಯ ಚಟುವಟಿಕೆ ಹಮ್ಮಿಕೊಂಡರು.

ಸ್ತ್ರೀವಾದ : ಜಗತ್ತಿನ ಮನುಕುಲದ ಚರಿತ್ರೆಯಲ್ಲಿ ಹೆಣ್ಣು ಎರಡನೇ ದಜರ್ೆಯ ಪ್ರಜೆಯಾಗಿ ಪರಿಗಣಿಸುತ್ತಲೆ ಎಲ್ಲಾ ಸವಲತ್ತುಗಳಿಂದ ವಂಚಿತಳಾಗಿ, ದುರಂತ ಕಥೆಯ ನಾಯಕಿಯಾಗಿರುವುದು ಶೋಚನೀಯ ಸಂಗತಿ. ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಕಾಲದ ಶರಣರು ಮಹಿಳೆಗೆ ಧಾಮರ್ಿಕ ವೈಚಾರಿಕ ಸ್ವಾತಂತ್ರ್ಯ ನೀಡಿದರು. ಮುಂದೆಯೂ ಹೆಣ್ಣು ಅಡಿಗೆ ಮನೆ'ಗೆ ಸೀಮಿತವಾದಾಗ ಕೆಲ ಬುದ್ಧಜೀವಿಗಳು ಮಹಿಳಾಪರ ನಿಂತು ಸ್ತ್ರೀವಾದ ಮಂಡಿಸಿದ್ದಾರೆ. ಅಂಥವರಲ್ಲಿ ಡಾ. ಜಯದೇವಿ ತಾಯಿ ಲಿಗಾಡೆ ಕೂಡ ಒಬ್ಬರು.

ಸ್ತ್ರೀವಾದ ಕುರಿತು ಜಯದೇವಿ ತಾಯಿ ಲಿಗಾಡೆಯವರ ನಿಲುವು ತೀರ ಭಿನ್ನವಾಗಿದೆ. ಆಧುನಿಕ ಸ್ತ್ರೀವಾದವಂತು ಪುರುಷ ದ್ವೇಷಿ ಎಂದೇ ಬಿಂಬಿಸಲಾಗುತ್ತಿದೆ. ಸ್ತ್ರೀ-ಪುರುಷ ಪ್ರತ್ಯೇಕ ಘಟಕವಾಗಿ ವಿರುದ್ಧ ದಿಕ್ಕುಗಳಾಗಿದ್ದಾರೆ. ಆದರೆ ಜಯದೇವಿ ತಾಯಿ ಲಿಗಾಡೆಯವರ ಸ್ತ್ರೀವಾದ ಪುರುಷ ವಿರೋಧಿ ಅಲ್ಲ. ಬದಲಾಗಿ ಮಹಿಳೆಯರಿಗೂ ಸಮಾನ ಅವಕಾಶ ನೀಡುವ ಪುರುಷರಷ್ಟೇ ಪಾಲುಗಾರಿಕೆ ಒಪ್ಪಿಕೊಳ್ಳುವ ಸ್ತ್ರೀವಾದ ಮಾತ್ರ ಸ್ವಸ್ಥ ಸಮಾಜಕ್ಕೆ ಬುನಾದಿ ಎಂಬುದು ಅರಿತಿದ್ದರು. ಈ ಹಿನ್ನಲೆಯಲ್ಲಿ ಮಹಿಳಾ ಜಾಗೃತಿ ರೂಪಿಸಿದರು. ಮಹಿಳೆಗೆ ಶಿಕ್ಷಣ ನೀಡುವುದು ಅವರ ಮೊದಲ ಅದ್ಯತೆಯ ವಿಷಯವಾಗಿತ್ತು. ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷಿಯ ಭಾಷಣ ಹಲವಾರು ಜನರಿಗೆ ಸ್ಫ್ಫೂತರ್ಿಯಾಯಿತು.

ನಿರಾಶ್ರಿತರಿಗೆ ಆಶ್ರಯ : ಇಡೀ ದೇಶ ಸ್ವಾತಂತ್ರ್ಯವಾದರೂ ಹೈದ್ರಾಬಾದ ಕನರ್ಾಟಕ ಮಾತ್ರ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ವಾಸ್ತವವಾಗಿ ದೂರದೃಷ್ಟಿಯುಳ್ಳ ನಿಜಾಮ ಅಭಿವೃದ್ಧಿಪರ ಚಿಂತಕನಾಗಿದ್ದ. ಆದರೆ ಸ್ವಾತಂತ್ರ್ಯ ಬಿಟ್ಟುಕೊಡುವಲ್ಲಿ ವಿಫಲನಾಗಿ ರಜಾಕಾರ ಎಂಬ ಸಂಘಟನೆ ಮೂಲಕ ಆಡಳಿತ ನಡೆಸಲು ಮುಂದಾದ. ಅದು ರಜಾಕಾರ 'ಹಾವಳಿ' ರೂಪ ತಾಳಿ ಉಗ್ರವಾದ ದಮನಕಾರಿ ಅಡಳಿತಕ್ಕೆ ಇಳಿದಾಗ ಜನ ರೋಷಿ ಹೋಗಿ, ಹೆದರಿ ಸೋಲಾಪೂರಕ್ಕೆ ವಲಸೆ ಹೋದರು. ಅಲ್ಲಿ ಡಾ. ಜಯದೇವಿ ತಾಯಿ ಲಿಗಾಡೆಯವರು ಉದಾರ ಆಶ್ರಯ ನೀಡಿ ವಾತ್ಸಲ್ಯದ ಧಾರೆಯೆರೆದರು. ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ  ನೀಡಿ ಅನ್ನ-ಬಟ್ಟೆ-ಹೊದಿಕೆಗಳನ್ನು ಪೂರೈಸಿದರು. ಇದರಲ್ಲಿ ವಯೋಭೇದ, ಲಿಂಗಭೇದ, ಜಾತಿಭೇದವಿಲ್ಲದೆ ಎಲ್ಲಾ ಕುಲ-ಕುಸುಬಿನ ಜನರಿದ್ದರು. ಅಬಾಲ ವೃದ್ಧರು ಮಹಿಳೆಯವರು, ಪುರುಷರು ಸೇರಿದ್ದರು. ಕೆಲ ಗಭರ್ಿಣಿಯರು ಅದರಲ್ಲಿದ್ದಾಗ ತಾಯಿಯವರು ಕೆಲವರ ಬಾಣಂತನ ಮಾಡಿ ತಾಯ್ತನ ಮೆರೆದರು. ಇದೇ ಸಂದರ್ಭಕ್ಕೆ ಭಾಲ್ಕಿ ಹೀರೆಮಠದ ಡಾ.ಚನ್ನಬಸವ ಪಟ್ಟದ್ದೇವರು ಸಹ ತಮ್ಮ ಕನ್ನಡ ಶಾಲೆಮಕ್ಕಳನ್ನು ಸೋಲಾಪೂರಕ್ಕೆ ಕಳುಹಿಸಿದರು. ಹೀಗೆ ಬಂದವರಿಗೆಲ್ಲಾ ಜಯದೇವಿ ತಾಯಿಯವರು ಆಶ್ರಯ ನೀಡಿದರು. ನೆನೆದ ಕವಿಯೊಬ್ಬರು

ಹೇಗೆ ತೀರಿಸಬೇಕು ತಾಯಿ 
ನಿನ್ನ ಋಣವ ಒಟ್ಟು 
ನೆನೆವೆವು ಹಡೆದ ಮಕ್ಕಳನೆ
ನಿನ್ನ ಹೆಸರಿಟ್ಟು  

ಎಂದು ಮನದುಂಬಿ ನುಡಿದರು. ಬಹುಶಃ ಉಪಕಾರ ಸ್ಮರಣೆಗೆ ಇದಕ್ಕಿಂತ ದೊಡ್ಡ ಮಾತಿನ ಅಗತ್ಯವಿಲ್ಲ.
ದಲಿತಪರ ಕಾಳಜಿ : 19ನೇ ಶತಮಾನ ದಲಿತರ 'ಅಭಿವೃದ್ಧಿಪರ' ಚಿಂತನೆಯ ಕಾಲ, ಚಳವಳಿಯ ಕಾಲವೆಂದು ಹೇಳಬಹುದು. ಆ ಕಾಲದಲ್ಲಿ ಫುಲೆ, ಪೇರಿಯಾರ, ನಾರಾಯಣಗುರು ಮೊದಲಾದವರು ದಲಿತರನ್ನು ಮೇಲೆತ್ತುವ ಆಂದೋಲನ ಪ್ರಾರಂಭಿಸಿದರು. ನಿರ್ಲಕ್ಷ್ಯಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದರು. ಅದೇ ಕೆಲಸವನ್ನು ಸೋಲಾಪೂರದಲ್ಲಿ ಡಾ. ಜಯದೇವಿ ತಾಯಿ ಲಿಗಾಡೆಯವರು ಯಾವುದೇ ಸದ್ದು-ಗದ್ದಲವಿಲ್ಲದೆ ಆರಂಭಿಸಿದ್ದು, ಅವರ ದಲಿತಪರ ಕಾಳಜಿ ತೋರಿಸುತ್ತದೆ. ಜಯದೇವಿ ತಾಯಿಯವರು ಸೋಲಾಪೂರದ ಬಾರಿ, ಹರಿಜನಕೇರಿ, ಹರಿಜನ ಬೋಡರ್ುಗಳಿಗೆ ನೆರವು ನೀಡಿದ್ದಾರೆ. ಶಿಕ್ಷಣ, ಸಂಘಟನೆ ಸ್ವಾಭಿಮಾನ ಹೋರಾಟವೆಂಬುದು ಅಂಬೇಡ್ಕರವರ ಘೋಷಣೆಯಾಗಿದ್ದರೆ, ಶಿಸ್ತು, ಸ್ವಚ್ಛತೆ, ಶಿಕ್ಷಣದಿಂದ ಮಾತ್ರ ದಲಿತರು ಮುಖ್ಯ ವಾಹಿನಿಗೆ ಬರಬಲ್ಲರೆಂಬುದು ಲಿಗಾಡೆಯವರ ಘೋಷಣೆ. ಇವರ ದಲಿತ ಪರ ಚಟುವಟಿಕೆಗಳನ್ನು ಗಮನಿಸಿದ ಇಳಿಕಲ್ಲಿನ ಮಹಾಂತಸ್ವಾಮಿಗಳು ಮೆಚ್ಚುಗೆ ಮಾತನಾಡಿರಿವುದು ಗಮನಾರ್ಹ.
ಸರಳತೆ : ವಸ್ತು ವ್ಯಾವೋಹದ ಆಧುನಿಕ ಜನರ ಮಧ್ಯ ಜಯದೇವಿ ತಾಯಿಯವರು ಶ್ರೀಮಂತಿಕೆಯಿದ್ದಾಗಲೂ ವಸ್ತು ನಿಮರ್ೋಹಿಗಳಾತದ್ದರು. ಆಗರ್ಭಶ್ರೀಮಂತರಾಗಿದ್ದರೂ ಬಂಗಾರದ ಒಡವೆಗಳನ್ನು ಹೊಂದಿರದೆ ಕೈ-ಕೊರಳಲ್ಲಿ ರುದ್ರಾಕ್ಷಿ ಸರ ಧರಿಸಿದ್ದರು.
ಅವರಲ್ಲಿ ಸಂಗ್ರಹ ರೂಪದ ಹಣ ಕೂಡ ಇರುತ್ತಿರಲಿಲ್ಲ. ಕಲ್ಯಾಣದಿಂದ ಸೋಲಾಪೂರ. ಮುಂಬೈ ಹೀಗೆ ಊರಿಂದೂರಿಗೆ ಹೋದಾಗ ಟಿಕೇಟು ತೆಗಿಸಿ ಆಟೋಗೆಂದು ಹಣ ನೀಡಿದರೆ, ಬಡವರು, ಭಿಕ್ಷುಕರು ಎದುರಾಗಿ ಭಿಕ್ಷೆ ಕೇಳಿದಾಗ ಇದ್ದ ಎಲ್ಲ ಹಣ ನೀಡಿ, ಬರಿಗೈಲಿ ಹೋಗಿ ಆಟೋದವನಿಗೆ ಮನೆ ಮುಂದೆ ನಿಲ್ಲಿಸಿ ಮನೆಯವರಿಂದ ಹಣ ಪಡೆದು ಕೊಟ್ಟ ಉದಾಹರಣೆಗೆ ಕೊರತೆಯಿಲ್ಲ. ಸರಳತೆ, ದಾಸೋಹ ಭಾವ ಅಹಂ ನಿರಸನ ಅವರ ಬದುಕಿನ ಮೂಲ ಸಿದ್ಧಾಂತವಾಗಿದ್ದವು.

ಭಾರತ ಸ್ವಾತಂತ್ರ್ಯ, ಹೈದ್ರಾಬಾದ ಕನರ್ಾಟಕದ ವಿಮೋಚನೆ ಮತ್ತು ಕನರ್ಾಟಕ ಏಕೀಕರಣ ಒಳಗೊಂಡಂತೆ ಸಮಗ್ರ ಕನರ್ಾಟಕದ ಅಭಿವೃದ್ಧಿಗೆ ದುಡಿದ ಜಯದೇವಿತಾಯಿಯವರಿಗೆ ಮಹಾರಾಷ್ಟ್ರದಲ್ಲಿ ಗುರುತಿಸುವುದಿಲ್ಲ. ಕನರ್ಾಟಕದಲ್ಲಿ ಅವರ ನೆನಪೇ ಇಲ್ಲ. ಅತ್ಯಂತ  ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಅವರಿಗೆ ಬಂದಿಲ್ಲ. ಸೋಲಾಪೂರ ಕನರ್ಾಟಕ್ಕೆ ಸೇರಬೇಕೆಂಬ ಜಯದೇವಿತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ 1980ರಲ್ಲಿ ಸೋಲಾಪೂರ ತೊರೆದು ಕನರ್ಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡ ನೆಲೆಸಿದರು. ಕನ್ನಡ ಕೋಟೆ ಎಂಬ ಪ್ರಕಾಶನ ಸಂಸ್ಥೆ ತೆರೆದು, ಕನ್ನಡಕ್ಕಾಗಿ ದುಡಿಯುತ್ತ 1986ರ ಜುಲೈ 24ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡ ನಮ್ಮ ಸಕರ್ಾರ ತೋರಿಸಲಿಲ್ಲ.

-ಡಾ. ಬಸವರಾಜ ಬಲ್ಲೂರ ಬೀದರ
ದಿನಾಂಕ:  ಮಾ. 7, 2013